Hosakote: ಗ್ರಾಮದ ಆಂಜನೇಯಸ್ವಾಮಿ ದೇವಸ್ಥಾನವನ್ನು ಗುರುತಿಸಲಾಗದ ಕಿಡಿಗೇಡಿಗಳು ರಾತ್ರೋರಾತ್ರಿ ಜೆಸಿಬಿ ಬಳಸಿ ನೆಲಸಮ ಮಾಡಿರುವ ಘಟನೆ ಸ್ಥಳೀಯರಲ್ಲಿ ಆಕ್ರೋಶ ಮೂಡಿಸಿದೆ.
ಗ್ರಾಮದ ಕೆಲವರು ಬಾರ್ ತೆರೆಯಲು ಸಲ್ಲಿಸಿದ್ದ ಅರ್ಜಿಗೆ, “ಬಾರ್ ಬಳಿಯೇ ದೇವಸ್ಥಾನ ಇರುವ ಕಾರಣ ಅನುಮತಿ ನೀಡಬಾರದು” ಎಂದು ದೇವಸ್ಥಾನ ಸಮಿತಿ ಅಬಕಾರಿ ಇಲಾಖೆಗೆ ಆಕ್ಷೇಪ ಸಲ್ಲಿಸಿತ್ತು. ಇದಕ್ಕೂ ಬೆನ್ನಿಗೇ ಬಾರ್ ಲೈಸೆನ್ಸ್ಗೆ ಅಡ್ಡಿಯಾಗಿದೆ ಎಂಬ ಕಾರಣಕ್ಕೆ ದೇವಸ್ಥಾನವನ್ನು ಧ್ವಂಸ ಮಾಡಲಾಗಿದೆ ಎಂಬ ಗಂಭೀರ ಆರೋಪ ಹೊರಬಿದ್ದಿದೆ.
ಬೆಳಿಗ್ಗೆ ವಾಕಿಂಗ್ಗೆ ಬಂದಿದ್ದ ಸ್ಥಳೀಯರು ದೇವಸ್ಥಾನ ಧ್ವಂಸಗೊಂಡಿರುವುದು ಗಮನಿಸಿ, ತಕ್ಷಣವೇ ನಂದಗುಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಪೊಲೀಸರು ಮತ್ತು ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ದೇವಸ್ಥಾನ ಧ್ವಂಸಕ್ಕೆ ಕಾರಣರಾದವರ ಪತ್ತೆಗೆ ತನಿಖೆ ಆರಂಭಿಸಲಾಗಿದೆ.

