By using this site, you agree to the Privacy Policy and Terms of Use.
Accept
Sampoorna Vaani NewsSampoorna Vaani NewsSampoorna Vaani News
  • Home
  • Latest
  • ರಾಜ್ಯ
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
  • ಕ್ರೀಡೆ
    • ಕ್ರಿಕೆಟ್
    • ಇತರೆ
  • ಕೃಷಿ-Agriculture
  • ಆಹಾರ
    • ಸಸ್ಯಾಹಾರಿ
    • ಮಾಂಸಾಹಾರಿ
  • ಕ್ರೈಂ
  • Court
  • epaper
  • Web Stories
  • Videos
Reading: ಏನೇನೋ ತಿಂದು ಹೊಟ್ಟೆ ಕೆಟ್ಟು ಹೋಗಿದ್ಯಾ? ಸರಿ ಆಗೋಕೆ ಈ ಟಿಪ್ಸ್​ ಫಾಲೋ ಮಾಡಿ
Share
Font ResizerAa
Font ResizerAa
Sampoorna Vaani NewsSampoorna Vaani News
  • Home
  • Latest
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
  • ಕ್ರೀಡೆ
  • ಕೃಷಿ-Agriculture
  • ಆಹಾರ
  • ಕ್ರೈಂ
  • Court
  • epaper
  • Web Stories
  • Videos
  • ಜಿಲ್ಲೆಗಳು
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • Entertainment
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
Have an existing account? Sign In
Follow US
© 2024 All Rights Reserved.
Sampoorna Vaani News > Blog > ಆರೋಗ್ಯ > ಏನೇನೋ ತಿಂದು ಹೊಟ್ಟೆ ಕೆಟ್ಟು ಹೋಗಿದ್ಯಾ? ಸರಿ ಆಗೋಕೆ ಈ ಟಿಪ್ಸ್​ ಫಾಲೋ ಮಾಡಿ
ಆರೋಗ್ಯ

ಏನೇನೋ ತಿಂದು ಹೊಟ್ಟೆ ಕೆಟ್ಟು ಹೋಗಿದ್ಯಾ? ಸರಿ ಆಗೋಕೆ ಈ ಟಿಪ್ಸ್​ ಫಾಲೋ ಮಾಡಿ

Published March 13, 2024
Share
3 Min Read
SHARE

ನಮ್ಮಲ್ಲಿ ಹಬ್ಬಗಳು ಬಂದರೆ ಸಾಕು ಅನೇಕರು ತಮ್ಮ ಫಿಟ್ನೆಸ್ ಗುರಿಗಳನ್ನು ಗಾಳಿಗೆ ತೂರಿ, ಮನೆಯಲ್ಲಿ ಮಾಡಿದಂತಹ ಎಲ್ಲಾ ಅಡುಗೆಯನ್ನು ಬಿಟ್ಟು ಪ್ರಮುಖ ಭಕ್ಷ್ಯಗಳವರೆಗೆ ಎಲ್ಲವನ್ನೂ ಸೇವಿಸುತ್ತಾರೆ (Eating) ಅನೇಕರು. ಎಷ್ಟೋ ಜನರು ಹಬ್ಬದ ದಿನ ಮಾಡಿದ ಅಡುಗೆಗಳನ್ನು ಹೊಟ್ಟೆ ತುಂಬಾ ತಿಂದು, ಆನಂತರ ‘ಅಮ್ಮಾ ಹೊಟ್ಟೆ ತುಂಬಿತು, ಜೀರ್ಣ ಆಗ್ತಾ ಇಲ್ಲ’ ಅಂತೆಲ್ಲಾ ಸಮಸ್ಯೆಗಳನ್ನು (Problems) ನಾವು ಕೇಳಿರುತ್ತೇವೆ. ಈ ನಿಟ್ಟಿನಲ್ಲಿ, ಹೈದರಾಬಾದ್‌ನ ಎಲ್‌ಬಿ ನಗರದ ಕಾಮಿನೇನಿ ಆಸ್ಪತ್ರೆಯ ಹಿರಿಯ ಜನರಲ್ ವೈದ್ಯ ಡಾ. ಹರಿ ಕಿಶನ್ ಅವರು “ಹಬ್ಬದ ಸಮಯದಲ್ಲಿ ಆಹಾರವನ್ನು ಸಂಪೂರ್ಣವಾಗಿ ಆನಂದಿಸಲು, ನಿಮ್ಮ ಜೀರ್ಣಕಾರಿ ಆರೋಗ್ಯಕ್ಕೆ ಆದ್ಯತೆ ನೀಡುವುದು ಮುಖ್ಯ. ಒಂದು ಉಪಯುಕ್ತ ಸಲಹೆ (Good Tips) ಎಂದರೆ ಸಾಕಷ್ಟು ನೀರು ಕುಡಿದು ಹೈಡ್ರೇಟೆ  (Hydrate) ಆಗಿರುವುದು ಅಂತ ಹೇಳಬಹುದು.

ಜಾಹೀರಾತು

ಹಬ್ಬದ ಕೂಟಗಳಲ್ಲಿ ಹೇರಳವಾಗಿರುವ ಮತ್ತು ಹೆಚ್ಚಾಗಿ ಉಪ್ಪುಸಹಿತ ಆಹಾರಗಳೊಂದಿಗೆ, ನಿರ್ಜಲೀಕರಣಗೊಳ್ಳುವುದು ಸುಲಭ, ಇದು ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ ಮತ್ತು ಅಸ್ವಸ್ಥತೆಗೆ ಕಾರಣವಾಗಬಹುದು. ಜೀರ್ಣಕ್ರಿಯೆಗೆ ಸಹಾಯ ಮಾಡಲು ದಿನವಿಡೀ ಸಾಕಷ್ಟು ನೀರು ಕುಡಿಯಲು ಮರೆಯದಿರಿ” ಎಂದು ಹೇಳುತ್ತಾರೆ.

ಜೀರ್ಣಕಾರಿ ಆರೋಗ್ಯಕ್ಕಾಗಿ ಆಯುರ್ವೇದ ಪರಿಹಾರಗಳು ಹೀಗಿವೆ..

ಕಪಿವಾದಲ್ಲಿ ಆರ್ ಆಂಡ್ ಡಿ ಮುಖ್ಯಸ್ಥರಾಗಿರುವ ಡಾ. ಕೃತಿ ಸೋನಿ ಅವರು “ಜೀರ್ಣಕ್ರಿಯೆಯನ್ನು ಆರೋಗ್ಯವಾಗಿರಿಸಿಕೊಳ್ಳಲು ಒಳ್ಳೆಯ ಆಹಾರ ಪದ್ಧತಿ, ಸಮಯೋಚಿತ ಊಟ ಮತ್ತು ಅತಿಯಾದ ಸೇವನೆಯಿಂದ ದೂರವಿರುವುದು ಮುಖ್ಯವಾಗುತ್ತದೆ. ಈ ಆಹಾರದ ತತ್ವಗಳಿಗೆ ಪೂರಕವಾಗಿ ಜೀವನಶೈಲಿ ಅಭ್ಯಾಸಗಳು, ಉದಾಹರಣೆಗೆ ಊಟದ ನಂತರ ವಾಕ್ ಹೋಗುವುದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ” ಎಂದು ಹೇಳುತ್ತಾರೆ.

ಕೆಲವು ಗಿಡಮೂಲಿಕೆ ಪರಿಹಾರಗಳು ಇಲ್ಲಿವೆ ನೋಡಿ

ತ್ರಿಫಲ

ಅಮಲಕಿ, ಬಿಭಿಟಕಿ ಮತ್ತು ಹರಿತಕಿ ಎಂಬ ತ್ರಿಫಲಾ ಎಲ್ಲಾ ಮೂರು ದೋಷಗಳನ್ನು ಸಮತೋಲನಗೊಳಿಸುತ್ತದೆ ಮತ್ತು ಸೌಮ್ಯ ವಿರೇಚಕವಾಗಿ ಕೆಲಸ ಮಾಡುತ್ತದೆ. 1/2 ಟೀ ಚಮಚ ತ್ರಿಫಲ ಪುಡಿಯನ್ನು ಬೆಚ್ಚಗಿನ ನೀರಿನಲ್ಲಿ ಬೆರೆಸಿ ಮಲಗುವ ಮುನ್ನ ಸೇವಿಸಬೇಕು.

ಶುಂಠಿ

ಶುಂಠಿ ಜೀರ್ಣಕ್ರಿಯೆಯನ್ನು ಹೆಚ್ಚಿಸಲು ಮತ್ತು ವಾಕರಿಕೆ ಮತ್ತು ಅಜೀರ್ಣಕ್ಕೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ತಾಜಾ ಶುಂಠಿ ಚೂರುಗಳನ್ನು ಊಟಕ್ಕೆ ಮೊದಲು ಅಗಿಯಬಹುದು ಅಥವಾ ಶುಂಠಿ ಪುಡಿಯನ್ನು ಚಹಾದಲ್ಲಿ ಸೇರಿಸಿಕೊಂಡು ಸೇವಿಸಬಹುದು.

ಜಾಹೀರಾತು

ಜೀರಿಗೆ

ಹೊಟ್ಟೆ ಉಬ್ಬುವುದು ಮತ್ತು ಅಜೀರ್ಣದಂತಹ ಜೀರ್ಣಕಾರಿ ಅಸ್ವಸ್ಥತೆಗಳಿಗೆ ಚಿಕಿತ್ಸೆ ನೀಡಲು ಸಾಮಾನ್ಯವಾಗಿ ಇದನ್ನು ಬಳಸಲಾಗುತ್ತದೆ. ಜೀರಿಗೆಯನ್ನು ನೀರಿನಲ್ಲಿ ಹಾಕಿಕೊಂಡು ಕುದಿಸಿ ಜೀರಿಗೆ ಚಹಾವನ್ನು ತಯಾರಿಸಬಹುದು.

ಇದನ್ನೂ ಓದಿ:
ನೀವು ನಿಮ್ಮ ಗುರಿಯನ್ನು ತಲುಪಬೇಕೆಂದರೆ, ಈ ಅಭ್ಯಾಸಗಳಿಗೆ ಹೇಳಿ ಗುಡ್​ ಬಾಯ್

ಸೋಂಪು

ಹೊಟ್ಟೆಯಲ್ಲಿ ಗ್ಯಾಸ್ ಆಗುವುದು, ಹೊಟ್ಟೆ ಸೆಳೆತ ಮತ್ತು ಉಬ್ಬುವುದು ಚಿಕಿತ್ಸೆಯಲ್ಲಿ ಸಹಾಯಕವಾಗಿದೆ. ಫೆನ್ನೆಲ್ ಬೀಜಗಳನ್ನು ಊಟದ ನಂತರ ಅಗಿಯಬಹುದು ಅಥವಾ ಇದರಿಂದ ಚಹಾವನ್ನು ಸಹ ತಯಾರಿಸಿಕೊಳ್ಳಬಹುದು.

ಪುದೀನಾ

ಪುದೀನಾ ದೇಹವನ್ನು ತಂಪಾಗಿಸುವ ಪರಿಣಾಮವನ್ನು ಹೊಂದಿದೆ ಮತ್ತು ಅಜೀರ್ಣವನ್ನು ನಿವಾರಿಸಲು ಸಹ ಇದು ಸಹಾಯ ಮಾಡುತ್ತದೆ. ಪುದೀನಾ ಚಹಾವನ್ನು ಊಟದ ನಂತರ ಸೇವಿಸಬಹುದು.

ಜಾಹೀರಾತು

ಕೊತ್ತಂಬರಿ

ಅಜೀರ್ಣ ಮತ್ತು ಹೊಟ್ಟೆಯ ತೊಂದರೆಗೆ ಚಿಕಿತ್ಸೆ ನೀಡಲು ಇದನ್ನು ಬಳಸಲಾಗುತ್ತದೆ. ಕೊತ್ತಂಬರಿ ಬೀಜಗಳನ್ನು ಬಳಸಿಕೊಂಡು ಚಹಾ ಮಾಡಿಕೊಂಡು ಕುಡಿಯಬಹುದು ಅಥವಾ ಊಟದಲ್ಲಿ ಮಸಾಲೆಯಾಗಿ ಸಹ ಬಳಸಬಹುದು.

ಲೈಕೋರೈಸ್

ಇದು ಜೀರ್ಣಾಂಗವ್ಯೂಹದ ಸಮಸ್ಯೆಗಳನ್ನು ಶಮನಗೊಳಿಸಲು ಸಹಾಯ ಮಾಡುತ್ತದೆ. ಸ್ವಲ್ಪ ಪ್ರಮಾಣದ ಲೈಕೋರೈಸ್ ರೂಟ್ ಅನ್ನು ಅಗಿಯಬಹುದು ಅಥವಾ ಇದರಿಂದ ಚಹಾ ಸಹ ಮಾಡಿಕೊಂಡು ಕುಡಿಯಬಹುದು.

ಸೀರೆಯಲ್ಲಿ ಚಂದನದ ಗೊಂಬೆಯಂತೆ ಕಂಡ ಪ್ರಿಯಾಂಕಾ!


ಸೀರೆಯಲ್ಲಿ ಚಂದನದ ಗೊಂಬೆಯಂತೆ ಕಂಡ ಪ್ರಿಯಾಂಕಾ!

ಇನ್ನೂ ಹಬ್ಬದ ನಂತರ ಮತ್ತೆ ಫಿಟ್ನೆಸ್ ಕಾಪಾಡಿಕೊಳ್ಳಲು ಸಮಯಕ್ಕೆ ಸರಿಯಾಗಿ ಆಹಾರ ಸೇವಿಸುವುದು, ಹೈಡ್ರೇಟ್ ಆಗಿರುವುದು, ವ್ಯಾಯಾಮ ಮಾಡುವುದು ಮತ್ತು ಒಳ್ಳೆಯ ನಿದ್ರೆ ಮಾಡುವುದು ಸೂಕ್ತ ಅಂತಾರೆ ತಜ್ಞರು.

ಜಾಹೀರಾತು

ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ

You Might Also Like

Winter Seasonನಲ್ಲಿ ಈ ಹಣ್ಣನ್ನು ತಿನ್ನಲೇಬೇಡಿ, ರೀಸನ್​ ಇಲ್ಲಿದೆ ನೋಡಿ

ಪೋಷಕರೇ ನಿಮ್ಮ ಮಗುವಿಗೆ ಜ್ವರವಿದ್ದರೆ ಈ ಎರಡು ತಪ್ಪುಗಳನ್ನು ಎಂದಿಗೂ ಮಾಡಬೇಡಿ!

ಬೇಗ ತೂಕ ಇಳಿಬೇಕಾ? ಹಾಗಾದ್ರೆ ದಿನ ಬೆಳಿಗ್ಗೆ ಎದ್ದ ತಕ್ಷಣ ಈ ಒಂದು ಕೆಲಸ ಮಾಡಿ weight loss tips using betel leaf – News18 ಕನ್ನಡ

Lung Damage: ಕೋವಿಡ್‌ ನಂತರ ಭಾರತೀಯರಲ್ಲಿ ಕಾಡುತ್ತಿದೆ ಶ್ವಾಸಕೋಶ ಸಮಸ್ಯೆ! ನಿಮ್ಮ ಲಂಗ್ಸ್​ ಕಾಪಾಡಿಕೊಳ್ಳಲು ಇಲ್ಲಿದೆ ಸಲಹೆ

ಅರಿಶಿನದೊಂದಿಗೆ ಈ ಆಹಾರಗಳನ್ನು ತಿಂದು ನೋಡಿ, ಯಾವ ಕಾಯಿಲೆಯೂ ಹತ್ತಿರ ಬರೋದಿಲ್ಲ!

Share This Article
Facebook Copy Link Print
Previous Article ಈ ಆಹಾರವನ್ನು ತಿಂದರೆ ಸಾಕು, ಯಾವ ರೋಗನೂ ಹತ್ತಿರ ಬರೋದಿಲ್ಲ!
Next Article ಮಲಗುವ ಮುನ್ನ ಈ ಕೆಲಸಗಳನ್ನು ಮಾಡಿದ್ರೆ ಸಾಕು, ಕಣ್ತುಂಬ ನಿದ್ದೆ ಬರುತ್ತೆ!
Leave a Comment Leave a Comment

Leave a Reply Cancel reply

Your email address will not be published. Required fields are marked *

Stay Connected

235.3kFollowersLike
69.1kFollowersFollow
11.6kFollowersPin
56.4kFollowersFollow
136kSubscribersSubscribe
4.4kFollowersFollow
Join Whatsapp
Ad image
Ad imageAd image

Latest News

ರಾಜ್ಯ ರಾಜಕೀಯದಲ್ಲಿ ಮತ್ತೆ ರೆಸಾರ್ಟ್‌ ರಾಜಕೀಯ..?!
ರಾಜ್ಯ-Karnataka
February 11, 2026
ಇತ್ತ ಬಜೆಟ್‌ ತಯಾರಿಯಲ್ಲಿ ಸಿಎಂ ಬ್ಯುಸಿ, ಅತ್ತ ದೆಹಲಿಯಲ್ಲಿ ಸಿಎಂ ಕುರ್ಚಿಗಾಗಿ ಡಿಸಿಎಂ ರಣತಂತ್ರ
ರಾಜಕೀಯ | Politics
February 11, 2026
ಗನ್ ಹಿಡಿದು ಡಾನ್ಸ್ ಮಾಡಿದ ಕಾಂಗ್ರೆಸ್ ಮುಖಂಡನ ವಿರುದ್ಧ ಎಫ್‌ಐಆರ್
ರಾಜ್ಯ-Karnataka
February 11, 2026
ದೇಶದ ವಿವಿಧ ಭಾಗಗಳಲ್ಲಿ ಮಕ್ಕಳು ನಾಪತ್ತೆ ಪ್ರಕರಣ : ತನಿಖೆಗೆ ಸುಪ್ರೀಂ ಸೂಚನೆ
ರಾಷ್ಟ್ರೀಯ-National
February 11, 2026
https://sampoornavaaninews.in/wp-content/uploads/2024/10/WhatsApp-Video-2024-10-04-at-00.03.25_2025f30f.mp4
Follow US
Copyright © 2024 SampoornaVaaniNews. All Rights Reserved | Designed and Developed By Technoy Global Solutions
Welcome Back!

Sign in to your account

Username or Email Address
Password

Lost your password?

Not a member? Sign Up