ಜೈಪುರ: ಕಾಂಗ್ರೆಸ್ ಆಡಳಿತದಲ್ಲಿ ಹನುಮಾನ್ ಚಾಲೀಸಾ ಕೇಳುವುದೂ ಅಪರಾಧವಾಗುತ್ತದೆ ಎಂದು ಪ್ರಧಾನಿ ಮೋದಿ (Narendra Modi) ಅವರು ರಾಜಸ್ಥಾನದ (Rajastan) ಟೋಕ್ನಲ್ಲಿ ಬೆಂಗಳೂರಿನ ಉದಾಹರಣೆ ನೀಢಿ ವಾಗ್ದಳಿ ನಡೆಸಿದ್ದಾರೆ.
ಇಂದು ದೇಶಾದ್ಯಂತ ಹನುಮ ಜಯಂತಿ (Hanuma Jyanthi) ಆಚರಿಸಲಾಗುತ್ತಿದೆ. ಇಂದು ಹನುಮ ಜಯಂತಿಯಂದು ನಿಮ್ಮೊಂದಿಗೆ ಮತನಾಡುವಾಗ ಕೆಲ ಹಿಂದಿನ ಘಟನೆಗಳು ನೆನಪಿಗೆ ಬರುತ್ತಿದೆ. ಕೆಲವು ದಿನಗಳ ಹಿಂದೆ ಕಾಂಗ್ರೆಸ್ ಅಡಳಿತವಿರುವ ಕರ್ನಾಟಕದಲ್ಲಿ ಅಂಗಡಿಯೊಂದರಲ್ಲಿ ಕುಳಿತು ಹನುಮಾನ್ ಚಾಲೀಸಾ ಕೇಳೂತ್ತಿದ್ದ ಎಂಬ ಕಾರಣಕ್ಕೆ ಅಂಗಡಿಯವನಿಗೆ ಥಳಿಸಲಾಗಿತ್ತು ನಎಂದು ಅವರು ಏಕಾಏಕಿ ಕಿಡಿಕಾರಿದ್ದರು. ಇದನ್ನೂ ಓದಿ: ಕುಟುಂಬದವರೇ ಮದುವೆ ಮಂಟಪಕ್ಕೆ ನುಗ್ಗಿ ವಧೂವನ್ನು ಎಳೆದೊಯ್ಯಲು ಯತ್ನ

ಮೋದಿ ಹೇಳಿದ್ದೇನು?
ನಿನ್ನೆ ರಾಜಸ್ಥಾನದಲ್ಲಿ ನಾನು ಸಂಪತ್ತಿನ ಮರು ಹಂಚಿಕೆಯ ಕೆಲವು ಸತ್ಯವನ್ನು ದೇಶದ ಮುಂದೆ ಮಂಡಿಸಿದೆ. ಈ ಭಾಷಣದ ಬಳಿಕ ಇಡೀ ಕಾಂಗ್ರೆಸ್ ಮತ್ತು ಇಂಡಿಯಾ ಮೈತ್ರಿಕೂಟವು ತಲ್ಲಣಗೊಂಡಿದೆ. ನಿಮ್ಮ ಆಸ್ತಿಯನ್ನು ಕಿತ್ತುಕೊಂಡು ಅದನ್ನು ತಮ್ಮ ವಿಶೇಷ ಜನರಿಗೆ ಹಂಚಲು ಕಾಂಗ್ರೆಸ್ ಸಂಚು ಮಾಡುತ್ತಿದೆ ಎಂಬ ಸತ್ಯವನ್ನು ನಾನು ಮಂಡಿಸಿದೆ. ನಾನು ಅವರ ರಾಜಕೀಯವನ್ನು ಬಯಲಿಗೆಳೆದಾಗ ಅವರು ನನ್ನನ್ನು ನಿಂದಿಸಲು ಪ್ರಾರಂಭಿಸಿದರು. ಅವರು ಸತ್ಯಕ್ಕೆ ಯಾಕೆ ಹೆದರಬೇಕು? ಅವರು ತಮ್ಮ ನೀತಿಯನ್ನು ಏಕೆ ಮರೆಮಾಡುತ್ತಾರೆ? ನಿಮಗೆ ಧೈರ್ಯವಿದ್ದರೆ ಒಪ್ಪಿಕೊಳ್ಳಿ, ನಾವು ನಿಮ್ಮನ್ನು ಎದುರಿಸಲು ಸಿದ್ಧರಿದ್ದೇವೆ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ:ತಂದೆಯ ಕಾರು ಹರಿದು ಮಗು ದುರ್ಮರಣ
ಕಾಂಗ್ರೆಸ್ ಪಕ್ಷವು ದೇಶದ ಸಂವಿಧಾನದೊಂದಿಗೆ ಆಟವಾಡಿದೆ. ಸಂವಿಧಾನ ರಚನೆಯಾದಾಗ ಎಸ್ಸಿ, ಎಸ್ಟಿ ಮತ್ತು ಒಬಿಸಿ ಜಾತಿಗಳು ರಕ್ಷಣೆ ಪಡೆಯಲು ಧರ್ಮದ ಆಧಾರದ ಮೇಲೆ ಮೀಸಲಾತಿಯನ್ನು ವಿರೋಧಿಸಲಾಯಿತು. ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ತಮ್ಮ ಭಾಷಣದಲ್ಲಿ ದೇಶದ ಸಂಪನ್ಮೂಲಗಳ ಮೇಲೆ ಮೊದಲ ಹಕ್ಕು ಮುಸ್ಲಿಮರಿಗೆ ಇದೆ ಎಂದು ಹೇಳಿದ್ದರು. ಕಾಂಗ್ರೆಸ್ನ ಆಲೋಚನೆ ಯಾವಾಗಲೂ ತುಷ್ಟೀಕರಣ ಮತ್ತು ವೋಟ್ ಬ್ಯಾಂಕ್ ರಾಜಕೀಯವಾಗಿದೆ. 2004ರಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಆಂಧ್ರಪ್ರದೇಶದಲ್ಲಿ ಎಸ್ಸಿ/ಎಸ್ಟಿ ಮೀಸಲಾತಿಯನ್ನು ಕಡಿತಗೊಳಿಸಿ ಮುಸ್ಲಿಮರಿಗೆ ಮೀಸಲಾತಿ ಕಲ್ಪಿಸಲು ಪ್ರಯತ್ನಿಸುವುದು ಅದರ ಮೊದಲ ಕೆಲಸವಾಗಿತ್ತು. ಇದು ಪ್ರಾಯೋಗಿಕ ಯೋಜನೆಯಾಗಿದ್ದು, ಇಡೀ ದೇಶದಲ್ಲಿ ಕಾಂಗ್ರೆಸ್ ಪ್ರಯತ್ನಿಸಲು ಬಯಸಿದೆ. ಇದನ್ನೂ ಓದಿ: ಹುನಮ ಪುಜೆಗೆಂದು ನದಿಗೆ ನೀರು ತರಲು ಹೋದವರು ಹೆಣವಾಗಿ ವಾಪಸ್ಸ್
2004 ಮತ್ತು 2010 ರ ನಡುವೆ, ಆಂಧ್ರಪ್ರದೇಶದಲ್ಲಿ ಮುಸ್ಲಿಂ ಮೀಸಲಾತಿಯನ್ನು ಜಾರಿಗೆ ತರಲು ಕಾಂಗ್ರೆಸ್ ನಾಲ್ಕು ಬಾರಿ ಪ್ರಯತ್ನಿಸಿತು. ಆದರೆ, ಕಾನೂನು ಅಡೆತಡೆಗಳು ಮತ್ತು ಸುಪ್ರೀಂ ಕೋರ್ಟ್ನ ಜಾಗೃತಿಯಿಂದಾಗಿ ಅವರು ಅವರ ಯೋಜನೆಗಳನ್ನು ಈಡೇರಿಸಲು ಸಾಧ್ಯವಾಗಲಿಲ್ಲ. 2011ರಲ್ಲಿ ಕಾಂಗ್ರೆಸ್ ಇದನ್ನು ದೇಶಾದ್ಯಂತ ಜಾರಿಗೆ ತರಲು ಪ್ರಯತ್ನಿಸಿತು. ಎಸ್ಸಿ/ಎಸ್ಟಿ ಮತ್ತು ಒಬಿಸಿಯವರಿಗೆ ನೀಡಿದ್ದ ಹಕ್ಕುಗಳನ್ನು ಕಿತ್ತುಕೊಂಡು ಮತಬ್ಯಾಂಕ್ ರಾಜಕಾರಣಕ್ಕಾಗಿ ಇತರರಿಗೆ ನೀಡಿದ್ದಾರೆ. ಇದೆಲ್ಲ ಸಂವಿಧಾನದ ಮೂಲ ಆಶಯಕ್ಕೆ ವಿರುದ್ಧ ಎಂದು ಗೊತ್ತಿದ್ದೇ ಕಾಂಗ್ರೆಸ್ ಈ ಎಲ್ಲ ಪ್ರಯತ್ನಗಳನ್ನು ಮಾಡಿದೆ. ಆದರೆ ಕಾಂಗ್ರೆಸ್ಗೆ ಸಂವಿಧಾನದ ಬಗ್ಗೆ ಕಾಳಜಿ ಇಲ್ಲ. ಇದನ್ನೂ ಓದಿ: ಮತದಾನ ತಯಾರಿ ಬಗ್ಗೆ ಚುನಾವಣಾಧಿಕಾರಿಗಳು ಹೇಳಿದ್ದು ಏನು?

