ಮೈಸೂರು: ಬಿಜೆಪಿಯವರು ಸೋಮವಾರ ಮಾಡಿರುವ ಧರ್ಮಸ್ಥಳ ಚಲೋ, ಧರ್ಮಯಾತ್ರೆ ಅಲ್ಲ, ಅದೊಂದು ರಾಜಕೀಯ ಯಾತ್ರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.ಮೈಸೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳ ಪ್ರಕರಣವನ್ನು ಎಸ್ ಐಟಿ ಬದಲಾಗಿ ಎನ್ಐಎ ತನಿಖೆ ಮಾಡಿಸಿ ಅಂತ ಹೇಳುತ್ತಿದ್ದಾರೆ, ಅವರು ಪೊಲೀಸರು, ಇವರು ಪೊಲೀಸರು ನಮ್ಮ ಪೊಲೀಸರ ಮೇಲೆ ಬಿಜೆಪಿಗೆ ನಂಬಿಕೆ ಇಲ್ವಾ ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿ ಮೊದಲು ತನಿಖೆ ಮಾಡಿ ಅಂತ ಹೇಳಲೇ ಇಲ್ಲ, ಡೆಡ್ ಬಾಡಿ ಸಿಗದೆ ಹೋದ ಮೇಲೆ ಹೇಳಿಕೆ ಕೊಡಲು ಶುರು ಮಾಡಿದರು, ನಾವು ಎಸ್ಐಟಿ ತನಿಖೆ ಶುರು ಮಾಡಿದ ಕ್ರಮವನ್ನು ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ವೀರೇಂದ್ರ ಹೆಗಡೆ ಅವರೇ ಸ್ವಾಗತ ಮಾಡಿದ್ದಾರೆ, ಅವರ ಮೇಲೆ ಆರೋಪವಿದೆ, ಅವರೆ ಸ್ವಾಗತ ಮಾಡಿದ್ದಾರೆ, ಬಿಜೆಪಿಯರು ಇದರಲ್ಲಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ನಾವು ತನಿಖೆ ಮಾಡಿಸುತ್ತಿದ್ದೇವೆ, ನಿಷ್ಪಕ್ಷಪಾತವಾದ ತನಿಖೆ ನಡೆಯುತ್ತಿದೆ, ನನ್ನನ್ನು ಸೇರಿದಂತೆ ಯಾರು ಕೂಡ ಇದರಲ್ಲಿ ಇಂಟರ್ ಫಿಯರ್ ಆಗುತ್ತಿಲ್ಲ, ಪೊಲೀಸರು ಸಮಗ್ರವಾಗಿ ತನಿಖೆ ನಡೆಸುತ್ತಿದ್ದಾರೆ, ತನಿಾ ವರದಿ ಬಂದ ಮೇಲೆ ಸತ್ಯಾಂಶ ಬಯಲಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿಪ್ರಾಯಪಟ್ಟರು.
ಸೌಜನ್ಯ ಪ್ರಕರಣ ರಿ ಓಪನ್ ಆಗುತ್ತಾ ಎಂಬ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಅವರು, ಸಿಬಿಐ ತನಿಖೆ ಮಾಡಿ ವರದಿ ಕೊಟ್ಟಿದೆ, ಸೌಜನ್ಯ ಕೇಸ್ ಆರೋಪ ಬಂದಿರೋದು ಧರ್ಮಾಧಿಕಾರಿ ವೀರೇಂದ್ರ ಹೆಗಡೆ ಕುಟುಂಬದ ವಿರುದ್ದ. ಕೋರ್ಟ್ ಗೆ ಹೋಗೋದು ಬಿಡೋದು ಸೌಜನ್ಯ ಕುಟುಂಬದವರಿಗೆ ಸೇರಿದ್ದು ಎಂದುಸ್ಪಷ್ಟಡಿಸಿದ್ದಾರೆ.
ವಿದೇಶದಿಂದ ಫಂಡಿಂಗ್ :
ಈ ಪ್ರಕರಣ ಸಂಬಂಧ ವಿದೇಶದಿಂದ ಫಂಡಿಂಗ್ ಬಂದಿದೆ ಎಂಬ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಅವರು, ದುಡ್ಡು ಬಂದಿರೋದು ಬಿಜೆಪಿಗಾ ಎಂದು ಪ್ರಶ್ನಿಸಿದರು. ಅವರು ಇಷ್ಟೆಲ್ಲಾ ಮಾಡುತ್ತಿದ್ದಾರೆ. ಅವರಿಗೆ ಹಣ ಎಲ್ಲಿಂದ ಬರುತ್ತೆ ಎಂದು ಪ್ರಶ್ನಿಸಿದರು. ಈ ಎಲ್ಲಾ ವಿಚಾರಗಳನ್ನು ರಾಜಕೀಯ ಮಾಡಬಾರದು, ವಿರೋಧ ಪಕ್ಷ ಟೀಕೆ ಮಾಡಲಿ, ಇವರು ರಾಜಕೀಯಕ್ಕಾಗಿ ಟೀಕೆ ಮಾಡುತ್ತಿದ್ದಾರೆ, ಇಲ್ಲಸಲ್ಲದ ಸುಳ್ಳುಹೇಳಿ ರಾಜಕೀಯ ಮಾಡುತ್ತಿದ್ದಾರೆ, ಸುಳ್ಳೇ ಇವರ ಬಂಡವಾಳ ಎಂದು ಆರೋಪಿಸಿದರು.

