1.ಹಿರೇಗುಂಜಳ ಗ್ರಾಮದವರ ಗೋಳು ಕೇಳುವವರಿಲ್ಲ
ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಹಿರೇಗುಂಜಳ ಗ್ರಾಮದಲ್ಲಿ ಕುಡಿಯುವ ನೀರಿನ ಕೆರೆ ಗಬ್ಬೆದ್ದು ನಾರುತ್ತಿದ್ದು ಅಧಿಕಾರಿಗಳು ಕಂಡೂ ಕಂಡಂತೆ ಕಣ್ಮುಚ್ಚಿ ಕುಳಿತಿದ್ದಾರೆ. ಊರಿನ ಹೊಲಸು ಕುಡಿಯುವ ನೀರಿನ ಕೆರೆಗೆ , ಹಿರೇಗುಂಜಳ ಕೆರೆ ಸೇರಿ ಹಾಳಾಗಿದೆ . ಕೆರೆ ಸ್ವಚ್ಛ ಮಾಡಿಸಿ ಎಂದರೆ ದುಡ್ಡು ಇಲ್ಲಾ ಎಂದು ಗ್ರಾಮ ಅಭಿವೃದ್ಧಿ ಅಧಿಕಾರಿಗಳು ಉಡಾಫೆ ಉತ್ತರ ಕೊಡುತ್ತಾರೆ ಎಂದು ಗ್ರಾಮಸ್ಥರು ದೂರಿದ್ದಾರೆ
2.ಕ್ರೇನ್ ಎಗರಿಸಿದ ಎಂಟೆದೆಯ ಬಂಟನ ಹೆಡಮುರಿ ಕಟ್ಟಿದ ಪೋಲೀಸರು
ಹುಬ್ಬಳ್ಳಿಯ ತಾರಿಹಾಳ ಗ್ರಾಮದಲ್ಲಿ ನಿಲ್ಲಿಸಲಾಗಿದ್ದ ಕ್ರೇನೊಂದನ್ನು ಕಳ್ಳತನ ಮಾಡಿಕೊಂಡು ಪೋಲೀಸರಿಗೂ ಸಾಕ್ಷಿ ಸಿಗದಂತೆ ಎಲ್ಲೆಲ್ಲಿ ಸಿಸಿಟಿವಿ ಇವೆ ಎಂಬುದನ್ನು ಗಮನಿಸುತ್ತಾ ಸುಮಾರು ಐದಾರುನೂರು ಕಿಲೋಮೀಟರವರೆಗೆ .ಹೋಗಿದ್ದ ಕಿಲಾಡಿ ಕಳ್ಳನನ್ನ ಹುಬ್ಬಳ್ಳಿ ಗ್ರಾಮೀಣ ಪೋಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ
3.ಬೆಳಗಾವಿಯಲ್ಲಿ ಮಾಜಿ ಸೈನಿಕರ ಸಂಭ್ರಮಾಚರಣೆ
ಆಪರೇಷನ್ ಸಿಂಧೂರ ಹೆಸರಿನಲ್ಲಿ ಭಾರತೀಯ ಸೇನೆ ದಾಳಿ ಹಿನ್ನಲೆ ಬೆಳಗಾವಿಯಲ್ಲಿ ಮಾಜಿ ಸೈನಿಕರು ಸಿಹಿ ತಿನ್ನಿಸಿ ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಕೂಗಿ ಸಂಭ್ರಮಾಚರಣೆ ಮಾಡಿದ್ದಾರೆ. ಹಾಗೇನೇ ಪಾಕಿಸ್ತಾನ ಮುರ್ದಾಬಾದ್ ಎಂದು ಪಾಕಿಸ್ತಾನ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತ ಪಡಿಸಿದರು
4.ಆಪರೇಷನ್ ಸಿಂಧೂರ್ ಬೆನ್ನಲ್ಲೇ ಸಿದ್ದರಾಮಯ್ಯ ಹಣೆಯಲ್ಲಿ ಕುಂಕುಮ
ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಗಳಲ್ಲಿನ ಉಗ್ರಗಾಮಿಗಳ ನೆಲೆಯನ್ನು ನಾಶ ಮಾಡಿ ಪರಾಕ್ರಮ ಮೆರೆದ ಭಾರತದ ಹೆಮ್ಮೆಯ ಧೀರ ಸೈನಿಕರಿಗೆ ಇಡೀ ರಾಜ್ಯದ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಸಿ ಎಂ ಸಿದ್ದರಾಮಯ್ಯ ಹಣೆಯಲ್ಲಿ ಕುಂಕುಮ ಇಟ್ಟು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ
5.ಕುಳಗೇರಿ ಕ್ರಾಸ್ ನಲ್ಲಿ ಲಾರಿಗೆ ಕಾರು ಡಿಕ್ಕಿ , ಇವರು ಸ್ಥಳದಲ್ಲೇ ಸಾವು
ಬಾದಾಮಿ ತಾಲೂಕಿನ ಕುಳಗೇರಿ ಕ್ರಾಸ್ ನಲ್ಲಿ ಹೋಟೆಲ್ ಉದ್ಯಮಿ ಯಾಗಿದ್ದ ವಿಠ್ಠಲ್ ಶೆಟ್ಟಿ ಅವರ ಕುಟುಂಬ ಸಾಗರ ತಾಲೂಕಿನ ಹಾವಿನಹಳ್ಳಿ ಮೊರ್ಪಿಗೆ ಕಾರನಲ್ಲಿ ತೇರಳಿ ಕಾರ್ಯಕ್ರಮ. ಮುಗಿಸಿಕೊಂಡು ವಾಪಸ್ ಕುಳಗೇರಿಗೆ ಬರುವಾಗಕಿರೆಸೋರ ಗ್ರಾಮದ ಹೆದ್ದಾರಿಯಲ್ಲಿ ಲಾರಿಗೆ ಕಾರು ಗುದ್ದಿ ವಿಠ್ಠಲ್ ಶೆಟ್ಟಿ ಸೇರಿ ಇನ್ನುಳಿದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
6.ಸಾರ್ವಜನಿಕರ ತೆರಿಗೆ ಹಣ ಪೋಲಾಗಲು ಬಿಡುವುದಿಲ್ಲ
ಸಾರ್ವಜನಿಕರ ತೆರಿಗೆ ಹಣವನ್ನು ಯಾವುದೇ ಕಾರಣಕ್ಕೂ ಪೋಲಾಗಲು ನಾವುಗಳು ಬಿಡುವುದಿಲ್ಲ ಅಧಿಕಾರಿಗಳು, ಬೋಗಸ್ ಬಿಲ್ ಮಾಡುವುದನ್ನು ನಿಲ್ಲಿಸಬೇಕು, ಪುರಸಭೆಯಲ್ಲಿ ನಡೆಯುತ್ತಿರುವ ಅಕ್ರಮ ಅವ್ಯವಹಾರಗಳು, ಮತ್ತು ದಲ್ಲಾಳಿಗಳು ಹಾವಳಿ ಹೆಚ್ಚಾಗಿದ್ದು, ಏಕತಾ ಬಿ ಖಾತದಲ್ಲಿ ಬಾರಿ ಗೋಲ್ಮಾಲ್ ನಡೆಯುತ್ತಿದೆ ಎಂದು ವಿರೋಧ ಪಕ್ಷದ ನಾಯಕರಾದ ಕೃಷ್ಣರವರು ಆಕ್ರೋಶ ವ್ಯಕ್ತಪಡಿಸಿದರು
7.ಶ್ರೀನಿವಾಸಪುರದಲ್ಲಿ ಕರ್ನಾಟಕ ರಾಜ್ಯ ಉಪ ಲೋಕಾಯುಕ್ತ ತಂಡ ದಾಳಿ
ಶ್ರೀನಿವಾಸಪುರ ತಾಲ್ಲೂಕು ನಲ್ಲಿ ದಿಡೀರನ ಭೇಟಿ ಕೊಟ್ಟ ಕರ್ನಾಟಕ ರಾಜ್ಯ ಉಪ ಲೋಕಾಯುಕ್ತ ತಂಡದ ಅಧಿಕಾರಿಗಳಾದ ಬಿ ವೀರಪ್ಪರವರ ನೇತೃತ್ವದಲ್ಲಿ ಸುಮಾರು 19 ಇಲಾಖೆಗಳಿಗೆ ಭೇಟಿ ಕೊಟ್ಟು ಶ್ರೀನಿವಾಸಪುರ ಪುರಸಭೆಯಲ್ಲಿ ಅಧಿಕಾರಿಗಳ ಚಳಿ ಬಿಡಿಸಿದರು ಒಂದು ಅಧಿಕಾರಿಗಳ ನಿರ್ಲಕ್ಷದಿಂದ ಪ್ರಜೆಗಳಿಗೆ ತುಂಬ ತೊಂದರೆ ಆಗುತ್ತಿದೆ ಮತ್ತು ಅಧಿಕಾರಿಗಳ ಫೋನ್ ಪೇ ನಲ್ಲಿ ಲಕ್ಷ ಲಕ್ಷ ದುಡ್ಡು ಟ್ರಾನ್ಸಾಕ್ಷನ್ ಆಗಿರುವುದು ಕಂಡು ಬಂದಿದೆ ಎಂದು ಉಪ ಲೋಕಾಯುಕ್ತ ತಂಡ ತಿಳಿಸಿದರು
8.ಹೊನ್ನುಡಿಕೆ ಗ್ರಾಮದಲ್ಲಿ ರೈತರಿಗೆ ಪಂಪು ಮೋಟಾರ್ ವಿತರಣೆ
ತುಮಕೂರು ತಾಲೂಕಿನ ಹೊನ್ನುಡಿಕೆ ಗ್ರಾಮದಲ್ಲಿ ನಡೆದ ತುಮಕೂರು ಗ್ರಾಮಾಂತರ ವಿಧಾನಸಭ ವ್ಯಾಪ್ತಿಯ 2024- 25 ನೇ ಸಾಲಿನಲ್ಲಿ ಸಣ್ಣ ನೀರಾವರಿ ಇಲಾಖೆ, ಮತ್ತು ಅಂಬೇಡ್ಕರ್ ಅಭಿವೃದ್ಧಿ ನಿಗಮದ ವತಿಯಿಂದ, ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ SCP/TSP ಯೋಜನೆ ಅಡಿಯಲ್ಲಿ ಆಯ್ಕೆಯಾದ ಗಂಗಾ ಕಲ್ಯಾಣ ಕಳವೆಬಾವಿ ಫಲಾನುಭವಿಗಳಿಗೆ ತುಮಕೂರು ಗ್ರಾಮಾಂತರ ಶಾಸಕ “ಬಿ ಸುರೇಶ್ ಗೌಡ ” ಅಧ್ಯಕ್ಷತೆಯಲ್ಲಿಪಂಪು ಮೋಟಾರ್ ವಿತರಣೆ ಮಾಡಲಾಯಿತು
9.ಕಾರ್ಪೋರೇಟ್ ಗೆ ಕ್ಲಾಸ್ ತಗೆದುಕೊಂಡ ಎಂಎಲ್ಎ.
ರಾಜ್ಯಾದ್ಯಂತ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಸಮೀಕ್ಷೆಗೆ ಚಾಲನೆ ನೀಡಲಾಗಿದ್ದು ಸಮೀಕ್ಷೆ ವೇಳೆ ಬಿಜೆಪಿ ಪಾಲಿಕೆ ಸದಸ್ಯ ಕಾಂಗ್ರೆಸ್ ಎಂಎಲ್ಎ ಜೊತೆ ಕಿರಿಕ್ ಮಾಡಿಕೊಂಡ ಘಟನೆ ನಡೆದಿದೆ . ಬೆಳಗಾವಿಯ ಸದಾಶಿವ ನಗರದಲ್ಲಿ ಶಾಸಕ ಆಸೀಫ್ ಸೇಠ್, ಮೇಯರ್, ಡೆಪ್ಯೂಟಿ ಮೇಯರ್, ಡಿಸಿ ಸಮ್ಮುಖದಲ್ಲಿ ಮೀಸಲಾತಿಗೆ ಸಮೀಕ್ಷೆಗೆ ಚಾಲನೆ ನೀಡಲಾಯಿತು. ಆಗ ಸ್ಥಳಕ್ಕೆ ಬಂದ ಬಿಜೆಪಿ ಪಾಲಿಕೆ ಸದಸ್ಯ ಸಂದೀಪ ಜಿರಗ್ಯಾಳರಿಂದ ಪಾಲಿಕೆಯ ಉಪ ಆಯುಕ್ತರ ಜೊತೆಗೆ ವಾಗ್ವಾದ ನಡೆಸಿದ್ದಾರೆ
10.ಅಂಬೇಡ್ಕರ್ ಜಯಂತಿ ಹಾಗೂ ವಿಶ್ವ ಕಾರ್ಮಿಕರ ದಿನಾಚರಣೆ
ಮುಳಬಾಗಿಲು ತಾಲ್ಲೂಕು ಅಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಎಸ್ ಬಿಸನಹಳ್ಳಿ ಗ್ರಾಮದಲ್ಲಿ ಡಾ. ಬಿಆರ್ ಅಂಬೇಡ್ಕರ್ ಅವರು ಭಾರತ ದೇಶದಲ್ಲಿ ಎಲ್ಲಾ ಜಾತಿ ಧರ್ಮದ ಜನರಿಗೆ ಸಮಾನತೆಯ ಹಕ್ಕುಗಳು ಮತ್ತು ಅವಕಾಶಗಳನ್ನು ಸಂವಿಧಾನದ ಮೂಲಕ ಕಲ್ಪಿಸಿಕೊಟ್ಟು ಈ ದೇಶದ ಎಲ್ಲಾ ಪ್ರಜೆಗಳು ಕಾನೂನಿನ ಚೌಕಟ್ಟಿನಲ್ಲಿ ಉತ್ತಮವಾಗಿ ಜೀವನ ನಡೆಸಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಕೋಲಾರ ಜಿಲ್ಲಾ ಜಲಗಾರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷರಾದ ಎಸ್. ಬಿಸನಹಳ್ಳಿ ಬಿ. ವಿ .ಗಂಗಾಧರ್ ರವರು ತಿಳಿಸಿದರು.

