ಬೆಂಗಳೂರು, : ಇಂದು ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಭಾರೀ ಮಳೆಯಾಗಿದ್ದು ಸಂಜೆಯಾಗುತ್ತಿದ್ದಂತೆಯೇ ಮಳೆ ಆರಂಭತ ಮತ್ತಷ್ಟು ಹೆಚ್ಚಾಗಿದೆ. ನಗರದಾದ್ಯಂತ ಭಾರೀ ಮಳೆಯಾಗಿದ್ದು, ಸಂಜೆ ಆಫೀಷ್ ಕೆಸಲ ಮುಗಿಸಿ ಮನೆಗೆ ಹೋಗುತ್ತಿದ್ದವರು ತೊಂದರೆಗೆ ಸಿಲುಕಿದ್ದಾರೆ. ಇನ್ನು ಹಲವು ರಸ್ತೆಗಳಲ್ಲಿ ನೀರು ತುಂಬಿಕೊಂಡಿದ್ದರಿಂದ ವಾಹನ ಸವಾರರು ಪರದಾಡಿದರು. ಮಾತ್ರವಲ್ಲ, ನಗರದ ಪ್ರಮುಖ ಭಾಗಳಲ್ಲಿ ಟ್ರಾಫಿಕ್ ಬಿಸಿ ತಟ್ಟಿದೆ.
ಇದರ ಪರಿಣಾಮ ಜಂಕ್ಷನ್ ಮತ್ತು ಅಂಡರ್ಪಾಸ್ ಸೇರಿ ನಗರದ ಪ್ರಮುಖ ರಸ್ತೆಗಳಲ್ಲಿ ನೀರು ತುಂಬಿಕೊಂಡಿದ್ದರಿಂದ ವಾಹನ ದಟ್ಟಣೆಯಾಗಿ ಸವಾರರಿಗೆ ಇನ್ನಷ್ಟು ತೊಂದರೆಯಾಯಿತು. ಸಿಲ್ಕ್ಬೋರ್ಡ್,ಶಿವಾನಂದ ಸರ್ಕಲ್, ಓಕಳಿಪುರ ಜಂಕ್ಷನ್, ಕೆ.ಆರ್.ವೃತ್ತ ಬಳಿ ಅಂಡರ್ಪಾಸ್ನಲ್ಲಿ ನೀರು ಶೇಖರಣೆಗೊಂಡಿತ್ತು.
ಸರಾಗವಾಗಿ ನೀರು ಹರಿಯುವ ವ್ಯವಸ್ಥೆ ಇಲ್ಲದ ಕಾರಣ ನಗರದ ಪ್ರಮುಖ ರಸ್ತೆಗಳು ಜಲಾವೃತವಾಗಿತ್ತು. ಹಲವೆಡೆ ಮ್ಯಾನ್ಹೋಲ್ ದುರಸ್ತಿ ಮಾಡದ ಕಾರಣ ಕೊಳಚೆ ನೀರು ರಸ್ತೆಮೇಲೆ ಹರಿಯುತ್ತಿತ್ತು. ಒಳಚರಂಡಿ ಸೇರಿ ಇತರೆ ಕಾಮಗಾರಿಗಳು ನಡೆಯುತ್ತಿದ್ದ ಸ್ಥಳಗಳಲ್ಲಿ ಅಪಾರ ಪ್ರಮಾಣದಲ್ಲಿ ನೀರು ನಿಂತಿತ್ತು. ಮೋಡ ಕವಿದ ವಾತಾವರಣದೊಂದಿಗೆ ಕೆಲ ಬಡಾವಣೆಗಳಲ್ಲಿ ಸಾಧಾರಣವಾಗಿ ಸುರಿದರೆ, ಇನ್ನೂ ಕೆಲ ಪ್ರದೇಶಗಳಲ್ಲಿ ಬಿರುಸಾಗಿತ್ತು.

