ಚಾಮರಾಜನಗರ : ಚಾಮರಾಜನಗರ ಜಿಲ್ಲೆಯ ಮಹಂತಾಳಪುರ ಗ್ರಾಮದ ಸಮೀಪದ ಕಲ್ಲು ಕ್ವಾರಿಯಲ್ಲಿ ಜೋಡಿ ಚಿರತೆ ಅಡಗಿದ್ದು. ಪ್ರತಿನಿತ್ಯ ಎರಡು ಚಿರತೆಗಳೂ ಕೂಡ ರೈತರ ಸಾಕು ಪ್ರಾಣಿಗಳನ್ನು ಕೊಂದು ಆತಂಕ ಸೃಷ್ಟಿಸಿದೆ.
ಕಳೆದ ಮೂರು ದಿನದ ಹಿಂದೆ ಕಲ್ಲು ಕ್ವಾರಿಯಲ್ಲಿ ಎರಡು ಚಿರತೆಗಳು ಪ್ರತ್ಯಕ್ಷವಾಗಿದ್ದು, ಈ ವೇಳೆ ಸ್ಥಳಿಯರು ಮೊಬೈಲಿನಲ್ಲಿ ಚಿರತೆಗಳ ಚಲನವಲನದ ಬಗ್ಗೆ ವಿಡಿಯೋ ಮಾಡಿದ್ರು..
ಇನ್ನು ಅರಣ್ಯ ಇಲಾಕೆ ಚಿರತೆ ಸೆರೆಗೆ ಬೋನು ಅಳವಡಿಸಿದ್ರು. ಒಂದು ಚಿರತೆ ಬೋನಿನಲ್ಲಿ ಸೆರೆಯಾಗಿದೆ. ಇದೀಗ ಆ ಭಾಗದ ರೈತರು ನಿಟ್ಟುಸಿರು ಬಿಟ್ಟಿದ್ದು ಮತ್ತೊಂದು ಚಿರತೆಯನ್ನೂ ಕೂಡ ಸೆರೆ ಹಿಡಿಯುವಂತೆ ಒತ್ತಾಯಿಸಿದ್ದಾರೆ.

