ಕುಣಿಗಲ್ : – ಪಟ್ಟಣದ ನೂತನ ಸರ್ಕಾರಿ ಆಸ್ಪತ್ರೆ ಕಾಮಗಾರಿ ಮಾಡುತ್ತಿರುವ ಕಾರ್ಮಿಕರು ಸರ್ಕಾರಿ ಆಸ್ಪತ್ರೆಯ ಶಿಕ್ಷಕರ ಭವನದಲ್ಲಿ ವಾಸಿಸುತ್ತಿದ್ದು, ಹರಿಸುವ ಕೊಳಚೆ ನೀರು ಸರಾಗವಾಗಿ ಹರಿಯಲು ವ್ಯವಸ್ಥೆ ಇಲ್ಲದೆ, ಆಸ್ಪತ್ರೆ ಪ್ರವೇಶ ದ್ವಾರದಲ್ಲಿ ಹರಿಯುತ್ತಿದ್ದು ವೈದ್ಯರು ರೋಗಿಗಳಿಗೆ ಕಿರಿಕಿರಿಯಾಗುತ್ತಿದೆ, ಎಂದು ರೋಗಿಗಳು ಸಾರ್ವಜನಿಕರು ಒತ್ತಾಯಿಸಿದ್ದಾರೆ,,
ಕೊಳಚೆ ನೀರು ದಾಟಿಕೊಂಡೆ ಹೋಗಬೇಕು : ಆಸ್ಪತ್ರೆ ಪ್ರವೇಶಿಸಬೇಕಾದರೆ ಈ ಕೊಳಚೆ ನೀರನ್ನು ದಾಟಿಕೊಂಡೆ ಹೋಗಬೇಕು, ಹೀಗಾಗಿ ಆಸ್ಪತ್ರೆಗೆ ಬರುವ ವಾಹನಗಳಿಂದಾಗಿ ಅಲ್ಲಿರುವ ಭದ್ರತೆ ಸಿಬ್ಬಂದಿ ಹಾಗೂ ಸಾರ್ವಜನಿಕರಿಗೆ ಕೊಳಚೆ ನೀರು ಎರಚಿದಂತಾಗುತ್ತದೆ, ಜೊತೆಗೆ ದುರ್ನಾತ ಹಾಗೂ ಸೊಳ್ಳೆಗಳ ಉತ್ಪತ್ತಿಯಾಗುವ ಕಾರಣವಾಗಿ ರೂಪಗೊಂಡಿದೆ,, ಇದರಿಂದಾಗಿ ಹಲವು ಬಾರಿ ವೈದ್ಯರೇ ಅನಾರೋಗ್ಯಕ್ಕೆ ತುತ್ತಾಗಿರುವ ಉದಾಹರಣೆಗಳಿವೆ,,
ಪ್ರಯೋಜನವಾಗದ ಮನವಿ : ಇಲ್ಲಿನ ಸಮಸ್ಯೆ ಬಗ್ಗೆ ಪುರಸಭೆ ಅಧಿಕಾರಿಗಳಿಗೆ ತಿಳಿಸಿದ್ದರೂ ಕೂಡ ಸ್ಥಳ ಪರಿಶೀಲನೆ ನಡೆಸಿದ್ದಾರೆ, ಆದರೆ ಇದರ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ,,
ಪಕ್ಕದಲ್ಲೇ ಟ್ಯಾಕ್ಸಿ ಸ್ಟಾಂಡ್ ಕೂಡ ಇದ್ದು ಹಲವಾರು ಚಾಲಕರು ಅದೇ ಸ್ಥಳದಲ್ಲಿ ಪ್ರತಿನಿತ್ಯ ವಾಹನಗಳನ್ನು ನಿಲ್ಲಿಸಿ ಜೀವನ ನಡೆಸುತ್ತಿದ್ದಾರೆ, ಟ್ಯಾಕ್ಸಿ ಸ್ಟಾಂಡ್ ನಿಂದ ಕುಣಿಗಲ್ ಪೊಲೀಸ್ ಠಾಣೆ ವರೆಗೂ ಕೊಳಚೆ ನೀರು ಹರಿಯುತ್ತಿದ್ದರು,ಯಾವುದೇ ರೀತಿ ಗಮನಹರಿಸುತ್ತಿಲ್ಲ, ಆದರೆ ಸಂಬಂಧಪಟ್ಟವರು ಸರಿಪಡಿಸಲು ನಿರ್ಲಕ್ಷ್ಯ ವಹಿಸಿದ್ದು ಸಮಸ್ಯೆ ಹೆಚ್ಚಾಗಿದೆ, ಕೊಳಚೆ ನೀರಿನ ಸಮಸ್ಯೆಯನ್ನು ಬಗೆಹರಿಸುವುದರಲ್ಲಿ ಪುರಸಭೆಯವರು ಅಸಡ್ಡೆ ತೋರುತ್ತಿದ್ದಾರೆ ಎಂದು ನಾಗರಿಕರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ,,
ಕೊಳಚೆ ನೀರು ಸುಮಾರು ಆರು ತಿಂಗಳುಗಳಿಂದ ಆಸ್ಪತ್ರೆ ಪ್ರವೇಶ ದ್ವಾರದವರೆಗೆ ಹರಿದು ಬರುತ್ತಿದೆ, ಮಳೆ ಬಂದರೆ ಸಂಚರಿಸಲು ಅರಸಹಾಸ ಮಾಡಬೇಕು, ವೈದ್ಯರು ಭದ್ರತಾ ಸಿಬ್ಬಂದಿ ಸೊಳ್ಳೆಗಳ ಕಡಿತದಿಂದ, ಡೆಂಗ್ಯೂ ಅಂತಹ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ, ಪರಿಸರ ಇಂಜಿನಿಯರ್ “ಚಂದ್ರಶೇಖರ್” ಪಟ್ಟಣದ ಸ್ವಚ್ಛತೆ ಕಾಪಾಡುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ನಿಗದಿತ ಸಮಯಕ್ಕೂ ಕರ್ತವ್ಯಕ್ಕೆ ಹಾಜರಾಗುತ್ತಿಲ್ಲ,ನಾಗರೀಕರ ಫೋನ್ ಕರೆಗೆ ಯಾವುದೇ ರೀತಿ ಸ್ಪಂದಿಸುವ ಕಾರ್ಯದಲ್ಲಿ ಅಸಡ್ಡೆತನ ತೋರುತ್ತಿದ್ದಾರೆ, ಪಟ್ಟಣದ ಸ್ವಚ್ಛತೆಯ ಬಗ್ಗೆ ಹೆಚ್ಚಿನ ಗಮನ ಹರಿಸಿ ಸಮಸ್ಯೆ ಪರಿಹರಿಸಬೇಕು ಇಲ್ಲದಿದ್ದರೆ ಪುರಸಭೆಯ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದಿದ್ದಾರೆ,,
ವರದಿ : ನರಸಿಂಹರಾಜು

