By using this site, you agree to the Privacy Policy and Terms of Use.
Accept
Sampoorna NewsSampoorna NewsSampoorna News
  • Home
  • Latest
  • ರಾಜ್ಯ
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
  • ಕ್ರೀಡೆ
    • ಕ್ರಿಕೆಟ್
    • ಇತರೆ
  • ಕೃಷಿ-Agriculture
  • ಆಹಾರ
    • ಸಸ್ಯಾಹಾರಿ
    • ಮಾಂಸಾಹಾರಿ
  • ಕ್ರೈಂ
  • Court
  • epaper
  • Web Stories
  • Videos
Reading: ಇಸ್ರೋದ ಪಿಎಸ್‌ಎಲ್‌ವಿ–ಸಿ62 ಮಿಷನ್ ವಿಫಲ : ಇಒಎಸ್–ಎನ್1 ಸೇರಿ 16 ಉಪಗ್ರಹಗಳು ನಾಶ
Share
Font ResizerAa
Font ResizerAa
Sampoorna NewsSampoorna News
  • Home
  • Latest
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
  • ಕ್ರೀಡೆ
  • ಕೃಷಿ-Agriculture
  • ಆಹಾರ
  • ಕ್ರೈಂ
  • Court
  • epaper
  • Web Stories
  • Videos
  • ಜಿಲ್ಲೆಗಳು
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • Entertainment
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
Have an existing account? Sign In
Follow US
© 2024 All Rights Reserved.

Home - ರಾಷ್ಟ್ರೀಯ-National - ಇಸ್ರೋದ ಪಿಎಸ್‌ಎಲ್‌ವಿ–ಸಿ62 ಮಿಷನ್ ವಿಫಲ : ಇಒಎಸ್–ಎನ್1 ಸೇರಿ 16 ಉಪಗ್ರಹಗಳು ನಾಶ

ರಾಷ್ಟ್ರೀಯ-NationalLatest

ಇಸ್ರೋದ ಪಿಎಸ್‌ಎಲ್‌ವಿ–ಸಿ62 ಮಿಷನ್ ವಿಫಲ : ಇಒಎಸ್–ಎನ್1 ಸೇರಿ 16 ಉಪಗ್ರಹಗಳು ನಾಶ

Back on the launch pad: ISRO's fresh attempt after PSLV-C61 failed

Published January 12, 2026
Share
2 Min Read
ISR ISR ISR
SHARE

ನವದೆಹಲಿ, ಜನವರಿ 12: ಹದಿನಾರು ಉಪಗ್ರಹಗಳನ್ನು ಹೊತ್ತಿದ್ದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಯ ಪಿಎಸ್‌ಎಲ್‌ವಿ–ಸಿ62 ರಾಕೆಟ್ ಉಡಾವಣೆ ವಿಫಲಗೊಂಡಿದೆ. ಉಡಾವಣೆಯ ವೇಳೆ ತಾಂತ್ರಿಕ ವೈಫಲ್ಯ ಕಾಣಿಸಿಕೊಂಡ ಪರಿಣಾಮ ರಾಕೆಟ್ ಗುರಿ ತಪ್ಪಿದ್ದು, ಅದರೊಂದಿಗೆ ಭೂ ವೀಕ್ಷಣಾ ಉಪಗ್ರಹ ಇಒಎಸ್–ಎನ್1 ಸೇರಿದಂತೆ ಒಟ್ಟು 16 ಸೆಟಿಲೈಟ್‌ಗಳು ನಾಶಗೊಂಡಿವೆ.

ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಸ್ಪೇಸ್ ಸೆಂಟರ್‌ನಿಂದ ಬೆಳಗ್ಗೆ 10.18ಕ್ಕೆ ಪಿಎಸ್‌ಎಲ್‌ವಿ–ಸಿ62 ರಾಕೆಟ್ ಉಡಾವಣೆಗೊಂಡಿತ್ತು. ಇಒಎಸ್–ಎನ್1 ಸೇರಿ 15 ಉಪಗ್ರಹಗಳನ್ನು ಸೂರ್ಯ ಸಂಬದ್ಧ ಕಕ್ಷೆಗೆ (Sun Synchronous Orbit) ತಲುಪಿಸುವುದು ಮಿಷನ್‌ನ ಮುಖ್ಯ ಗುರಿಯಾಗಿತ್ತು. ಜೊತೆಗೆ ‘ಕೆಐಡಿ’ ಎಂಬ ಕ್ಯಾಪ್ಸೂಲ್ ಅನ್ನು ಭೂಮಿಗೆ ಸುರಕ್ಷಿತವಾಗಿ ಮರಳಿ ತರುವ ಯೋಜನೆಯೂ ಇತ್ತು.

‘ಕೆಐಡಿ’ (Kestrel Initial Technology Demonstrator) ಕ್ಯಾಪ್ಸೂಲ್ ಅನ್ನು ಸ್ಪೇನ್‌ನ ಕಂಪನಿಯೊಂದು ಅಭಿವೃದ್ಧಿಪಡಿಸಿದ್ದು, ಇದು 25 ಕಿಲೋಗ್ರಾಂ ತೂಕದ ಕ್ಯಾಪ್ಸೂಲ್ ಆಗಿದೆ. ಭೂಮಿಗೆ ಮರುಪ್ರವೇಶ ತಂತ್ರಜ್ಞಾನ ಪರೀಕ್ಷೆಯ ಉದ್ದೇಶದಿಂದ ಇದನ್ನು ರೂಪಿಸಲಾಗಿತ್ತು. ಮಿಷನ್‌ನ ಪ್ರಮುಖ ಉಪಗ್ರಹ ಇಒಎಸ್–ಎನ್1 ಅನ್ನು ಬ್ರಿಟನ್ ಮತ್ತು ಥಾಯ್ಲೆಂಡ್ ಜಂಟಿಯಾಗಿ ಅಭಿವೃದ್ಧಿಪಡಿಸಿವೆ. ಇವುಗಳ ಜೊತೆಗೆ ವಿವಿಧ ದೇಶಗಳ ಒಟ್ಟು 16 ಉಪಗ್ರಹಗಳು ಈ ಮಿಷನ್‌ನಲ್ಲಿ ಸೇರಿದ್ದವು.

ರಾಕೆಟ್ ಉಡಾವಣೆಯ ವೇಳೆ ಸಂಭವಿಸುವ ವೈಫಲ್ಯಕ್ಕೆ ಇಸ್ರೋ ಅಥವಾ ರಾಕೆಟ್ ತಯಾರಕರು ಹೊಣೆಗಾರರಾಗುವುದಿಲ್ಲ ಎಂಬ ನಿಯಮವಿದೆ. ರಸ್ತೆ ಅಪಘಾತದಲ್ಲಿ ಪ್ರಯಾಣಿಕರಿಗೆ ಪರಿಹಾರ ನೀಡುವ ಹೊಣೆ ಬಸ್ ಮಾಲೀಕರ ಮೇಲಾಗಿರದಂತೆ, ರಾಕೆಟ್ ವೈಫಲ್ಯದಿಂದ ಉಪಗ್ರಹ ನಾಶವಾದರೆ ಇಸ್ರೋ ಪರಿಹಾರ ನೀಡಬೇಕೆಂಬ ಕಡ್ಡಾಯವಿಲ್ಲ. ಉಪಗ್ರಹ ತಯಾರಕರು ಬಯಸಿದರೆ ವಿಮೆ ಮಾಡಿಸಿಕೊಳ್ಳುವ ಅವಕಾಶ ಇರುತ್ತದೆ. ವಿಮೆ ಮಾಡಿಸಿರುವ ಕಂಪನಿಗಳಿಗೆ ಮಾತ್ರ ಪರಿಹಾರ ದೊರಕುವ ಸಾಧ್ಯತೆ ಇದೆ.

ಈ ಮಿಷನ್‌ನಲ್ಲಿ ಬ್ರೆಜಿಲ್, ನೇಪಾಳ ಸೇರಿದಂತೆ ಹಲವು ದೇಶಗಳ ಉಪಗ್ರಹಗಳೂ ಸೇರಿದ್ದವು. ಆಯಾ ದೇಶಗಳ ಕಂಪನಿಗಳು ವಿಮೆ ಮಾಡಿಸಿರುವ ಸಾಧ್ಯತೆ ಇದೆ. ಆದರೆ ಇಸ್ರೋ ಅಥವಾ ಭಾರತ ಸರ್ಕಾರದಿಂದ ಯಾವುದೇ ನೇರ ಪರಿಹಾರ ನೀಡಲಾಗುವುದಿಲ್ಲ ಎಂದು ತಿಳಿದುಬಂದಿದೆ.

ಇಸ್ರೋ ಇದುವರೆಗೆ 64 ಬಾರಿ ಪಿಎಸ್‌ಎಲ್‌ವಿ ರಾಕೆಟ್ ಅನ್ನು ಉಡಾವಣೆ ಮಾಡಿದ್ದು, ಇದರಲ್ಲಿ ಐದು ಬಾರಿ ವೈಫಲ್ಯ ಎದುರಾಗಿದೆ. 2025ರಲ್ಲಿಯೂ ಪಿಎಸ್‌ಎಲ್‌ವಿ ಮಿಷನ್ ವಿಫಲವಾಗಿತ್ತು. ಕಳೆದ ಒಂದು ವರ್ಷದಲ್ಲಿ ಸತತ ಎರಡು ಬಾರಿ ಪಿಎಸ್‌ಎಲ್‌ವಿ ವೈಫಲ್ಯ ಕಂಡುಬಂದಿದ್ದರೂ, ಒಟ್ಟು ಸಾಧನೆಯಲ್ಲಿ ಇದು ದೊಡ್ಡ ಹಿನ್ನಡೆಯಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ವಿಶ್ವದ ಅನೇಕ ಬಾಹ್ಯಾಕಾಶ ಸಂಸ್ಥೆಗಳಂತೆ, ಇಲಾನ್ ಮಸ್ಕ್ ಅವರ ಸಂಸ್ಥೆಯ ರಾಕೆಟ್‌ಗಳೂ ಹಲವು ಬಾರಿ ವಿಫಲವಾಗಿರುವ ಉದಾಹರಣೆಗಳಿವೆ.

ರಾಕೆಟ್ ಉಡಾವಣೆ ವಿಫಲವಾದ ಬಳಿಕ ಅದರಲ್ಲಿದ್ದ ಹೆಚ್ಚಿನ ಉಪಗ್ರಹಗಳು ಭೂಮಿಯ ವಾತಾವರಣಕ್ಕೆ ಪ್ರವೇಶಿಸುವ ವೇಳೆ ಸುಟ್ಟು ಹೋಗುವ ಸಾಧ್ಯತೆ ಇದೆ. ಕೆಲವು ಉಪಗ್ರಹ ಅವಶೇಷಗಳು ಕೆಲಕಾಲ ಬಾಹ್ಯಾಕಾಶ ತ್ಯಾಜ್ಯಗಳಾಗಿ ಉಳಿಯಬಹುದು. ರಾಕೆಟ್‌ಗಳನ್ನು ಸಾಮಾನ್ಯವಾಗಿ ಸಮುದ್ರದ ದಿಕ್ಕಿನಲ್ಲಿ ಉಡಾವಣೆ ಮಾಡುವುದರಿಂದ ಅವುಗಳ ಅವಶೇಷಗಳು ಸಮುದ್ರಕ್ಕೆ ಬಿದ್ದು ನಾಶವಾಗುತ್ತವೆ.

You Might Also Like

ಮನೆಯವರಿಂದ ಜಗದೀಶ್ ಮೃತದೇಹಕ್ಕೆ ಅಂತಿಮ ಪೊಜೆ

76ನೇ ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ 942 ಸಿಬ್ಬಂದಿಗಳಿಗೆ ಶೌರ್ಯ ಪ್ರಶಸ್ತಿ ಪ್ರಕಟ

PM Modi in Namibia : ನಮೀಬಿಯಾದಲ್ಲಿ ಪ್ರಧಾನಿ ಮೋದಿ, ಉಭಯ ದೇಶಗಳ ನಡುವೆ ಹಲವು ಒಪ್ಪಂದಗಳ ನಿರೀಕ್ಷೆ

WATCH : ಬೆಂಗಳೂರಿನಲ್ಲಿ ಶಾಲಾ ಬಸ್ ಡ್ರೈವರ್ ಮೇಲೆ ಪುಂಡರ ದಾಳಿ

ಅ.19ರವರೆಗೆ ಶಾಸಕ ಮುನಿರತ್ನಗೆ ನ್ಯಾಯಾಂಗ ಬಂಧನ

TAGGED:ISRO
Share This Article
Facebook Copy Link Print
Previous Article csfsf csfsf csfsf ಕೋಗಿಲು ಬಡಾವಣೆ ಅಕ್ರಮ ತೆರವು ಪ್ರಕರಣ: ಬಿಜೆಪಿ ಸತ್ಯಶೋಧನಾ ತಂಡದಿಂದ ವರದಿ ಸಲ್ಲಿಕೆ
Next Article sdgsgsg sdgsgsg sdgsgsg ಥೈಲ್ಯಾಂಡ್‌ನಲ್ಲಿ ಕಾಮಗಾರಿ ವೇಳೆ ರೈಲಿನ ಮೇಲೆ ಕ್ರೇನ್ ಕುಸಿದು ಬಿದ್ದು 22 ಮಂದಿ ಸಾವು
Leave a Comment Leave a Comment

Leave a Reply Cancel reply

Your email address will not be published. Required fields are marked *

Stay Connected

235.3kFollowersLike
69.1kFollowersFollow
11.6kFollowersPin
56.4kFollowersFollow
136kSubscribersSubscribe
4.4kFollowersFollow
Join Whatsapp
Ad image
Ad imageAd image

Latest News

Trump Trump Trump
ಅಮೆರಿಕಾ-ಇರಾನ್ ಮಾತುಕತೆ : ಇರಾನ್ ಇಂಧನ ತಾಣಗಳ ಮೇಲಿನ ದಾಳಿ ಮುಂದೂಡಿದ ಟ್ರಂಪ್
ವಿದೇಶ-International
March 23, 2026
Samarth Samarth Samarth
ದಾವಣಗೆರೆ ದಕ್ಷಿಣ ಕ್ಷೇತ್ರ ಉಪಚುನಾವಣೆ : ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಸಮರ್ಥ ಶಾಮನೂರು
ರಾಜ್ಯ-Karnataka
March 23, 2026
Meti Meti Meti
ಬಾಗಲಕೋಟೆ ಉಪಚುನಾವಣೆ : ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ನಾಮಪತ್ರ ಸಲ್ಲಿಕೆ
ರಾಜ್ಯ-Karnataka
March 23, 2026
PM Modi PM Modi PM Modi
ಪಶ್ಚಿಮ ಏಷ್ಯಾ ಉದ್ವಿಗ್ನತೆ ನಡುವೆಯೂ ಇಂಧನದ ದೃಷ್ಟಿಯಿಂದ ಭಾರತ ಸುರಕ್ಷಿತವಾಗಿದೆ : ಪ್ರಧಾನಿ ಮೋದಿ
ರಾಷ್ಟ್ರೀಯ-National
March 23, 2026
https://sampoornavaaninews.in/wp-content/uploads/2024/10/WhatsApp-Video-2024-10-04-at-00.03.25_2025f30f.mp4
Follow US
Copyright © 2024 SampoornaVaaniNews. All Rights Reserved | Designed and Developed By Technoy Global Solutions
Welcome Back!

Sign in to your account

Username or Email Address
Password

Lost your password?

Not a member? Sign Up