ಬೆಳಗಾವಿ : ಜಗದ ಕತ್ತೆಲೆ ಕಳೆಯಲು ರವಿ ಚಂದ್ರರು ಇರಬೇಕು. ಅದೇ ರೀತಿ ಮನುಷ್ಯನ ತಾಮಸ ಬುದ್ಧಿ ಎಂಬ ಕತ್ತೆಲೆಯನ್ನು ಕಳೆಯಲು ಜ್ಞಾನ ಜ್ಯೋತಿ ಎಲ್ಲರ ಅಂತಕರಣದಲ್ಲಿ ಬೆಳಗಬೇಕು ಎಂದು ಮುಗಳಖೋಡ-ಜಿಡಗಾ ಮಠದ ಪೀಠಾಧಿಪತಿ ಡಾ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.
ರಾಯಬಾಗ ತಾಲೂಕಿನ ಮುಗಳಖೋಡ ಪಟ್ಟಣದ ಶ್ರೀ ವಿಠ್ಠಲ ರುಕ್ಮೀಣಿ ದೇವಸ್ಥಾನದ ಕಳಸಾರೋಹಣ ನಿಮಿತ್ಯ ಹಮ್ಮಿಕೊಳ್ಳಲಾಗಿದ್ದ ಲಕ್ಷ ದೀಪೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಆಶೀರ್ವಚನ ನೆಡುತಿದ್ದರು. ಪಂಢರಪೂರದ ಶಾಂತಾಬಾಯಿ ಮಾತೋಶ್ರೀ ಸೇರಿದಂತೆ ಸಕಲ ಸದ್ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಎಂ. ಕೆ. ಸಪ್ತಸಾಗರ
ಸಂಪೂರ್ಣ ನ್ಯೂಸ್ ಚಿಕ್ಕೋಡಿ

