ಕುಣಿಗಲ್ : ತಾಲೂಕು ಆಡಳಿತ ಮತ್ತು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ತಾಲೂಕು ಕಚೇರಿಯಲ್ಲಿ ಹಸಿರು ಕ್ರಾಂತಿಯ ಹರಿಕಾರ ರಾಷ್ಟ್ರ ನಾಯಕ ಹಾಗೂ ಭಾರತದ ಮಾಜಿ ಉಪ ಪ್ರಧಾನಮಂತ್ರಿಗಳಾದ “ಡಾಕ್ಟರ್ ಬಾಬು ಜಗಜೀವನ್ ರಾಮ್ “ರವರ ಜಯಂತಿಯನ್ನು ಸರಳವಾಗಿ ಆಚರಿಸಿದರು,,
ದೇಶಾದ್ಯಂತ ‘ ಬಾಬೂಜಿ ‘ಎಂದೆ ಕರೆಯಲ್ಪಡುವ ಜಗಜೀವನರಾಂ ಧೀಮಂತ ರಾಷ್ಟ್ರೀಯ ನಾಯಕ, ಸ್ವಾತಂತ್ರ್ಯ ಮತ್ತು ಸಾಮಾಜಿಕ ನ್ಯಾಯ ಹೋರಾಟಗಾರ ಹಾಗೂ ಹಸಿರು ಕ್ರಾಂತಿಯ ಹರಿಕಾರ, ದೇಶದಲ್ಲಿ ಸಮರ್ಪಕವಾಗಿ ಎಲ್ಲರಿಗೂ ಆಹಾರ ದೊರೆಯದೆ ಇದ್ದಾಗ ಕೇಂದ್ರದಲ್ಲಿ ಕೃಷಿ ಸಚಿವರಾಗಿ ಖುಷಿಯಲ್ಲಿ ಗಣನೀಯ ಬದಲಾವಣೆ ತಂದರು ಹಸಿರು ಕ್ರಾಂತಿ ರೂಪಿಸಿ ರೈತರನ್ನು ಆರ್ಥಿಕವಾಗಿ ಸ್ವಾವಲಂಬಿಯಾಗಿಸಿದರು ಆಹಾರ ಉತ್ಪಾದನೆಯನ್ನು ಹೆಚ್ಚಿಸಿದರು,,
ಬಾಬು ಜಗಜೀವನ್ ರಾಮ್ ರವರ ಭಾವಚಿತ್ರಕ್ಕೆ ಪುಷ್ಪ ನಮನಗಳನ್ನು ಸಲ್ಲಿಸುವ ಮೂಲಕ ತಹಸೀಲ್ದಾರ್ ರಶ್ಮಿ ಯು ರವರು, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಾದ ಶಿವಲಿಂಗಯ್ಯ, ಹಾಗೂ ಸಿಬ್ಬಂದಿಗಳು, ವಿಜಯಕುಮಾರ್ ವಾರ್ಡನ್, ಪುರಸಭಾ ಉಪಾಧ್ಯಕ್ಷರು ಮಲ್ಲಿಪಾಳ್ಯ ಶ್ರೀನಿವಾಸ್, ವಿ ಶಿವಶಂಕರ್, ರಾಮಚಂದ್ರಯ್ಯ, ಡಿ ಸಿ ವರದರಾಜು, ದಲಿತ ಸೇನೆ ಉಪಾಧ್ಯಕ್ಷರು ಆರ್ಎನ್ ಹಟ್ಟಿ ರಂಗಯ್ಯ, ವಸಂತ ಕುಮಾರ್, ಅಮೃತ ಪರ್ವ ಗೋವಿಂದರಾಜು, ಕಾರ್ಮಿಕ ನಿರೀಕ್ಷಕರು ಪುರುಷೋತ್ತಮ್ ಎಂ, ವರದರಾಜು, ಸಿದ್ದರಾಜು, ಹಾಗೂ ಉಪಸ್ಥಿತರಿದ್ದರು,,,,
ವರದಿ : ನರಸಿಂಹರಾಜು

