ಬೆಂಗಳೂರು: ವಿಧಾನಸಭೆ ಅಧಿವೇಶನದಲ್ಲಿ ಹಿರಿಯ ನಾಯಕರ ಕೊರತೆ ಇದ್ದು, ಅದರಲ್ಲೂ ಬಿಜೆಪಿ- ಜೆಡಿಎಸ್ ಘಟಾನುಘಟಿಗಳ ಕೊರತೆ ಉಂಟಾಗಿದೆ.
ಲೋಕಸಭೆ ಚುನಾವಣೆ ಮುಗಿದ ಹಿನ್ನೆಲೆ ವಿಧಾನಸಭೆಯಲ್ಲಿ ಬಿಜೆಪಿ, ಜೆಡಿಎಸ್ ಘಟಾನುಘಟಿಗಳ ಕೊರತೆ ಉಂಟಾಗಿದೆ. ವಿಧಾನ ಸಬೆ ಎಲೆಕ್ಷನ್ನಲ್ಲಿ ಪ್ರಮುಖ ನಾಯಕರಿಗೆ ಸೋಲಾಗಿರುವುದು ಒಂದು ಕಾರಣವಾದರೆ. ಇನ್ನೂ ಕೆಲವರು ಸಂಸದರಾಗಿ ಆಯ್ಕೆಯಾದ ಹಿನ್ನೆಲೆ ಕರೆತೆಯಾಗಿದೆ. ಇದನ್ನೂ ಓದಿ: ನಟ ದರ್ಶನ್ ಗೆಳತಿ ಪವಿತ್ರಾಗೌಡ ಪೊಲೀಸರ ವಶಕ್ಕೆ
ಜೊತೆಗೆ ವಿಧಾನಸಭೆ ಅಧಿವೇಶನದಲ್ಲಿ ಹಿರಿಯ ನಾಯಕರ ಕೊರತೆ ಉಂಟಾಗಿದ್ದು, ಅಸೆಂಬ್ಲಿಯಲ್ಲಿ ಸಿದ್ದು, ಡಿಕೆಶಿ ವಿರುದ್ದ ತೊಡೆ ತಟ್ಟೋರು ಯಾರು..? ಎಂಬ ಪ್ರಶ್ನೆ ಕಾಡುತ್ತಿದೆ.
ಸದ್ಯ ಅಸೆಂಬ್ಲಿಯಲ್ಲಿ ಸಿದಗ್ದರಾಮಯ್ಯ ಅಟ್ಯಾಕ್ ಗೆ ಕೌಂಟರ್ ಕೊಡಲು ವಿಪಕ್ಷ ನಾಯಕ ಅಶೋಕ್ ಫೇಲ್ ಆಗಿದ್ದಾರೆ. ಸಿ.ಎನ್ ಅಶ್ವಥ್ ನಾರಾಯಣ್, ಯತ್ನಾಳ್, ಸುರೇಶ್ ಕುಮಾರ್ ಬಿಟ್ರೆ ಅನುಭವಿಗಳ ಕೊರತೆ ಇದೆ. ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಶಕ್ತಿ ಯೋಜನೆಗೆ ಒಂದು ವರ್ಷದ ಸಂಭ್ರಮ
ಇನ್ನೂ ಪೆನ್ ಡ್ರೈವ್ ಬಾಂಬ್ ಹಾಕ್ತಿದ್ದ ಹೆಚ್ ಡಿ ಕುಮಾರಸ್ವಾಮಿ ಅವರು ಮಂಡ್ಯದಲ್ಲಿ ಬಹುಮತ ಸಾಧಿಸಿ ಈಗ ಕೇಂದ್ರ ಸಚಿವ ಸ್ಥಾಮನ ಪಡೆದಿದ್ದಾರೆ. ಇನ್ನು ರೇವಣ್ಣ ಅವರು ಮಹಿಳೆಯ ಕಿಡ್ನ್ಯಾಪ್ ಕೇಸ್ ನಲ್ಲಿ ಜೈಲುವಾಸ ಅನುಭವಿಸಿ ಬಂದಿದ್ದಾರೆ.
ಮಾಜಿ ಸಿಎಂ ಆಗಿದ್ದ ಬೊಮ್ಮಾಯಿ ಅವರು ಸಂಸತ್ ಪ್ರವೇಶ ಮಾಡಿದ್ದಾರೆ, ಮತ್ತೊಂದೆಡೆ ಮಾಧುಸ್ವಾಮಿ ಅವರು ಅಸೆಂಬ್ಲಿ ಎಲೆಕ್ಷನ್ನಲ್ಲಿ ಸೋತಿದ್ದಾರೆ. ಪರಿಷತ್ ಸದಸ್ಯರಾಗಿ ಸಿ.ಟಿ ರವಿ ಆಯ್ಕೆಯಾಗಿದ್ದಾರೆ. ಜೊತೆಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ಅನುಭದ ಕೊರತೆ ಇರುವುದರಿಂದ ಪ್ರಮ7ಉಖ ಘಟಾನುಘಟಿಗಳ ಕೊರತೆ ಉಂಟಾಗಿದೆ. ಇದನ್ನೂ ಓದಿ: ಪವಿತ್ರಾ ಗೌಡಗೆ ಅಶ್ಲೀಲವಾಗಿ ಮೆಸೇಜ್ ಮಾಡಿದ್ದಕ್ಕೆ ಕೊಲೆ? ನಟ ದರ್ಶನ್ ಬಂಧನ

