ಜನಸೇನಾ ಪಕ್ಷದ ಸಂಸ್ಥಾಪಕ ಪವನ್ ಕಲ್ಯಾಣ್ (Pavan kalyan) ಅವರು ಚುನಾವಣೆ ಪ್ರಚಾರದಲ್ಲಿ ಬ್ಯುಸಿಯಾಗಿದ್ದು ಅವರಿಗೆ ವರುಣ್ತೇಜ್ (Varun Tej) , ಅಲ್ಲು ಅರ್ಜುನ್ (Allu Arjun) ಸೇರಿದಂತೆ ಬೆಂಬಲ ಸೂಚಿಸಿದ್ದರು. ಜೊತೆಗೆ ಮೆಗಾ ಸ್ಟಾರ್ ಚಿರಂಜೀವಿ (Cheeranjivi) ಕೂಡ ಪವನ್ ಆಶಯಗಳಿಗೆ ಜನ ಬೆಂಬಲಿಸಬೇಕು ಎಂದಿದ್ದರು. ಆದರೆ ಅವರ ಹೊಸ ಹೇಳಿಕೆ ಚಿರಂಜೀವಿ ಯೂ-ಟರ್ನ್ (U-Turn) ಹೊಡೆದಿದ್ದಾರೆಯೇ ಎಂಬ ಅನುಮಾನ ಮೂಡಿಸುತ್ತಿದೆ.
ಜನಸೇನಾ ಪಕ್ಷವನ್ನು ಪವನ್ ಕಲ್ಯಾಣ್ ಅವರು ಸ್ಥಾಪಿಸಿ ಹತ್ತು ವರ್ಷಗಳಾಗಿವೆ. ಆದರೆ ಅವರಿಗೆ ಕಳೆದ ಕೆಲವು ಚುನಾವಣೆಗಳಲ್ಲಿ ನಿರೀಕ್ಷಿತ ಯಶಸ್ಸು ಸಿಕ್ಕಿರಿಲಿಲ್ಲ. ಆದರೆ ಈ ಬಾರಿ ಅವರಿಗೆ ಇತರೆ ರಾಜಕೀಯ ಪಕ್ಷಗಳ ಜೊತೆಗೆ ಸಿನಿಮಾ ರಂಗದವರ ಬೆಂಬಲ ಜೋರಾಗಿಯೇ ಇದೆ. ಈ ಬಾರಿಯ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗಳಲ್ಲಿ ಪವನ್ ಪಕ್ಷ ಛಾಪು ಮೂಡಿಸುವ ಸಾಧ್ಯತೆ ಇದೆ. ಈ ಹಿಂದೆ ಮುನಿಸಿಕೊಂಡಿದ್ದ ಅಣ್ಣ ಮೆಗಾಸ್ಟಾರ್ ಚಿರಂಜೀವಿ ಸಹ ಪವನ್ ಕಲ್ಯಾಣ್?ಗೆ ಬೆಂಬಲ ಸೂಚಿಸಿದ್ದಾರೆ. ಆದರೆ ಬೆಂಬಲ ಸೂಚಿಸಿದ ಕೆಲವೇ ದಿನಗಳಲ್ಲಿ ಚಿರಂಜೀವಿ ಯೂ-ಟರ್ನ್ ಹೊಡೆದರಾ ಎಂಬ ಅನುಮಾನವೂ ಮೂಡಿದೆ.
ಇತ್ತೀಚೆಗಷ್ಟೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮೆಗಾಸ್ಟಾರ್ ಚಿರಂಜೀವಿ ಅವರು ಒಂದು ವಿಡಿಯೋ ಪೋಸ್ಟ್ ಮಾಡಿ ಸಹೊದರ ಪವನ್ಗೆ ಸಮಾಜ ಸೇವೆ ಮಾಡುವ ಅತೀವ ಆಸೆಯಿದೆಯೆಂದು, ಪವನ್ ಜನಪರ ಕಾಳಜಿ ಇರುವ ವ್ಯಕ್ತಿಯೆಂದು ಎಂದು ಪವನ್ ಪರ ಚಿರಂಜೀವಿ ಮಾತನಾಡಿ, ಈ ಬಾರಿ ಪವನ್ಗೆ ಬೆಂಬಲ ನೀಡಬೇಕೆಂದು ಮನವಿ ಮಾಡಿಕೊಂಡಿದ್ದರು.
ಅಭಿಮಾನಿಗಳಿಗೂ ಕೂಡ ಚಿರಂಜೀವಿ ಅವರ ಬೆಂಬಲ ನೋಎಇ ಬಹಳ ಸಂಸತವಾಗಿತ್ತು. ಇದ್ದಾದ ಕೆಲವೇ ದಿನಗಳ ನಂತರ ಅವರಿಗೆ ಪದ್ಮವಿಭೂಷಣ ಪ್ರಶಸ್ತಿ ಪ್ರಧಾನ ಮಾಡಲಾಯ್ತು. ದೆಹಲಿಯಲ್ಲಿ ಪ್ರಶಸ್ತಿ ಸ್ವೀಕರಿಸಿ ಹೈದರಾಬಾದ್ಗೆ ಬಂದ ಚಿರಂಜೀವಿ, ಮಾಧ್ಯಮಗಳೊಟ್ಟಿಗೆ ಮಾತನಾಡುತ್ತಾ, ತಮಗೆ ಯಾವುದೇ ರಾಜಕೀಯ ಪಕ್ಷದೊಟ್ಟಿಗೆ ಸಂಬAಧ ಇಲ್ಲವೆಂದು ಚಿರಂಜೀವಿ ಹೇಳಿದ್ದಾರೆ.
ಇದು ಅಭಿಮಾನಿಗಳಲ್ಲಿ ಗೊಂದಲ ಮೂಡಿಸಿದೆ. ಪವನ್ ಕಲ್ಯಾಣ್ ಹಾಗೂ ಅವರ ಪಕ್ಷಕ್ಕೆ ಬೆಂಬಲಿಸಿ ಎಂದು ಮನವಿ ಮಾಡಿದ್ದ ಚಿರಂಜೀವಿ, ಈಗ ತಾವು ಯಾವುದೇ ರಾಜಕೀಯ ಪಕ್ಷದೊಟ್ಟಿಗೆ ಗುರುತಿಸಿಕೊಂಡಿಲ್ಲ ಎಂದಿರುವುದು ವೈರುಧ್ಯದ ಹೇಳಿಕೆ ಎಂಬ ವಿಶ್ಲೇಷಣೆಗಳು ಆರಂಭವಾಗಿವೆ. ಪವನ್ರ ಜನಸೇನಾ ಪಕ್ಷವನ್ನು ಚಿರಂಜೀವಿ ಸೇರ್ಪಡೆಗೊಳ್ಳುತ್ತಾರೆ ಎಂಬ ಸುದ್ದಿ ಕಳೆದ ಕೆಲ ತಿಂಗಳುಗಳಿಂದ ಜೋರಾಗಿ ಹರಿದಾಡಿತ್ತು. ಚಿರಂಜೀವಿ, ಪವನ್ ಪಕ್ಷಕ್ಕೆ ದೇಣಿಗೆ ನೀಡಿದ್ದು ಈ ಅನುಮಾನಗಳಿಗೆ ಪುಷ್ಠಿ ತುಂಬಿತ್ತು. ಆದರೆ ಈಗ ಚಿರಂಜೀವಿ, ತಾವು ರಾಜಕೀಯ ಪಕ್ಷದಿಂದ ದೂರವೇ ಉಳಿಯುವುದಾಗಿ ಹೇಳಿರುವುದು ಪವನ್ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ.