ಜ್ಞಾನದ ದೀಪ ಬೆಳಗಿಸಿದ ವಿಶ್ವಗುರು ಬಸವಣ್ಣನವರು
12 ನೇ ಶತಮಾನದ ಹಿಂದೂ ಕನ್ನಡ ಕವಿ ಮತ್ತು ತತ್ವಜ್ಞಾನಿ
ವಚನಗಳ ಮೂಲಕ ಜ್ಞಾನದ ಬೆಳಕು ಚೆಲ್ಲಿದ ಮಹಾನ್ ಮಾನವತಾವಾದಿ
ಬಸವಣ್ಣನವರ ಸಂದೇಶ, ಆದರ್ಶಗಳು ಎಲ್ಲರಿಗೂ ಪಾಠ, ದಾರಿ ದೀಪ
ವಿಶ್ವಗುರು ಬಸವಣ್ಣನವರು ಜ್ಞಾನದ ದೀಪ ಹರಿಸಿದ ಮಹಾನ್ ಮಾನವತಾವಾದಿ. ಇವರ ತತ್ವ ಆದರ್ಶಗಳು ಇಂದಿಗೂ ಪಾಠ, ಬದುಕಿಗೆ ದಾರಿ.ಬಸವ ಜಯಂತಿಯು ಬಸವಣ್ಣನವರ ಜನ್ಮ ದಿನಾಚರಣೆಯಾಗಿದೆ. ಬಸವಣ್ಣನವರು 12 ನೇ ಶತಮಾನದ ಹಿಂದೂ ಕನ್ನಡ ಕವಿ ಮತ್ತು ತತ್ವಜ್ಞಾನಿಯಾಗಿದ್ದರು ಮತ್ತು ಲಿಂಗಾಯತ ಸಮುದಾಯದ ಸ್ಥಾಪಕ ಸಂತರಾಗಿದ್ದಾರೆ.
ಬಸವಣ್ಣನವರು ತ್ರಿಮೂರ್ತಿ ದೇವರುಗಳಲ್ಲಿ ಪ್ರಮುಖನಾದ ಶಿವನ ಮಹಾನ್ ಆರಾಧಕರಾಗಿದ್ದರು. ತತ್ವಜ್ಞಾನಿ, ಸಮಾಜ ಸುಧಾರಕ ಮತ್ತು ಸಂತರೆನಿಸಿಕೊಂಡ ಬಸವಣ್ಣನವರು ವೈಶಾಕ ಮಾಸದ ಮೂರನೇ ದಿನದಂದು ಜನಿಸಿದರು ಎನ್ನುವ ನಂಬಿಕೆಯಿದೆ. ಈ ಕಾರಣಕ್ಕಾಗಿ, ಪ್ರತೀ ವರ್ಷ ವೈಶಾಖ ಮಾಸದ ಮೂರನೇ ದಿನದಂದು ಬಸವ ಜಯಂತಿಯನ್ನು ಬಸವಣ್ಣನವರ ಜನ್ಮ ದಿನವನ್ನಾಗಿ ಆಚರಿಸಲಾಗುತ್ತದೆ
ವಿಶ್ವಗುರು ಬಸವಣ್ಣನವರು 1131ರಲ್ಲಿ ಆಧುನಿಕ ಕರ್ನಾಟಕದ ಬಾಗೇವಾಡಿಯಲ್ಲಿ ಜನಿಸಿದರು. ಅವರು ಸಮಾಜದ ಕಲ್ಯಾಣಕ್ಕಾಗಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಸಾಕಷ್ಟು ಸಮಾಜ ವಿರೋಧಿ ಕೆಲಸಗಳನ್ನು ಪ್ರಶ್ನಿಸಿದ್ದರು. ಭಕ್ತಿಯ ಮೂಲಕ ಆಧ್ಯಾತ್ಮಿಕ ಜ್ಞಾನೋದಯವನ್ನು ಪ್ರಚಾರ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಒಂದನೇ ಬಿಜ್ಜಳ ರಾಜನ ಆಸ್ಥಾನದಲ್ಲಿ ಮಂತ್ರಿಯಾಗಿದ್ದ ಬಸವಣ್ಣನವರು ಯಾವಾಗಲೂ ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಗಳನ್ನು ಉತ್ತೇಜಿಸಿಕೊಂಡು ಬಂದವರಾಗಿದ್ದರುಬಸವ ಜಯಂತಿ ಕೇವಲ ಜನ್ಮ ದಿನಾಚರಣೆಯ ಆಚರಣೆಗಿಂತ ಹೆಚ್ಚಿನದಾಗಿದೆ. ಇದು ಬಸವಣ್ಣನವರ ಬೋಧನೆಗಳನ್ನು ನಮ್ಮಲ್ಲಿ ಸ್ಮರಿಸುವ ಮತ್ತು ಹರಡುವ ಒಂದು ಸಂದರ್ಭವಾಗಿದೆ. ಅವರ ಸಾಮರಸ್ಯ, ಸಾಮಾಜಿಕ ನ್ಯಾಯ ಮತ್ತು ಕೆಲಸದ ಮೇಲಿನ ಭಕ್ತಿಯ ಸಂದೇಶವು ಭಾರತದಾದ್ಯಂತ ಜನರನ್ನು ಪ್ರೇರೇಪಿಸುತ್ತ

