ರಾಮಲಿಂಗ ರೆಡ್ಡಿಯವರಿಂದ ನೂತನ ಬಸ್ ನಿಲ್ದಾಣ ಲೋಕಾರ್ಪಣೆ
ಸೂಕ್ತವಾದ ಸ್ಥಳ ದೊರೆತರೆ ಬಸ್ ಡಿಪೋ ಮಾಡುವ ಭರವಸೆ
ಹೆಚ್ಚುವರಿ ಬಸ್ಸುಗಳು ವ್ಯವಸ್ಥೆ ಮಾಡಲಾಗುವುದು ಎಂದ ಸಚಿವರು
ಈ ಸಂದರ್ಭದಲ್ಲಿ ಜಿ ಹಂಪಯ್ಯ ನಾಯಕ್ ಭಾಗಿ
ಸಿರವಾರ ಪಟ್ಟಣದ ನೂತನ ಬಸ್ ನಿಲ್ದಾಣ ಕೇಂದ್ರವನ್ನು ಸಾರಿಗೆ ಸಚಿವರಾದ ರಾಮಲಿಂಗ ರೆಡ್ಡಿ ಲೋಕಾರ್ಪಣೆ ಮಾಡಿ ಮಾತನಾಡಿದರು ಸಚಿವರು ಪ್ರಯಾಣಿಕರ ಅನುಕೂಲಕ್ಕಾಗಿ ಸಿರವಾರ ಪಟ್ಟಣದಲ್ಲಿ ಬಸ್ ನಿಲ್ದಾಣವನ್ನು ನಿರ್ಮಿಸಿ ಇದೀಗ ಲೋಕಾರ್ಪಣೆ ಮಾಡಲಾಗಿದ್ದು ‘ ಮುಂದಿನ ದಿನಗಳಲ್ಲಿ ಸೂಕ್ತವಾದ ಸ್ಥಳ ದೊರೆತರೆ ಬಸ್ ಡಿಪೋ ಮಂಜೂರು ಹಾಗೂ ಹೆಚ್ಚುವರಿ ಬಸ್ಸುಗಳು ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು , ಕಲ್ಯಾಣ ಕರ್ನಾಟಕ ಭಾಗಕ್ಕೆ 700 ಬಸ್ಸುಗಳು ನೀಡಲಾಗಿದೆ.
ಶಕ್ತಿ ಯೋಜನೆಯಿಂದ ರಾಜ್ಯಾದ್ಯಂತ ಮಹಿಳೆಯರ ಸಂಚಾರ ಅಧಿಕವಾಗಿದ್ದರಿಂದ ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚುವರಿ ಬಸ್ಸುಗಳನ್ನು ಖರೀದಿಸಲು ಇಲಾಖೆಯಿಂದ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿ ಹಂಪಯ್ಯ ನಾಯಕ್, ಕರ್ನಾಟಕ ಸಾರಿಗೆ ನಿಗಮ ವ್ಯವಸ್ಥಾಪಕ ನಿರ್ದೇಶಕ ಎಂ ರಾಚಯ್ಯ, ಪಟ್ಟಣ ಪಂಚಾಯಿತಿ ಅಧ್ಯಕ್ಷ ವೈ. ಭೂಪನಗೌಡ, ಉಪಾಧ್ಯಕ್ಷ ಲಕ್ಷ್ಮಿ ಆದಪ್ಪ, ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಬಸವರಾಜ್ ಪಾಟೀಲ್ ಇಟಿಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚುಕ್ಕಿ ಶಿವಕುಮಾರ್ ಸಾಹುಕಾರ್, ತಾಸಿಲ್ದಾರ್ ರವಿ ಎಸ್ ಅಂಗಡಿ, ತಾಲೂಕು ಪಂಚಾಯಿತಿ ಇ ಓ ಶಶಿಧರ್ ಸ್ವಾಮಿ, ಬ್ರಿಜೆಷ್ ಪಾಟೀಲ್, ರಮೇಶ್ ದರ್ಶನ್ ಕರ್, ಇನ್ನಿತರರು ಈ ಸಂದರ್ಭದಲ್ಲಿ ಉಪಸಿತರಿದ್ದರು
ಅರುಣ್ ಕುಮಾರ್

