ಸೂಪರ್ ಸಿನಿಮಾಗಳನ್ನ ಕನ್ನಡ ಚಿತ್ರರಂಗಕ್ಕೆ ಕೊಟ್ಟ ಸೂಪರ್ ಸ್ಟಾರ್ ಅವ್ರು.. ಮೊದಲ ಚಿತ್ರದಲ್ಲೇ ಗಲ್ಲಾಪಟ್ಟಿಗೆ ಕೊಳ್ಳೆ ಹೊಡೆದ ನಿರ್ದೇಶಕ.. ತಂದೆಗೆ ತಕ್ಕ ಮಗ ಅಂತಾ ಸಿನಿ ಅಭಿಮಾನಿಗಳು ಹೊಗಳ್ತಾರೆ.. ಆದ್ರೀಗ ಅದೇ ನಿರ್ದೇಶಕನ ವಿರುದ್ದ ಲಕ್ಷಲಕ್ಷ ವಂಚನೆ ಆರೋಪ ಕೇಳಿ ಬಂದಿದೆ.. ಹಾಗಾದ್ರೆ ಇದು ನಿಜಾನಾ.. ಆರೋಪಿಸಿದ್ದು ಯಾರು ಅನ್ನೋದ್ರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ..
ನಂದ ಕಿಶೋರ್ ಸ್ಯಾಂಡಲ್ವುಡ್ನ ಸ್ಟಾರ್ ಡೈರಕ್ಟರ್.. ಸೂಪರ್ ಡೂಪರ್ ಸಿನಿಮಾಗಳನ್ನ ಚಂದನವನಕ್ಕೆ ಕೊಟ್ಟ ನಿರ್ದೇಶಕ.. ಹಾಸ್ಯದಲ್ಲಿ ರನ್ನ.. ಕಾಮಿಡಿಯಲ್ಲಿ ಅಧ್ಯಕ್ಷ.. ಮಾಸ್ ಅಲ್ಲಿ ಪೊಗರು.. ಎಮೋಷನಲಿ ವಿಕ್ಟರಿ.. ಭಕ್ತಿಯಲ್ಲಿ ಮುಕುಂದಾ ಮುರಾರಿ.. ಇಂಥಾ ಅದ್ಭುತ ಸಿನಿಮಾಗಳನ್ನ ಕನ್ನಡ ಚಿತ್ರರಂಗಕ್ಕೆ ಕೊಟ್ಟ ಹೆಗ್ಗಳಿಕೆ ನಂದ ಕಿಶೋರ್ ಅವ್ರದ್ದು.. ತಂದೆ ಸುದೀರ್ ಅಂತೆ ನಾಯಕನಾಗಿ ಮಿಂಚಬೇಕು ಅಂತಾ ಚಿತ್ರರಂಗಕ್ಕೆ ಕಾಲಿಟ್ಟವನಿಗೆ ತಮ್ಮ ದೈತ್ಯ ದೇಹವೂ ಹಾಸ್ಯಕ್ಕೆ ಸಾಥ್ ಕೊಟ್ಟಿತ್ತು.. ಮಾಡಿದ್ದು ಆರೇಳು ಸಿನಿಮಾ ಆದ್ರು ಸೈ ಅನಿಸಿಕೊಂಡಿದ್ರು.. ಆದ್ರಿಗ ಇದೇ ನಿರ್ದೇಶಕನ ವಿರುದ್ಧ ವಂಚನೆ ಆರೋಪ ಕೇಳಿಬಂದಿದೆ..
ವಿಕ್ಟರಿ ಮೂಲಕ ನಿರ್ದೇಶನಕ್ಕೆ ಕೈ ಹಾಕಿದ ನಂದ ಕಿಶೋರ್ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದ್ರು.. ನಂತ್ರ ಮಾಡಿದ ಎಲ್ಲಾ ಸಿನಿಮಾಗಳು ಸಕ್ಸಸ್ ಆಗಿ ಸಿನಿ ಪ್ರೇಕ್ಷಕರ ಮನಸ್ಸು ಗೆದ್ದಿತ್ತು.. ಹೀಗಾಗಿನೆ ಅದೆಷ್ಟೋ ಜನ ನಾನು ಹೀರೋ ಆಗ್ಬೇಕು ಅಂತಾ ಸಾಕಷ್ಟು ಕನಸು ಕಟ್ಕೊಂಡಿರ್ತಾರೆ.. ಬಣ್ಣದ ಜಗತ್ತಲ್ಲಿ ನಕ್ಷತ್ರದಂತೆ ಮಿನುಗಬೇಕು ಅಂತಾ ಬರ್ತಾರೆ.. ಆದ್ರೆ ಕೆಲವ್ರು ಸ್ಟಾರ್ ಆದ್ರೆ ಇನ್ ಕೆಲವ್ರು ಕನಸಲ್ಲೇ ಜಾರಿ ಬೀಳ್ತಾರೆ.. ಅದೇ ರೀತಿ ನಟನಾಗಿ ಮಿಂಚಬೆಕು ಅಂತ ಸಿನಿ ಕ್ಷೇತ್ರಕ್ಕೆ ಕಾಲಿಟ್ಟ ಶಬರೀಶ್ ಶೆಟ್ಟಿ, ನಂದ ಕಿಶೋರ್ ವಿರುದ್ಧ ದೊಡ್ಡ ಬಾಂಬ್ ಸಿಡಿದಿದ್ದಾರೆ.. ನಟನಾಗಬೇಕೆಂಬ ಕನಸಿನ ಬಸ್ಸತ್ತಿದ್ದವ ಜಾಗ ಸೇರೋ ಮೊದ್ಲೇ ಹಣಕೊಟ್ಟು, ಅವಕಾಶನೂ ಇಲ್ದೆ ಹಣವೂ ಇಲ್ದೆ ಪರದಾಡುವ ಪರಿಸ್ಥಿತಿಗೆ ಬಂದಿದ್ದಾರೆ..
ಇನ್ನು ರಿಲೀಸ್ ಆಗದ ರಾಮಧೂತ ಎಂಬ ಸಿನಿಮಾದಲ್ಲಿ ನಾಯಕನಾಗಿ ನಟಿಸಿರುವ ಶಬರೀಶ್, ಸ್ಟಾರ್ ಸಿನಿಮಾಗಳ ಮಾಡಿ ಸೈ ಅನಿಸಿಕೊಂಡಿರುವ ನಟ ಕಂ ನಿರ್ದೇಶಕ ನಂದಕಿಶೋರ್ ಅವ್ರಿಂದ ನನಗೆ ವಂಚನೆಯಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.. 2016ರಲ್ಲಿ ಶಬರೀಶ್, ನಂದ ಕಿಶೋರ್ ಮಧ್ಯೆ ಆಗಿದ್ದ ಪರಿಚಯ ವ್ಯವಹಾರವರೆಗೂ ಹೋಗಿದೆ.. ಹೀಗಾಗಿ ಶಬರೀಶ್ ಚಿನ್ನ ಅಡಯಿಟ್ಟು 22 ಲಕ್ಷವನ್ನ ಕೊಟ್ಟಿದ್ದಾರಂತೆ.. ಆದ್ರೀಗ 9 ವರ್ಷವಾದ್ರು ಹಣ ಕೊಟ್ಟಿಲ್ಲ. ಕೇಳಿದ್ರೆ ಸುದೀಪ್ ಹೆಸರೇಳಿ ಯಾಮಾರಿಸಿ, ಧಮ್ಕಿ ಹಾಕ್ತಾರೆ.. ಅಲ್ದೆ ಕೆಸಿಸಿ ಟೂರ್ನಿಯಲ್ಲಿ 2 ಸೀಸನ್ ಆಡಿದ್ದೆ.. ಈಗ ದುಡ್ಡು ಕೇಳಿದ್ರೆ ಕ್ರಿಕೆಟ್ನಿಂದ ಹೊರಗಾಕ್ತಿನಿ ಅಂತಾ ಹೆದರಿಸ್ತಿದ್ದಾರೆ.. ಸುದೀಪ್ ಸರ್ ಗೆ ಹೇಳೋಕೆ ಹೋದ್ರೆ ತಡೆದ್ರು.. ಆದ್ರೀಗ ನಾನು ಕಾನೂನು ಹೋರಾಟ ಮಾಡ್ತೀನಿ ಅಂತಾ ಶಬರೀಶ್ ಪಟ್ಟಿಡಿದಿದ್ದಾರೆ.
ಗುರುಗಳ ಹೆಸರಲ್ಲೇ ನಂದ ಕಿಶೋರ್ ಆಡಿದ್ರಾ ಕಳ್ಳಾಟ!
ಮೊದಲು ಹೀರೋ ಆಗ್ಬೇಕು ಅಂತಾ ನಂದ ಕಿಶೋರ್ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿದ್ರು.. ಸಹಕಲಾವಿದನಾಗಿ ಒಂದಷ್ಟು ಪಾತ್ರಗಳನ್ನ ಮಾಡಿದ್ರು.. ಆದ್ರೆ ಕಿಚ್ಚ ಸುದೀಪ್ ಹೇಳಿದ ಆ ಒಂದು ಮಾತು ಇವತ್ತು ನಂದ ಕಿಶೋರ್ ಲೆವೆಲ್ ಎಲ್ಲೋ ಹೋಗಿದೆ.. ಚಿಕ್ಕ ಚಿಕ್ಕ ಪಾತ್ರಗಲ ಮಾಡ್ತಿದ್ದ ನಂದ ಕಿಶೋರ್ಗೆ ಸುದೀಪ್ ಹೇಳಿದ್ದು ಇಷ್ಟೆ.. ಕಲಾವಿದನಾಗೋ ಆಸೆ ಒಳ್ಳೆಯದೆ.. ಆದ್ರೆ ನೀನು ಕಲಾವಿದನಾಗೋಕಿಂತ ಡೈರೆಕ್ಟರ್ ಆದ್ರೆ ಬಹಳ ಎತ್ತರಕ್ಕೆ ಬೆಳೀತಿಯ ಅಂತಾ ಕಿವಿಮಾತು ಹೇಳಿದ್ರು.. ಇದೇ ಛಲದಿಂದ ನಿರ್ದೇಶನದತ್ತ ಮುಖ ಮಾಡಿ ವಿಕ್ಟರಿ ಅನ್ನೋ ಸಿನಿಮಾ ಮೂಲಕ ಸಖತ್ ಫೇಮಸ್ ಆದ್ರು.. ಆಗ್ಲಿಂದ ನನ್ನ ಜೀವನ ಗುರು ಕಿಚ್ಚ ಸುದೀಪ್ ಅಂತಾ ಓದಲೆಲ್ಲಾ ಹೆಮ್ಮೆಯಿಂದ ಹೇಳ್ಕೋತಾರೆ.. ಆದ್ರೀಗ ಗುರುಗಳ ಹೆಸ್ರಲ್ಲೇ ಕಳ್ಳಾಟ ಆಡಿದ್ರಾ ಅನ್ನೋ ಪ್ರಶ್ನೆ ಮೂಡಿದೆ..
ಒಟ್ನಲ್ಲಿ ನಿರ್ದೇಶಕ ನಂದ ಕಿಶೋರ್ ವಿರುದ್ಧ ಕಾನೂನು ಹೋರಾಟಕ್ಕೆ ಶಬರೀಶ್ ಸಜ್ಜಾಗಿದ್ದಾರೆ. ಆದ್ರೆ ನಂದ ಕಿಶೋರ್ ಈ ಆರೋಪಕ್ಕೆ ಇನ್ನು ತುಟಿ ಬಿಚ್ಚಿಲ್ಲ.. ಮುಂದಿನ ದಿನಗಳಲ್ಲಿ ತಮ್ಮ ಮೇಲಿರುವ ಆರೋಪಕ್ಕೆ ಯಾವ ರೀತಿ ಉತ್ತರ ಕೊಡ್ತಾರೆ ಕಾದು ನೋಡ್ಬೇಕು..
- ಕನಕಪುರ ರಸ್ತೆ ಬಳಿ ಗ್ರಾಮದಲ್ಲಿ 10 ಅಡಿ ಹೆಬ್ಬಾವು ಪ್ರತ್ಯಕ್ಷ
- ಪಶ್ಚಿಮ ಏಷ್ಯಾದ ಉದ್ವಿಗ್ನ ಪರಿಸ್ಥಿತಿ : ಸರ್ವಪಕ್ಷ ಸಭೆ ಕರೆದ ಮೋದಿ ಸರ್ಕಾರ
- ಬೀದರ್: ಅಂತಿಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ಆತ್ಮಹತ್ಯೆ
- ದೆಹಲಿ ವಿಧಾನಸಭೆ ಸಂಕೀರ್ಣ ಸ್ಫೋಟಿಸುವುದಾಗಿ ಬೆದರಿಕೆ ಇಮೇಲ್
- ಹಿಂದೂ, ಬೌದ್ಧ, ಸಿಖ್ ಬಿಟ್ಟು ಬೇರೆ ಧರ್ಮಕ್ಕೆ ಮತಾಂತರಗೊಂಡರೆ ಪರಿಶಿಷ್ಟ ಜಾತಿ ಸ್ಥಾನಮಾನ ರದ್ದು : ಸುಪ್ರೀಂ

