ಈಗಂತೂ ಜನರು ಸಾಮಾಜಿಕ ಸಂಪರ್ಕಗಳಿಂದ ದೂರವಿರಲು ಬಯಸಿ ತುಂಬಾನೇ ಒಂಟಿತನದಿಂದ ಬಳಲುವಂತಾಗಿದೆ. ಎಂದರೆ ಹೆಚ್ಚಿನ ಜನರ ಸಹವಾಸವೆ ನಮಗೆ ಬೇಡ ಅಂತ ಅನೇಕರು ತಮ್ಮ ಕೆಲಸ (Work) ಆಯ್ತು, ತಮ್ಮ ಮನೆ ಮತ್ತು ಕುಟುಂಬದ ಸದಸ್ಯರ ಒಡನಾಟ ಆಯ್ತು ಅಂತ ಹೊರಗಿನ ಜನರ ಸಂಪರ್ಕಗಳನ್ನೇ ಆದಷ್ಟು ಕಡಿಮೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಇದು ಅವರ ಒಂಟಿತನಕ್ಕೆ ಕಾರಣವಾಗಿ ಮುಂದೆ ಇದು ಅನೇಕ ಅನಾರೋಗ್ಯ ಸಮಸ್ಯೆಗಳನ್ನು ತಂದೊಡ್ಡುತ್ತಿದೆ. ಅದರಲ್ಲೂ ಈ ಕೋವಿಡ್-19 ಸಾಂಕ್ರಾಮಿಕ ರೋಗದ ಹಾವಳಿ ಶುರುವಾದಾಗಿನಿಂದ ಅಂತೂ ಹೆಚ್ಚಿನ ಜನರು ತಮ್ಮ ಮುಂಚೆ ಇದ್ದಂತಹ ಸಾಮಾಜಿಕ ಸಂಪರ್ಕಗಳನ್ನೇ (Social Communication) ಕಡೆದುಕೊಂಡಿದ್ದಾರೆ. ಹೀಗೆ ಅವರು ಒಂಟಿತನದಿಂದ (Solo Soul) ಬಳಲುತ್ತಿದ್ದು, ಅನೇಕ ಮಾನಸಿಕ ಕಾಯಿಲೆಗೆ ತುತ್ತಾಗುತ್ತಿದ್ದಾರೆ.
ಒಂಟಿತನವನ್ನು ಗಂಭೀರವಾಗಿ ಪರಿಗಣಿಸಿದ ವಿಶ್ವ ಆರೋಗ್ಯ ಸಂಸ್ಥೆ
ಈಗ ವಿಶ್ವ ಆರೋಗ್ಯ ಸಂಸ್ಥೆ (WHO) ಸಹ ಈ ಒಂಟಿತನವನ್ನು ಜಾಗತಿಕ ಆರೋಗ್ಯ ಆದ್ಯತೆಯನ್ನಾಗಿ ಮಾಡಿದೆ ಮತ್ತು ಸಾಮಾಜಿಕ ಸಂಪರ್ಕದ ಹೊಸ ಆಯೋಗವನ್ನು ಪ್ರಾರಂಭಿಸಿದೆ. ಜಗತ್ತಿನಾದ್ಯಂತ 11 ಪ್ರಮುಖ ನೀತಿ ನಿರೂಪಕರು, ಚಿಂತನೆಯ ನಾಯಕರು ಮತ್ತು ವಕೀಲರನ್ನು ಒಳಗೊಂಡಿರುವ ಆಯೋಗದ ಗುರಿಯು ಒಂಟಿತನವನ್ನು ಆರೋಗ್ಯದ ಬೆದರಿಕೆಯಾಗಿ ಪರಿಹರಿಸುವುದು, ಸಾಮಾಜಿಕ ಸಂಪರ್ಕಗಳನ್ನು ಆದ್ಯತೆಯಾಗಿ ಉತ್ತೇಜಿಸುವುದು ಮತ್ತು ದೇಶಗಳಲ್ಲಿ ಪರಿಹಾರಗಳ ಸ್ಕೇಲಿಂಗ್ ಅನ್ನು ವೇಗಗೊಳಿಸುವುದು ಆಗಿದೆ.
ಇದನ್ನೂ ಓದಿ:
ವಿಶ್ವಕಪ್ ಗೆಲ್ಲಬೇಕು ಅಂದ್ರೆ ಟೀಂ ಇಂಡಿಯಾ ಇವತ್ತು ಈ ತಪ್ಪು ಮಾಡಬಾರದು!
ಡಬ್ಲ್ಯೂಎಚ್ಒ ಪ್ರಕಾರ, ಸಾಮಾಜಿಕ ಪ್ರತ್ಯೇಕತೆ, ಸಾಕಷ್ಟು ಸಂಖ್ಯೆಯ ಸಾಮಾಜಿಕ ಸಂಪರ್ಕಗಳನ್ನು ಹೊಂದದೆ ಇರುವುದು ಮತ್ತು ಒಂಟಿತನವು ಪ್ರಪಂಚದಾದ್ಯಂತದ ಬಹುತೇಕವಾಗಿ ಎಲ್ಲಾ ವಯಸ್ಸಿನ ಜನರ ಆರೋಗ್ಯ ಮತ್ತು ಯೋಗಕ್ಷೇಮದ ಮೇಲೆ ವ್ಯಾಪಕವಾಗಿ ಪರಿಣಾಮ ಬೀರುತ್ತಿದೆ.
ಸಾಮಾಜಿಕ ಪ್ರತ್ಯೇಕತೆಯು ನಾಲ್ಕು ವಯಸ್ಸಾದವರಲ್ಲಿ ಒಬ್ಬರ ಮೇಲೆ ಪರಿಣಾಮ ಬೀರುತ್ತದೆ ಆದರೆ 5% ರಿಂದ 15% ರಷ್ಟು ಹದಿಹರೆಯದವರು ಒಂಟಿತನವನ್ನು ಅನುಭವಿಸುತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಗಮನ ಸೆಳೆದಿದೆ ಮತ್ತು ಈ ಅಂಕಿ ಅಂಶಗಳನ್ನು ಕಡಿಮೆ ಅಂದಾಜು ಮಾಡುವ ಸಾಧ್ಯತೆಯಿದೆ ಎಂದು ಗಮನಿಸಿದೆ.
ಸಾಮಾಜಿಕ ಪ್ರತ್ಯೇಕತೆ ಮತ್ತು ಒಂಟಿತನದ ಪ್ರಭಾವ
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಬಲವಾದ ಸಾಮಾಜಿಕ ಸಂಪರ್ಕಗಳಿಲ್ಲದ ಜನರು ಪಾರ್ಶ್ವವಾಯು, ಆತಂಕ, ಬುದ್ಧಿಮಾಂದ್ಯತೆ, ಖಿನ್ನತೆಯ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ. ಇದು ಧೂಮಪಾನ, ಅತಿಯಾದ ಮದ್ಯಪಾನ, ಸ್ಥೂಲಕಾಯತೆ ಮತ್ತು ಹೆಚ್ಚಿನವುಗಳಂತಹ ಇತರ ಅಪಾಯಕಾರಿ ಅಂಶಗಳಂತೆ ಅಕಾಲಿಕ ಮರಣದ ಸಮಾನ ಅಥವಾ ಹೆಚ್ಚಿನ ಅಪಾಯಕ್ಕೆ ಕಾರಣವಾಗುತ್ತದೆ.
ಸಾಮಾಜಿಕವಾಗಿ ಪ್ರತ್ಯೇಕವಾಗಿರುವುದರಿಂದ ಖಿನ್ನತೆ, ಆತಂಕ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು 30% ಹೆಚ್ಚಿಸಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಸಾಮಾಜಿಕ ಸಂಪರ್ಕ ಕೊರತೆ ನಿಭಾಯಿಸಲು ಏನೆಲ್ಲಾ ಮಾಡುತ್ತಿದೆ ನೋಡಿ ಸಂಸ್ಥೆ..
ಯುಎಸ್ ಸರ್ಜನ್ ಜನರಲ್ ಡಾ. ವಿವೇಕ್ ಮೂರ್ತಿ ಅವರ ಸಹ-ಅಧ್ಯಕ್ಷರಾಗಿರುವ ವಿಶ್ವ ಆರೋಗ್ಯ ಸಂಸ್ಥೆ ರಚಿಸಿರುವ ಆಯೋಗವು ಈ ವರ್ಷದ ಡಿಸೆಂಬರ್ 2 ರಿಂದ ಡಿಸೆಂಬರ್ 8 ರವರೆಗೆ ತನ್ನ ಮೊದಲ ನಾಯಕತ್ವ ಮಟ್ಟದ ಸಭೆಯನ್ನು ನಡೆಸಲಿದೆ.
ಕೋವಿಡ್-19 ಸಾಂಕ್ರಾಮಿಕ ರೋಗವು ಜನರ ಸಾಮಾಜಿಕ ಸಂಪರ್ಕಗಳನ್ನು ಹೇಗೆ ದುರ್ಬಲಗೊಳಿಸಿತು ಎಂಬುದನ್ನು ಗಮನಿಸುವುದು ಮತ್ತು ಅದಕ್ಕೆ ಪರಿಹಾರ ಹುಡುಕುವುದು ಈ ಸಂಸ್ಥೆಯ ಪ್ಯಾನಲ್ನ ಕಾರ್ಯಸೂಚಿಯಲ್ಲಿರುವ ಪ್ರಮುಖವಾದ ಕೆಲಸಗಳಾಗಿವೆ.
ಮಲೈಕಾ ಬೋಲ್ಡ್ ಫೋಟೋ ಶೂಟ್!
ಮುಂದಿನ ಮೂರು ವರ್ಷಗಳವರೆಗೆ, ಈ ಆಯೋಗವು ಎಲ್ಲಾ ವಯಸ್ಸಿನ ಜನರ ಆರೋಗ್ಯವನ್ನು ಸುಧಾರಿಸಲು ಸಾಮಾಜಿಕ ಸಂಪರ್ಕಗಳು ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ವಿಶ್ಲೇಷಿಸುತ್ತದೆ ಮತ್ತು ಸಾಮಾಜಿಕ ಸಂಪರ್ಕಗಳನ್ನು ಪ್ರಮಾಣದಲ್ಲಿ ನಿರ್ಮಿಸಲು ಪರಿಹಾರಗಳನ್ನು ಸಹ ನೀಡುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ

