ಬೆಳಗಾವಿ : ಗ್ರಾಮೀಣ ಭಾಗದ ಸರ್ಕಾರಿ ಕನ್ನಡ ಮಾದರಿ ಪ್ರಾಥಮಿಕ ಶಾಲೆ, ಕಂಗ್ರಾಳಿ ಬಿ.ಕೆ.ಯ ಸ್ಥಿತಿ ದಿನೇದಿನೇ ಕುಸಿಯುತ್ತಿದ್ದು, ಶಿಕ್ಷಣ ಇಲಾಖೆ ಸಚಿವರು ಗಮನ ಹರಿಸಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳು ಜೀವ ಕೈಯಲ್ಲಿ ಹಿಡಿದುಕೊಂಡೇ ಪಾಠ ಕೇಳುವಂತಾಗಿದೆ. ಮೇಲ್ಚಾವಣಿಯಿಂದ ಯಾವ ಕ್ಷಣದ ಮಳಿ ಸಿಮೆಂಟ್–ಕಾಂಕ್ರೀಟ್ ಬಿದ್ದು ಅಪಾಯ ಉಂಟಾಗಬಹುದು ಎಂಬ ಭೀತಿಯಲ್ಲಿ ಮಕ್ಕಳು ತರಗತಿ ಮುಂದುವರಿಸುತ್ತಿದ್ದಾರೆ. ಶಿಕ್ಷಕರು ಕೂಡ ಭಯದ ಮಧ್ಯೆ ಪಾಠ ಮಾಡುತ್ತಿದ್ದು
ಮಕ್ಕಳ ಜೀವಕ್ಕೆ ಯಾರು ಜವಾಬ್ದಾರರು? ಎಂಬ ಪ್ರಶ್ನೆ ಗಂಭೀರವಾಗಿ ಎದ್ದು ಬರುತ್ತಿದೆ.
ಶಾಲಾ ಕಟ್ಟಡದ ದುಸ್ಥಿತಿಯ ಜೊತೆಗೆ ಶೌಚಾಲಯಗಳ ಪರಿಸ್ಥಿತಿ ಹದಗೆಟ್ಟಿದೆ. ಶೌಚಾಲಯ ಇದ್ದರೂ ಸ್ವಚ್ಛತೆ ಇಲ್ಲದ ಕಾರಣದಿಂದ ಮಕ್ಕಳು ಬಳಕೆ ಮಾಡುವುದು ಕಷ್ಟವಾಗುತ್ತಿದೆ. ಹೆಣ್ಣು–ಗಂಡು ಮಕ್ಕಳಿಗೆ ಮೂಲಭೂತ ಸೌಕರ್ಯಗಳ ಕೊರತೆ ಕಂಡು ಬರುತ್ತಿದೆ.
ಇದೇ ಸಂದರ್ಭದಲ್ಲಿ, ದೈಹಿಕ ಶಿಕ್ಷಣ ಶಿಕ್ಷಕರಾದ ಬಿ.ವೈ. ಹಿತಾರಗೌಡ ಅವರು ಕಳೆದ ಎರಡು–ಮೂರು ತಿಂಗಳಿಂದ ಶಾಲೆಗೆ ಸರಿಯಾಗಿ ಹಾಜರಾಗದೆ ಇರುವ ಬಗ್ಗೆ ಸ್ಥಳೀಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪ್ರಶ್ನಿಸಿದಾಗ ಮುಖ್ಯೋಪಾಧ್ಯಾಯರಾದ ರಾಮಣ್ಣ ಭಜಂತ್ರಿ ಅವರಿಂದ ಸ್ಪಷ್ಟ ಉತ್ತರ ಸಿಕ್ಕಿಲ್ಲ ಎಂದು ಎಸ್ಡಿಎಂಸಿ ಸದಸ್ಯರು ತಿಳಿಸಿದ್ದಾರೆ.
ಎಸ್ಡಿಎಂಸಿ ಉಪಾಧ್ಯಕ್ಷ ರಮೇಶ್ ಒಡರಟ್ಟಿ,
“ಶಾಲೆಗೆ ಬರುವ ಅನುದಾನ ಏನು? ಮೂಲಭೂತ ಸೌಕರ್ಯ ಏಕೆ ಸರಿ ಮಾಡಿಲ್ಲ? ಶೌಚಾಲಯಗಳ ಸ್ಥಿತಿ ಏಕೆ ಹೀಗೆ? ಹೆಣ್ಣು–ಗಂಡು ಮಕ್ಕಳು ಎಲ್ಲಿ ಹೋಗಬೇಕು?” ಎಂದು ಪ್ರಶ್ನಿಸಿದಾಗಲೂ ಮುಖ್ಯೋಪಾಧ್ಯಾಯರು ಸ್ಥಳದಲ್ಲೇ ಇರಲಿಲ್ಲ.
ಈ ದುಸ್ಥಿತಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ತವರು ಪ್ರದೇಶದಲ್ಲೇ ಇದ್ದು ಹೆಚ್ಚು ಚರ್ಚೆಗೆ ಕಾರಣವಾಗಿದೆ.
ಶಾಲೆಯ ಸಮಸ್ಯೆಗಳನ್ನು ನಮ್ಮ ವಾಹಿನಿ ಪ್ರಸಾರ ಮಾಡಿದ ನಂತರ, ಇಲಾಖೆ ಗಮನ ಹರಿಸಿ ಅಗತ್ಯ ಕ್ರಮ ಕೈಗೊಂಡು, ಕಂಗ್ರಾಳಿ ಬಿ.ಕೆ. ಸರ್ಕಾರಿ ಕನ್ನಡ ಮಾದರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಸಿಗಬೇಕಾದ ಎಲ್ಲ ಸೌಲಭ್ಯಗಳು ತಲುಪುವಂತಾಗಲಿ ಎಂಬುದು ಪಾಲಕರ ಹಾಗೂ ಸ್ಥಳೀಯರ ಬೇಡಿಕೆಯಾಗಿದೆ.
ವರದಿ : ದಯಾನಂದ ಎಂ., ಸಂಪೂರ್ಣ ನ್ಯೂಸ್, ಬೆಳಗಾವಿ

