ಬೆಂಗಳೂರು : ರಸ್ತೆಯಲ್ಲಿ ತುಂಬಿದ್ದ ಮಳೆ ನೀರು ಮೋರಿಯಲ್ಲಿ ಸೇರಿದ್ದ ಕಸದಿಂದ ರಸ್ತೆಯ ಮೇಲೆ ನಿಂತಿತ್ತು. ಕಸಗಳನ್ನು ತೆಗೆಯಬೇಕಾದ ಬಿಬಿಎಂಪಿ ಕೆಲಸವನ್ನು ಪುಟಾಣಿ ಯುವಕರು ಮಾಡಿದ್ದಾರೆ.
ಮುಡಿಯಲ್ಲಿ ತುಂಬಿದ ಕಸವನ್ನು ಎತ್ತಿ ನೀರು ಸುಲಭವಾಗಿ ಮೋರಿಯಲ್ಲಿ ಹೋಗಲು ದಾರಿ ಮಾಡಿಕೊಟ್ಟಿದ್ದಾರೆ. ಪ್ರತಿ ಬಾರಿ ಮಳೆಯಾದಾಗ ತಮ್ಮ ಮನೆಗಳ ಮುಂಭಾಗ ಇದೇ ರೀತಿ ನೀರು ನಿಲ್ಲುತ್ತಿದ್ದೋ ಇದರಿಂದ ಬೇಸತ್ತು ಹೋಗಿದ್ದ ಯುವಕರು ತಾವೇ ಖುದ್ದಾಗಿ ಕಸ ತೆಗೆದಿದ್ದಾರೆ.
ಈ ದೃಶ್ಯ ಕಂಡು ಬಂದಿದ್ದು ಜಯನಗರ ಈಸ್ಟ್ ಅಂಡ್ ಬಳಿ. ಹೀಗಾದರೂ ಬಿಬಿಎಂಪಿ ಅಧಿಕಾರಿಗಳು ಎಚ್ಚೆತ್ತುಕೊಂಡು ಮೋರಿಗಳಲ್ಲಿ ತುಂಬಿರುವ ಕಸವನ್ನು ತೆಗೆಯಬೇಕು.

