ಬೆಂಗಳೂರು: ಕೊಲೆ ಆರೋಪದಿಂದ ಜೈಲು ಪಾಲಾಗಿರುವ ನಟ ದರ್ಶನ್ ಬೆನ್ನಿಗೆ ನಿಂತಿರುವ ಪತ್ನಿ ವಿಜಯಲಕ್ಷ್ಮಿಗೆ ಅಭಿಮಾನಿಗಳು ಪೋಸ್ಟ್ ಹಾಕುವ ಮೂಲಕ ಧನ್ಯವಾದ ತಿಳಿಸಿದ್ದಾರೆ.
ಸದ್ಯ ರೇಣುಕಾಸ್ವಾಮಿ ಕೊಲೆ ಪ್ರಕರದಲ್ಲಿ ಜೈಲು ಪಾಲಾಗಿರುವ ದರ್ಶನ್ ಜೈಲಿನಲ್ಲಿ ಐದು ದಿನ ಕಳೆದಿದ್ದಾರೆ. ಇತ್ತಿಚೆಗೆಷ್ಟೇ ಪತ್ನಿ ಹಾಗೂ ಮನ ದರ್ಶನ್ರನ್ನು ಭೇಟಿಯಾಗಲು ಜೈಲಿಗೆ ಬಂದಿದ್ದರು. ಈ ವೇಳೆ ಮಗನನ್ನು ನೋಡಿ ದರ್ಶನ್ ಭಾವುಕರಾಗಿದ್ದರು. ಇದನ್ನೂ ಓದಿ: ಕಾಫಿನಾಡಲ್ಲಿ ಮುಂದುವರೆದ ಮಳೆ ಅಬ್ಬರ- ಮಲೆನಾಡಿನ ಜನರ ಜೀವನ ಅಸ್ತವ್ಯಸ್ತ

ಇದೀಗ ನಟ ದರ್ಶನ್ ಪರವಾಗಿ ನಿಂತಿರುವ ಪತ್ನಿ ವಿಜಯಲಕ್ಷ್ಮಿಗೆ ನಮ್ಮ ಉಸಿರಿರುವರೆಗೂ ನಿಮಗೆ ಚಿರಋಣಿಯಾಗಿರುತ್ತೇವೆ. ಈ ಸಮಯದಲ್ಲಿ ನಮ್ಮ ಪರವಾಗಿ ನಿಂತಿರುವುದಕ್ಕೆ ಧನ್ಯವಾದ ಅತ್ತಿಗೆ ಎಂದು ಪೋಸ್ಟ್ ಮಾಡುವ ಮೂಲಕ ಅಭಿಮಾನಿಯೊಬ್ಬರು ಧನ್ಯವಾದ ತಿಳಿಸಿದ್ದಾರೆ.
ಜೈಲಿನಲ್ಲಿ 5 ದಿನಗಳನ್ನು ದರ್ಶನ್ ಕಳೆದಿದ್ದು, ದಿನ ದಿನ ಅವರ ದೇಹ ತೂಕ ಕಳೆದುಕೊಂಡಿದ್ದಾರೆ. ಇದನ್ನೂ ಓದಿ: ಕಾಲೇಜಿನಲ್ಲಿ ಹಿಜಬ್ ನಿಷೇಧ: 9 ಮುಸ್ಲಿಂ ವಿದ್ಯಾರ್ಥಿನಿಯರು ಸಲ್ಲಿಸಿದ್ದ ಅರ್ಜಿ ವಜಾ

