ಬೆಳಗಾವಿ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಆಪ್ತ ಅರವಿಂದ ಪಾಟೀಲ ಸೇರಿ ನಾಲ್ವರ ಮೇಲೆ ಹಲ್ಲೆ ನಡೆಸಿದ ಘಟನೆ ಬೆಳಗಾವಿ ತಾಲೂಕಿನ ಯಳ್ಳೂರ ಬಳಿಯ ಸುಳಗಾ ಗ್ರಾಮದಲ್ಲಿ ನಡೆದಿದೆ. 20 ಗುಂಟೆ ಜಾಗ ವಿವಾದ, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಆಪ್ತನ ಮೇಲೆ 15ಕ್ಕೂ ಅಧಿಕ ದುಷ್ಕರ್ಮಿಗಳು ತಲ್ವಾರ, ರಾಡ್ನಿಂದ ಏಕಾಏಕಿ ಮನೆಗೆ ನುಗ್ಗಿ ಹಲ್ಲೆ ಮಾಡಿದ್ದಾರೆಂಬ ಆರೋಪ ಮಾಡಲಾಗಿದೆ.
ಅರವಿಂದ ಪಾಟೀಲ ಸ್ನೇಹಿತರಾದ ಮಹೇಶ ಬಸ್ತವಾಡ್ಕರ್, ಸುಭಾಷ ಕಂಗ್ರಾಳ್ಕರ್, ಸಂದೀಪ ಜಾಧವ್ಗೂ ಗಾಯ. ಘಟನೆಯಲ್ಲಿ ಗಾಯಗೊಂಡವರಿಗೆ ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ
ಬೆಳಗಾವಿ ತಾಲೂಕಿನ ಯಳ್ಳೂರು ಗ್ರಾಮದಲ್ಲಿರುವ 20 ಗುಂಟೆ ಜಾಗದ ವಿಚಾರವಾಗಿ ಗಲಾಟೆ ನಡೆದಿದ್ದು ಕೆಲ ದಿನಗಳ ಹಿಂದಷ್ಟೇ ಡಿಸಿ, ಎಸಿ ಕೋರ್ಟ್ ಅರವಿಂದ ಪಾಟೀಲ ಪರ ಆದೇಶ ಹೊರಡಿಸಿತ್ತು.
ಡಿಸಿ, ಎಸಿ ಕೋರ್ಟ್ ಆದೇಶಕ್ಕೆ ತಡೆ ನೀಡುವಂತೆ ಇನ್ನೊಂದು ಗುಂಪಿನಿಂದ ಕೋರ್ಟ್ಗೆ ಮೊರೆ ಹೋಗಿದ್ದರು. ಡಿಸಿ ಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ಸಿಗದಿದ್ದಾಗ ಅರವಿಂದ ಮೇಲೆ ಹಲ್ಲೆಗೆ ಯತ್ನ ನಡೆಸಲಾಗಿದೆ ಎಂದು ಆರೋಪ ಮಾಡಿದ್ದಾರೆ.ಮನೆ ಮುಂದೆ ಕುಳಿತಿದ್ದ ಅರವಿಂದ ಜೊತೆಗೆ ಕೆಲ ಯುವಕರಿಂದ ವಾಗ್ವಾದ ನಡೆದಿದ್ದು ಬಳಿಕ ಏಕಾಏಕಿ 15 ಜನರ ಗುಂಪು ಮಾರಕಾಸ್ತ್ರ ಸಮೇತ ಆಗಮಿಸಿ ಅರವಿಂದ ಮೇಲೆ ಹಲ್ಲೆ ನಡೆಸಲಾಗಿದೆ.
ಈ ವೇಳೆ ಗ್ರಾಮಸ್ಥರು ಸೇರ್ತಿದ್ದಂತೆ ದುಷ್ಕರ್ಮಿಗಳ ಗುಂಪು ಬೈಕ್ ಸ್ಥಳದಲ್ಲೇ ಬಿಟ್ಟು ಕಾಲ್ಕಿತ್ತಿದ್ದಾರೆ. ಘಟನೆ ವೇಳೆ ಇಬ್ಬರು ದುಷ್ಕರ್ಮಿಗಳಿಗೂ ಗಾಯಗಳಾಗಿದ್ದು , ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಬೆಳಗಾವಿ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದರು.

