ಹೈದರಾಬಾದ್ : ಭೀಕರ ಘಟನೆಯೊಂದರಲ್ಲಿ ಪತಿ ತನ್ನ ಗರ್ಭಿಣಿ ಪತ್ನಿಯನ್ನು ಕೊಲೆ ಮಾಡಿದ ಬಳಿಕ ಆಕೆಯ ದೇಹವನ್ನು ಪೀಸ್ ಪೀಸ್ ಮಾಡಿ ನದಿಗೆ ಎಸೆದ ಘಟನೆ ನಡೆದಿದ್ದು, ಇದೀಗ ಆರೋಪಿದ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಕೊಲೆ ಮಾಡಿದ ಆರೋಪಿಯನ್ನು ಮಹೇಂದರ್ ರೆಡ್ಡಿ ಎಂದು ಗುರುತಿಸಲಾಗಿದ್ದು, ಪತ್ನಿ ಸ್ವಾತಿಯನ್ನು ಭೀಕರವಾಗಿ ಕೊಲೆ ಮಾಡಿದ್ದ. ತೆಲಂಗಾಣ ರಾಜಧಾನಿ ಹೈದರಾಬಾದ್ನ ಮೆಡಿಪಲ್ಲಿಯ ಉಪನಗರವಾದ ಬಾಲಾಜಿಗುಟ್ಟದಲ್ಲಿ ಈ ಭೀಕರ ಘಟನೆ ನಡೆದಿದೆ.
ಪೊಲೀಸ್ ಮೂಲಗಳ ಪ್ರಕಾರ ವಿಕಾರಾಬಾದ್ ಜಿಲ್ಲೆಯ ಕಾಮರೆಡ್ಡಿಗೂಡಂನ ಸ್ವಾತಿ ಮತ್ತು ಮಹೇಂದರ್ ಪ್ರೀತಿಸಿ ಮದುವೆಯಾಗಿ ಬಾಲಾಜಿ ಗುಟ್ಟ ಪ್ರದೇಶದಲ್ಲಿ ವಾಸಿಸುತ್ತಿದ್ದರು. ಮದುವೆಯಾದ ಬಳಿಕ ಮಹೇಂದರ್ ಪತ್ನಿಯ ಶೀಲದ ಮೇಲೆ ಶಂಕೆ ವ್ಯಕ್ತಪಡಿಸಿದ್ದ. ಈ ನಡುವೆ ಆಕೆ ಗರ್ಭಿಣಿಯಾದ ಬಳಿಕ ಆತನಿಗೆ ಸಂಶಯ ಮತ್ತಷ್ಟು ಹೆಚ್ಚಾಗಲು ಕಾರಣವಾಗಿದೆ.
ಈ ಹಿನ್ನಲೆ ಹೆಂಡತಿ ಸ್ವಾತಿಯನ್ನು ಮನೆಯಲ್ಲಿ ಕೊಂದು, ದೇಹ ತುಂಡುತುಂಡಾಗಿ ಕತ್ತರಿಸಿ ಲೆ, ಕೈ ಮತ್ತು ಕಾಲುಗಳನ್ನು ಮೂಸಿ ನದಿಯಲ್ಲಿ ಎಸೆದಿದ್ದಾನೆ. ಆದರೆ ಹೆಂಡತಿಯ ತಲೆಯನ್ನು ಮಾತ್ರ ಮನೆಯಲ್ಲಿಟ್ಟುಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆದರೆ ಆರೋಪಿ ಸಿಕ್ಕಿಬಿದ್ದಿದ್ದು ಮಾತ್ರ ವಿಚಿತ್ರ, ಹೆಂಡತಿಯನ್ನು ಕೊಲೆ ಮಾಡಿದ ಬಳಿಕ ಆತ ತನ್ನ ಸಹೋದರಿಗೆ ಸ್ವಾತಿ ಕಾಣೆಯಾಗಿದ್ದಾಳೆ ಎಂದು ಪದೇ ಪದೇ ಕರೆ ಮಾಡಿ ತಿಳಿಸಿದ್ದಾನೆ. ಪತ್ನಿ ಕಾಣೆಯಾದ ಬಗ್ಗೆ ಕರೆ ಮಾಡುತ್ತಿದ್ದ ಕಾರಣ, ಅನುಮಾನಗೊಂಡ ಆಕೆಗೆ ಈತನೆ ಕೊಲೆ ಮಾಡಿರಬಹುದು ಎಂದು ಶಂಕಿಸಿದ್ದಾಳೆ. ತನ್ನ ಸಂಬಂಧಿಕರಿಗೆಲ್ಲ ವಿಚಾರ ಮುಟ್ಟಿಸಿದಳು. ನಂತರ ಕಾಣೆಯಾದ ಬಗ್ಗೆ ದೂರು ನೀಡಲು ಪೊಲೀಸ್ ಠಾಣೆಗೆ ಮಹೇಂದರ್ನನ್ನು ಕರೆದೊಯ್ದಾಗ ವಿಚಾರಣೆ ಬೆಳಕಿಗೆ ಬಂದಿದೆ. ವಿಚಾರಣೆ ವೇಳೆ, ಮೊದಲು ಸುಳ್ಳು ಹೇಳಿದ ಮಹೇಂದರ್ ನಂತರ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ದಂಪತಿಗಳು ಮದುವೆಯಾದ ಒಂದು ತಿಂಗಳವರೆಗೆ ಚೆನ್ನಾಗಿಯೇ ಇದ್ದರು. ನಂತರ ಅವರ ನಡುವೆ ಸಣ್ಣಪುಟ್ಟ ಜಗಳಗಳು ಪ್ರಾರಂಭವಾದವು. ಕಳೆದ ವರ್ಷ ಏಪ್ರಿಲ್ 22 ರಂದು, ಸ್ವಾತಿ ವಿಕಾರಾಬಾದ್ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಆ ದೂರಿನ ಮೇರೆಗೆ ಐಪಿಸಿ ಸೆಕ್ಷನ್ 498-ಎ ಮತ್ತು ವರದಕ್ಷಿಣೆ ನಿಷೇಧ ಕಾಯ್ದೆ ಸೆಕ್ಷನ್ 4 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ನಂತರ ಗ್ರಾಮದ ಹಿರಿಯರು ಮಧ್ಯಸ್ಥಿಕೆ ವಹಿಸಿ ರಾಜಿ ಮಾಡಿಸಿದ್ದರು.
ಸ್ವಾತಿ ಪಂಜಗುಟ್ಟದಲ್ಲಿರುವ ಕಾಲ್ ಸೆಂಟರ್ನಲ್ಲಿ ಮೂರು ತಿಂಗಳು ಕೆಲಸ ಮಾಡಿದ್ದಳು. ಆದರೆ ಮಹೇಂದರ್ಗೆ ಆಕೆ ಮೇಲೆ ಅನುಮಾನವಿತ್ತು. ಆಕೆಯ ಚಲನವಲನಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿ ಕೆಲಸಕ್ಕೆ ಹೋಗದಂತೆ ತಡೆದಿದ್ದನು. ಆಗಸ್ಟ್ ವೇಳೆಗೆ, ಆಕೆ ಐದು ತಿಂಗಳ ಗರ್ಭಿಣಿಯಾಗಿದ್ದಳು. ಆದರೂ ಇಬ್ಬರ ನಡುವೆ ಜಗಳಗಳು ಮುಂದುವರೆದಿದ್ದವು.
ಆಗಸ್ಟ್ 22 ರಂದು, ಆಗಸ್ಟ್ 27 ರಂದು ವೈದ್ಯಕೀಯ ತಪಾಸಣೆಗಾಗಿ ವಿಕಾರಾಬಾದ್ಗೆ ಹೋಗುವುದಾಗಿ ಮತ್ತು ನಂತರ ತನ್ನ ತಂದೆ ತಾಯಿಯ ಮನೆಯಲ್ಲಿ ಉಳಿಯುವುದಾಗಿ ಮಹೇಂದರ್ಗೆ ತಿಳಿಸಿದ್ದಳು. ಇದಕ್ಕೆ ಆರೋಪಿ ಆಕ್ಷೇಪಿಸಿದನು. ಇದರಿಂದ ಇಬ್ಬರ ನಡುವೆ ಜಗಳವಾಗಿತ್ತು. ಅದೇ ದಿನ, ಮಹೇಂದರ್ ಆಕೆಯನ್ನು ಕೊಲ್ಲಲು ನಿರ್ಧರಿಸಿದ್ದಾನೆ ಎಂದು ಪದ್ಮಜಾ ಹೇಳಿದ್ದಾರೆ.
ಆತ ಬೊಡುಪ್ಪಲ್ನಲ್ಲಿ ಕೊಡಲಿಯನ್ನು ಖರೀದಿಸಿ ಮನೆಯಲ್ಲಿ ಇಟ್ಟಿದ್ದನು. ಆಗಸ್ಟ್ 23 ರಂದು ಸಾಯಂಕಾಲ 4.30 ರ ಸುಮಾರಿಗೆ, ತನ್ನ ಮನೆಯಲ್ಲಿಯೇ ಸ್ವಾತಿಯನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ಆಕೆಯ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ, ಆ ಭಾಗಗಳನ್ನು ಪ್ರತಾಪಸಿಂಗರಾಮ್ ಬಳಿಯ ಮೂಸಿ ನದಿಯಲ್ಲಿ ಎಸೆದಿದ್ದಾನೆ. ಆಕೆಯ ಮುಂಡವನ್ನು ಮನೆಯಲ್ಲಿಯೇ ಇಟ್ಟುಕೊಂಡಿದ್ದನು. ಮೆಡಿಪಲ್ಲಿ ಪೊಲೀಸರು ಆತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಭಾರತೀಯ ನ್ಯಾಯ ಸಂಹಿತೆಯ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ತ್ವರಿತ ತನಿಖೆ ಮತ್ತು ವಿಚಾರಣೆ ನಡೆಯಲಿದೆʼ ಎಂದು ಡಿಸಿಪಿ ಪಿ ವಿ ಪದ್ಮಜಾ ಹೇಳಿದರು.

