ಮೈಸೂರು : ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಅಪ್ರಾಪ್ತ ಬಾಲಕಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಕಿಂಗ್ ವಿಚಾರಗಳು ಬೆಳಕಿಗೆ ಬರುತ್ತಿದೆ.ಈಗಾಗಲೇ ಬಾಲಕಿ ಮರಣೋತ್ತರ ರಿಪೋರ್ಟ್ ಹೊರಬಿದ್ದಿದ್ದು, ಆರೋಪಿ ಕಾರ್ತಿಕ್ ಪೈಶಾಚಿಕ ಕೃತ್ಯಗಳು ಎಲ್ಲರನ್ನೂ ಬೆಚ್ಚಿಬೀಳಿಸಿದೆ.
ಮೃತ ಬಾಲಕಿಯನ್ನು ರೇಪ್ ಮಾಡಿ ಮರ್ಡರ್ ಮಾಡುವ ವೇಳೆ ಈತ 19ಬಾರಿ ಚಾಕುವಿನಿಂದ ಇರಿದಿರೋ ವಿಚಾರ ಗೊತ್ತಾಗಿದೆ. ಕಣ್ಣು, ಕಿವಿಗಳನ್ನು ಕಚ್ಚಿ ಹಾಗೂ ಚುಚ್ಚಿ ಬಾಲಕಿಗೆ ಚಿತ್ರಹಿಂಸೆ ನೀಡಿರೋದು ತನಿಖೆ ವೇಳೆ ಬಯಲಾಗಿದೆ.
ಅಜ್ಜಿ ಪಕ್ಕದಲ್ಲಿ ಮಲಗಿದ್ದವಳನ್ನು ಕಿಡ್ನ್ಯಾಪ್ ಮಾಡಿ ಹೊತ್ತೋಯ್ತಿದ್ದ ಕಾರ್ತಿಕ್, ಕೊಲೆಗೈದು ಆಕೆ ವಾಸವಾಗಿದ್ದ ಟೆಂಟ್ ಬಳಿಯೇ ಶವ ಬಿಸಾಡಿ ಪರಾರಿಯಾಗಿದ್ದ ಎಂದು ಪೊಲೀಸ್ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಇನ್ನು, ಕುಡಿದ ನಶೆಯಲ್ಲಿಯೇ ಕಾರ್ತಿಕ್ ಬಾಲಕಿ ಮೇಲೆ ಅತ್ಯಾಚಾರ ಮಾಡಿರೋದು ದೃಢವಾಗಿದೆ. ಎಣ್ಣೆ ನಶೆಯಲ್ಲಿ ಭೀಕರವಾಗಿ ಕೊಲೆಗೈದಿದ್ದಾನೆ ಎಂದು ಮರಣೋತ್ತರ ಪರೀಕ್ಷೆಯಲ್ಲಿ ಗೊತ್ತಾಗಿದೆ. ಹಾಗೆಯೇ ವೈದ್ಯಕೀಯ ಪರೀಕ್ಷೆಯಲ್ಲಿ ರೇಪಿಸ್ಟ್ ಕಾರ್ತಿಕ್ ಅತಿಯಾಗಿ ಮದ್ಯ ಸೇವನೆ ಮಾಡಿದ್ದ ಎಂದು ತಿಳಿದು ಬಂದಿದೆ. ಕೆಲವೇ ದಿನದಲ್ಲಿ ಕಾರ್ತಿಕ್ ನನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸುವ ಸಾಧ್ಯತೆ ಇದೆ.
ಹಕ್ಕಿಪಿಕ್ಕಿ ಜನಾಂಗದ ಸುಮಾರು 50 ಕುಟುಂಬಗಳು ಗುಲ್ಬರ್ಗದಿಂದ ದಸರಾ ವೇಳೆ ಬಲೂನ್ ವ್ಯಾಪಾರಕ್ಕಾಗಿ ಮೈಸೂರಿಗೆ ಬಂದಿದ್ದರು. ಈ ವೇಳೆ ಕಾರ್ತಿಕ್ ಕುಡಿದು ಕಾರ್ತಿಕ್ ಕೃತ್ಯವೆಸಗಿದ್ದಾನೆ. ಸದ್ಯ ಖಾಕಿ ವಶದಲ್ಲಿ ಕಾರ್ತಿಕ್ ಇದ್ದಾನೆ. ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ.

