ಕುಣಿಗಲ್ : ಸಾಧಾರಣ ಟೀ ಹೋಟೆಲ್ ನಡೆಸುವ ಶಿವರಾಮು ಹಾಗೂ ಯಶೋಧ ದಂಪತಿಗಳ ಮಗಳಾದ “ನವ್ಯಶ್ರೀ ” ಸ್ಪೀಡ್ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನು ಗೆದ್ದು ಅಂತರಾಷ್ಟ್ರೀಯ ಸ್ಪರ್ಧೆಗೆ ಆಯ್ಕೆಯಾಗಿರುವುದರಿಂದ ಕುಣಿಗಲ್ ತಾಲೂಕಿನ ಜನತೆ ನವ್ಯಶ್ರೀಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ,, ಮೇ 20 ರಿಂದ 30ರವರೆಗೆ ನಡೆಯಲಿರುವ ಅಂತರಾಷ್ಟ್ರೀಯ ಸ್ಕೇಟಿಂಗ್ ಸ್ಪರ್ಧೆಗೆ ಭಾರತ ದೇಶದ ಪ್ರತಿನಿಧಿಯಾಗಿ ಕುಣಿಗಲ್ನ ವಿದ್ಯಾರ್ಥಿನಿ ಕುಮಾರಿ ನವ್ಯಶ್ರೀ ಶ್ರೀ ಲಕ್ಷ್ಮಿ ಆಯ್ಕೆ ಆಗುವ ಮೂಲಕ ತಾಲೂಕಿಗೆ ಕೀರ್ತಿ ತಂದಿರುವುದು ಶ್ಲಾಘನೀಯ,,
ಪಟ್ಟಣದ ಬಿಜಿಎಸ್ ಪಬ್ಲಿಕ್ ಶಾಲೆಯಲ್ಲಿ ಪ್ರಸ್ತುತ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಕುಮಾರಿ ನವ್ಯಶ್ರೀ ಎಂಬ ವಿದ್ಯಾರ್ಥಿನಿ ಕೆಲವು ವರ್ಷಗಳಿಂದ ಸ್ಕೇಟಿಂಗ್ ಕ್ರೀಡೆಯಲ್ಲಿ ವಿಜೇತರಾಗಿ ಹಲವು ಪ್ರಶಸ್ತಿಗಳನ್ನು ಗಳಿಸುವ ಮೂಲಕ ರಾಜ್ಯ ಅಂತರಾಷ್ಟ್ರೀಯ ಮಟ್ಟದಲ್ಲಿ ತನ್ನದೇ ಆದ ಚಾಪೂ ಮೂಡಿಸಿಕೊಂಡಿರುವ, ಏಕೆ ಕುಣಿಗಲ್ನಲ್ಲಿ ಕಾಫಿ ಟೀ ಹಾಗೂ ವಡೆ ಬೋಂಡ ವ್ಯಾಪಾರ ಮಾಡಿ ಜೀವನ ನಡೆಸುತ್ತಿದ್ದು ಮಗಳಿಗೆ ಉತ್ತಮವಾದ ಜೀವನ ಕೊಡುವುದು ತಂದೆ-ತಾಯಿಯ ಧ್ಯೇಯವಾಗಿದೆ,,
ಇನ್ನು ಈ ಸಂದರ್ಭದಲ್ಲಿ ಅಂಬೇಡ್ಕರ್ ಜಯಂತಿಯಂದು ಕುಣಿಗಲ್ ಕ್ಷೇತ್ರದ ಜನಪ್ರಿಯ ಶಾಸಕರಾದ” ಹೆಚ್ ಡಿ ರಂಗನಾಥ್ “ರವರು , ನಾನು ವೈಯಕ್ತಿಕವಾಗಿ ನನ್ನ ಕೈಲಾದ ಸಹಾಯ ಮಾಡುತ್ತೇನೆ,ಎಂದು ತಿಳಿಸಿದ್ದರೂ ಅದರಂತೆ ಇಂಡೋನೇಷ್ಯಾಗೆ ತೆರಳುತ್ತಿರುವ ಚಿನ್ನದ ಪದಕ ಗೆದ್ದ ನವ್ಯಶ್ರೀ ಎಂಬ ವಿದ್ಯಾರ್ಥಿನಿಗೆ 25,000 ಪ್ರೋತ್ಸಾಹ ಧನ ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ,,
ಶಾಸಕರ ಈ ಮಾನವೀಯತೆ ಬಗ್ಗೆ ಮಾತನಾಡಿದ ನವ್ಯಶ್ರೀ ಹಾಗೂ ಅವರ ಕುಟುಂಬದವರು ನಮ್ಮ ತಾಲೂಕಿನಲ್ಲಿ ಇಂತಹ ಶಾಸಕರು ಬಹಳ ಪ್ರಾಮುಖ್ಯತೆಯಾಗಿದೆ, ತಾಲೂಕಿನ ಜನತೆ ಯಾವುದೇ ಕಷ್ಟದಲ್ಲಿದ್ದರೂ ಸಹ ತಕ್ಷಣದಲ್ಲಿ ಸ್ಪಂದಿಸುವ ಕೆಲಸದಲ್ಲಿ ತೊಡಗಿರುತ್ತಾರೆ, ಇನ್ನು ಎಂಎಲ್ಎ ಸಾಹೇಬರು ನಮ್ಮ ಮಗಳಿಗೆ ವೈಯಕ್ತಿಕವಾಗಿ ಸಹಾಯಧನ ಮಾಡಿ ತಾಲೂಕಿನ ಎಲ್ಲ ಜನತೆಯ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದು ತಿಳಿಸಿದರು,,
ವರದಿ : ನರಸಿಂಹರಾಜು,

