ಬೆಂಗಳೂರು : ಬುರುಡೆ ಸಂಕಷ್ಟದಲ್ಲಿ ಸಿಲುಕಿರುವ ಆರೋಪಿ ಚಿನ್ನಯ್ಯನಿಗೆ ಬ್ಯಾಕ್ ಟು ಬ್ಯಾಕ್ ಸಂಕಷ್ಟ ಎದುರಾಗಿದೆ. ದಿನದಿಂದ ದಿನಕ್ಕೆ ಬುರುಡೆ ರಹಸ್ಯ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಈ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ಬುರುಡೆ ವಿಡಿಯೋವೊಂದು ವೈರಲ್ ಆಗಿತ್ತು.
ಆದ್ರೆ, ಇದೀಗ ಆರೋಪಿ ದೂರುದಾರ ಚಿನ್ನಯ್ಯನ ಹೇಳಿಕೆ ಹಲವು ಅನುಮಾನಗಳಿಗೆ ಕಾರಣವಾಗಿದೆ. ಹೌದು, ಮೊದ ಮೊದಲು ಚಿನ್ನಯ್ಯ ನಾನು ಧರ್ಮಸ್ಥಳದಿಂದಲೇ ಬುರುಡೆ ತೆಗೆದುಕೊಂಡು ಬಂದು ಇಟ್ಟುಕೊಂಡಿದ್ದ ಅಂತ ಹೇಳಿಕೆ ನೀಡಿದ್ದ. ಈಗ ಆರೋಪಿ ದೂರುದಾರ ಮನೆ ಸರ್ಚ್ ವೇಳೆ ಬರುಡೆ ತಿಮರೋಡಿ ಕೊಟ್ಟಿದ್ದು ಅಂತ ಹೇಳಿದ್ದಾನಂತೆ.
ದೂರುದಾರ ಚಿನ್ನಯ್ಯ ತಲೆ ಬುರುಡೆ ತಂದ ವಿಡಿಯೋ ಚಿತ್ರಿಸಿದ್ದು ತಿಮರೋಡಿ ರಬ್ಬರ್ ತೋಟದ ಒಂದು ಜಾಗದಿಂದ ಅಂತ ಹೇಳಿಕೆ ನೀಡಿದ್ದಾನೆ. ಹೀಗಾಗಿ FSL ಅಧಿಕಾರಿಗಳು ಬುರುಡೆಗೆ ಅಂಟಿರುವ ಮಣ್ಣು ಮತ್ತು ತೋಟದ ಮಣ್ಣಿನ ತಾಳೆ ಹಾಕಲಿದ್ದಾರೆ. ಈಗಾಗಲೇ SIT ಅಧಿಕಾರಿ ತಿಮರೋಡಿ ರಬ್ಬರ್ ತೋಟದ ಮಣ್ಣು ಸಂಗ್ರಹ ಮಾಡಿದ್ದಾರೆ.
ಮಣ್ಣು ಸಂಗ್ರಹಿಸಿ FSL ಲ್ಯಾಬ್ಗೆ ಕಳುಹಿಸಿದ್ದಾರೆ. ಒಂದು ವೇಳೆ ತಿಮರೋಡಿ ತೋಟದ ಮಣ್ಣು ಮತ್ತು ಬುರುಡೆಯಲ್ಲಿರೋ ಮಣ್ಣಿನ ಕಣಗಳ ಗುಣ ಲಕ್ಷಣಗಳ ಪಾಸಿಟಿವ್ ಬಂದರೆ ಪ್ರಕರಣದಲ್ಲಿ ಮತ್ತೊಂದು ಸಾಕ್ಷಿ ಸಿಕ್ಕಂತೆ ಆಗಿಲಿದೆ. ಜೊತೆಗೆ ಬುರುಡೆ ಗ್ಯಾಂಗ್ ಷಡ್ಯಂತ್ರಕ್ಕೆ ಸ್ಫೋಟಕ ಸಾಕ್ಷ್ಯ ಸಿಗಲಿದೆ.
ತಿಮರೋಡಿ ಜತೆ ಗಿಳಿಯಾರ್.. ಅನುಮಾನದ ಫೋಟೋ

ಧರ್ಮಸ್ಥಳದ ಬುರುಡೆ ಪ್ರಕರಣ ಸಂಬಂಧಪ್ಟಂತೆ ಮಹೇಶ್ ಶೆಟ್ಟಿ ತಿಮರೋಡಿ ವಸಂತ್ ಗಿಳಿಯಾರ್ ಜೊತೆಗಿದ್ದ ಫೋಟೋ ವೈರಲ್ ಆಗಿದೆ. ಕಳೆದ ಎರಡು ವರ್ಷ ಹಿಂದಿನ ಫೋಟೋ ಈಗ ವೈರಲ್ ಆಗ್ತಿದೆ.. ಮೈಸೂರಿನ ಜಲದರ್ಶಿನಿ ಅತಿಥಿ ಗೃಹದಲ್ಲಿ ಸತ್ಯ ಸಂಶೋಧನಾ ಎಂಬ ಹೆಸರಿನಲ್ಲಿ ಸಭೆ ನಡೆಸಿದ್ದ ತಿಮರೋಡಿ ಅಂದು ವಸಂತ್ ಗಿಳಿಯಾರ್ ಜೊತೆ ಕಾಣಿಸಿಕೊಂಡಿದ್ದಾರೆ. ಸಾಕಷ್ಟು ಚರ್ಚೆಗೆ ಗ್ರಾಸವಾಗಿರುವ ಫೋಟೋ ಅನುಮಾನ ಹುಟ್ಟುಹಾಕುತ್ತಿದೆ..

