ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಹುಂಡಿ ಎಣಿಕೆ ಮಾಡಲಾಗಿದೆ .ಭಕ್ತರ ಕಲ್ಪವೃಕ್ಷ ಎಂದೇ ಪ್ರಸಿದ್ಧಿ ಪಡೆದಿರುವ ಶ್ರೀರಾಘವೇಂದ್ರ ಸ್ವಾಮಿಗಳ ದರ್ಶನಕ್ಕಾಗಿ ದೇಶದ ಮೂಲೆ ಮೂಲೆಗಳಿಂದ ದಿನವು ಸಾವಿರಾರು ಜನ ಶ್ರೀಮಠಕ್ಕೆ ಭೇಟಿ ನೀಡಿ ರಾಯರ ದರ್ಶನ ಪಡೆಯುತ್ತಾರೆ. ಹಾಗೇನೇ ರಾಯರಿಗೆ ಭಕ್ತರು ಕಾಣಿಕೆ ಮುಡುಪುಗಳನ್ನೂ ಅರ್ಪಿಸುತ್ತಾರೆ .. ಕಳೆದ 35 ದಿನಗಳ ಅವಧಿಯಲ್ಲಿ ಹುಂಡಿಗೆ ಜಮೆಯಾದ ಹಣ ಎಣಿಕೆ ಕಾರ್ಯ ಶ್ರೀ ಮಠದಲ್ಲಿ ನೆರವೇರಿದ್ದು ಒಟ್ಟು 5,13,04,958/- ರೂ ಹಣ ಹುಂಡಿಯಲ್ಲಿ ಸಂಗ್ರಹವಾಗಿದೆ

