ಕುಣಿಗಲ್ : ಪಟ್ಟಣದ ಶಾಸಕರ ಕಚೇರಿಯಲ್ಲಿ ಇಂದು ಜಾತಿಗಣತಿಯ ಗೊಂದಲಗಳನ್ನು ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಹತ್ತು ವರ್ಷದಿಂದ ಪ್ರಾರಂಭಗೊಂಡಿದ್ದ ಜಾತಿಗಣತಿ, ಸಂಪುಟ ಸಭೆಯಲ್ಲಿ ಚರ್ಚೆ ಮಾಡುವ ಸಂದರ್ಭದಲ್ಲಿ, ಎಲ್ಲಾ ಸಮುದಾಯದ ಹಿರಿಕರ ಕಳವಳಿಗಳನ್ನು ಪರಿಗಣನೆಗೆ ತೆಗೆದುಕೊಂಡು ನಂತರ ಮಾನ್ಯ ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು 90 ದಿನಗಳಲ್ಲಿ ಮರು ಜಾತಿಗಣತಿಯನ್ನು ಸಂಪುಟ ಸಭೆಗೆ ತೆಗೆದುಕೊಂಡಿರುವುದಕ್ಕೆ ನಮ್ಮ ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರುಗಳು, ನಂತರ ಎಲ್ಲಾ ಸಮುದಾಯದ ಜನತೆಗಳು ವಿಶೇಷವಾಗಿ ಅಭಿನಂದನೆ ಸಲ್ಲಿಸುತ್ತೇವೆ ಎಂದು ಮಾತನಾಡಿದರು,,
ನಾಗಮೋಹನ್ ದಾಸ್ ಅವರ ಅಧ್ಯಕ್ಷತೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜಾತಿಗಣತಿಯ ಪ್ರಕ್ರಿಯೆ ನಡೆಯುತ್ತಿರುವುದು ತಮ್ಮೆಲ್ಲರ ಗಮನದಲ್ಲಿರುತ್ತದೆ, ಅದರಂತೆ ಎಲ್ಲಾ ಸಮುದಾಯ ವರ್ಗದವರ, ಮತ್ತೊಮ್ಮೆ 90 ದಿನಗಳಲ್ಲಿ ಮಾಡುತ್ತೇವೆ ಎಂದು ರಾಜ್ಯ ಸರ್ಕಾರದ ನಿಲುವಿಗೆ, ಬಹಳ ಸಂತೋಷದಿಂದ ಬರ ಮಾಡಿಕೊಳ್ಳುತ್ತೇವೆ,ಅಭಿನಂದಿಸುತ್ತೇವೆ , ಹಾಗೂ ಸ್ವೀಕರಿಸುತ್ತೇವೆ ಎಂದು ತಿಳಿಸಿದರು,,
ನಮ್ಮ ತಾಲೂಕಿನ ಜನತೆಗೆ ಮುಂದಿನ ದಿನಗಳಲ್ಲಿ ಜಾತಿಗಣತಿಯ ಪ್ರಕ್ರಿಯೆ ಪ್ರಾರಂಭಗೊಂಡಾಗ, ಆ ವ್ಯವಸ್ಥೆಗೆ ನಾವುಗಳು ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ, ಶಕ್ತಿ ಸಿಗುವಂತಹ ಜಾತಿಗಣತಿಗೆ ನಾವೆಲ್ಲರೂ ಸಹ ಹೆಚ್ಚಿನ ಪ್ರಾಮುಖ್ಯತೆಯನ್ನು ಕೊಟ್ಟು ತಮ್ಮ ತಮ್ಮ ಜಾತಿಯನ್ನು ನೋಂದಾಯಿಸಿಕೊಂಡು ಸರ್ಕಾರದ ಗಮನಕ್ಕೆ ತರುವ ಈ ಒಂದು ಪ್ರಕ್ರಿಯೆಗೆ ಪಾಲ್ಗೊಳ್ಳಬೇಕು ಎಂದು ಮಾತನಾಡಿದರು,,
ಸರ್ಕಾರದ ಗಮನಕ್ಕೆ ತರುವ ಪ್ರಕ್ರಿಯೆಗೆ ಎಲ್ಲರೂ ಸಹ ಭಾಗವಹಿಸಬೇಕು ಎಂದು ನಾನು ಮನವಿ ಮಾಡುತ್ತಿದ್ದೇನೆ ಈ ಜಾತಿಗಣತಿಗೆ ಮುಂದಿನ ದಿನಗಳಲ್ಲಿ, ತೆಗೆದುಕೊಂಡು ಅಂತಹ ಸರ್ಕಾರದ ನಿಲುವಿಗೆ ಎಲ್ಲರಿಗೂ ಅನುಕೂಲ ವಾಗುವಂತೆ ಎಲ್ಲಾ ಸಮುದಾಯ ವರ್ಗದವರಿಗೂ ಸಮಪಾಲು, ಸಮಬಾಳು, ಎಂದು ನಮ್ಮ ಕುವೆಂಪುರವರ ಈ ನುಡಿಗಳ ಮಾರ್ಗದರ್ಶನದಂತೆ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ರವರು, ಎಲ್ಲ ಜಾತಿ ವರ್ಗದವರಿಗೆ ಸಮಾನತೆಯ ಶಕ್ತಿಯನ್ನು ಕೊಡುವುದರ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಂಡು ಯಾವುದೇ ಹಿಂದುಳಿದ ವರ್ಗಗಳಿಗೂ ಅನ್ಯಾಯವಾಗದಂತೆ ಸರಿಸಮಾನವಾಗಿ, ಸರಿ ತೂಕವಾಗಿ, ನಾವು ನ್ಯಾಯವನ್ನು ಒದಗಿಸುತ್ತೇವೆ, ಈ ಹಿಂದೆ ಕೊಟ್ಟಿರುವ ಮಾತಿಗೆ ತಕ್ಕಂತೆ ನಾವು ನಡೆಯಬೇಕು ಎಂದು ಮಾತನಾಡಿದರು,,
ಈ ಸಮೀಕ್ಷೆಯನ್ನು ಮರು ಸಮಿತಿ ಮಾಡಿ 90 ದಿನಗಳಲ್ಲಿ ಮಾಡಿಕೊಡುತ್ತೇವೆ,ಸರ್ಕಾರದ ಘೋಷಣೆ ಪ್ರಕಾರ ವಿಶೇಷವಾದ ನ್ಯಾಯ ಒದಗಿಸಿ ಕೊಡುತ್ತೇವೆ, ರಾಜ್ಯ ಸರ್ಕಾರ ನುಡಿದಂತೆ ನಡೆಯುತ್ತಿದೆ, ಮುಂದೆಯೂ ಸಹ ನಮ್ಮ ತಾಲೂಕಿನ ಜನತೆಗೆ ನಮ್ಮ ಸರ್ಕಾರದಿಂದ ಸಿಗುವಂತಹ ಎಲ್ಲಾ ಸೌಲಭ್ಯಗಳನ್ನು ಜನರಿಗೆ ತಲುಪಿಸುವಲ್ಲಿ ನಾವು ಯಶಸ್ವಿಯಾಗುತ್ತೇವೆ ಎಂದು ತಿಳಿಸಿದರು,,
ಸರ್ಕಾರದ (11A) ಕಾಲಂನ ಅಧಿಕಾರದ ಅಡಿ ಪ್ರತಿ 10 ವರ್ಷಕ್ಕೊಮ್ಮೆ ಜಾತಿಗಣತಿ ಮಾಡಬೇಕಿರುವ ಕಾರ್ಯಕ್ರಮ ಪ್ರಕ್ರಿಯೆ ಇದ್ದು, ಹತ್ತು ವರ್ಷದ ಹಿಂದೆ ಇದ್ದಂತಹ ಜಾತಿಗಣತಿ ಬದಲಾವಣೆ ಆಗಿರುವುದು ಸರ್ಕಾರದ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ವಿಶೇಷವಾಗಿ ಜಾತಿಗಣತಿಯನ್ನು ಡಿಜಿಟಲ್ ಮೂಲಕ ಮಾಡಬೇಕು ಎಂದು ಸರ್ಕಾರ ಹೆಜ್ಜೆ ಇಟ್ಟಿದೆ, ಆದ್ದರಿಂದ ನಾನು ಸರ್ಕಾರಕ್ಕೆ ವಿಶೇಷವಾಗಿ ಅಭಿನಂದನೆಯನ್ನು ತಿಳಿಸುತ್ತೇನೆ ಎಂದು ಮಾತನಾಡಿದರು,,
ಕಾನೂನಾತ್ಮಕವಾಗಿ ಹಾಗೂ ವೈಜ್ಞಾನಿಕವಾಗಿ ಯಾವ ಜಾತಿ ಜಾತಿಗೆ ಸೀಮಿತರಾಗಿದ್ದೀರಿ ಅವುಗಳನ್ನು ನೊಂದಾಯಿಸಿಕೊಳ್ಳಬೇಕು, ಆಡಿಟಿಂಗ್ ಗೆ ಪರಿಪೂರ್ಣವಾಗಿ ತಮ್ಮೆಲ್ಲರ ಸಹಕಾರ ಬಹಳ ಪ್ರಾಮುಖ್ಯತೆ ಮುಖ್ಯ ಎಂದು ಮಾತನಾಡಿದರು,, ನಮ್ಮ ತಾಲೂಕು ಕರ್ನಾಟಕ ರಾಜ್ಯಕ್ಕೆ ವಿಶೇಷವಾಗಿ ಎಲ್ಲಾ ಪ್ರಜೆಗಳಿಗೂ ನಾನು ಮನವಿ ಮಾಡುತ್ತೇನೆ ಎಂದರು,,
ಜಾತಿ ಗಣತಿ ವಿಚಾರವಾಗಿ ವಿರೋಧ ಪಕ್ಷದವರು ಯಾವುದೇ ಕಾರಣಕ್ಕೂ ನಾವುಗಳು ಜಾತಿಗಣತಿ ಮಾಡುವುದಕ್ಕೆ ಬಿಡುವುದಿಲ್ಲ, ಎಂದು ಅಡ್ಡಿಪಡಿಸುತ್ತಿದ್ದರು, ನಂತರ ಮರು ಸಮೀಕ್ಷೆ ಮಾಡಲು ಹೊರಟಿರುವ ಸಂದರ್ಭದಲ್ಲಿ ಹಣ ವ್ಯಯ ಆಗಿದೆ, ಎಂದು ಮಾತನಾಡುವ ಬದಲು ಈ ಹಿಂದಿನ ಸಮೀಕ್ಷೆಯನ್ನು ಪರಿಶೀಲಿಸಿ ಎಂದು ಸರ್ಕಾರಕ್ಕೆ ಒತ್ತಾಯ ಮಾಡಬೇಕಿತ್ತು, ಎಂದು ವಿರೋಧ ಪಕ್ಷದ ವಿರುದ್ಧ ಕಿಡಿಕಾರಿದರು,,
ಲಿಂಕ್ ಕೆನಾಲ್ ಬಗ್ಗೆ ಮಾತನಾಡಿದ ಶಾಸಕ ಎಚ್ ಡಿ ರಂಗನಾಥ್ ರವರು ಈ ದಿನ ಕ್ಯಾಬಿನೆಟ್ ನಲ್ಲಿ ಚರ್ಚೆಯಾಗಿದ್ದು ನಾವು ಯಾವುದೇ ಕಾರಣಕ್ಕೂ ಹಿಂಜರಿಯುವುದಿಲ್ಲ ತಾಲೂಕಿನ ರೈತರಿಗೋಸ್ಕರ ನಮ್ಮ ಪ್ರಾಣವನ್ನು ಸಹ ಹೋರಾಟ ಮಾಡುತ್ತೇವೆ, ಸರ್ಕಾರದ ನಿಯಮಗಳನ್ನು ಪಾಲಿಸುವುದು ನಮ್ಮೆಲ್ಲರ ಮುಖ್ಯ ಉದ್ದೇಶ ಎಂದು ಮಾತನಾಡಿದರು, ಸಚಿವ ವಿ ಸೋಮಣ್ಣನವರು ಉಪಮುಖ್ಯಮಂತ್ರಿ ಹಾಗೂ ಸಚಿವರುಗಳನ್ನು ಭೇಟಿ ಮಾಡಿ ಸಮಯ ತೆಗೆದುಕೊಂಡು ಅವರ ಗೊಂದಲಗಳನ್ನು ನಿವಾರಣೆ ಮಾಡುವುದಕ್ಕೆ ನಮ್ಮ ಸರ್ಕಾರ ಹಾಗೂ ಉಪಮುಖ್ಯಮಂತ್ರಿಗಳು ಟೈಮ್ ಕೊಡುವುದಕ್ಕೆ ಮಾತನಾಡುತ್ತಿದ್ದಾರೆ, ಶೀಘ್ರದಲ್ಲೇ ಲಿಂಕ್ ಕೆನಾಲ್ ಕಾಮಗಾರಿ ಮುಂದುವರಿಯುತ್ತದೆ ಎಂದು ತಿಳಿಸಿದರು,,
ವರದಿ ನರಸಿಂಹರಾಜು