ಬೆಂಗಳೂರು: ವರಮಹಾಲಕ್ಷ್ಮೀ ಹಬ್ಬದ ಹಿನ್ನೆಲೆ ಅರಿಶಿನ, ಕುಂಕುಮ ತೆಗೆದುಕೊಳ್ಳಲು ಹೋಗಿದ್ದ ನವವಿವಾಹಿತ ಲಾರಿ ಡಿಕ್ಕಿ ಹೊಡೆದು ಸಾವನಪ್ಪಿರುವ ಘಟನೆ ಬೆಂಗಳೂರು ಲಗ್ಗೆರೆ ಬ್ರಿಡ್ಜ್ ಬಳಿ ನಡೆದಿದೆ.
23 ವರ್ಷದ ಗೀತಾ ಎಂಬಾಕೆ ಅಪಘಾತಕ್ಕೆ ಬಲಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಈಕೆ ಎರಡೂವರೆ ತಿಂಗಳ ಹಿಂದೆಯಷ್ಟೇ ಸುನೀಲ್ ಎಂಬಾತನೊಂದಿಗೆ ಮದುವೆಯಾಗಿದ್ದರು.
ನಿನ್ನ ಹಬ್ಬದ ಸಮಯದಲ್ಲಿ ಚಂದ್ರಲೇಔಟ್ನ ತನ್ನ ತವರು ಮನೆಗೆ ಬಂದಿದ್ದರು. ಅಲ್ಲಿಂದ ಗೀತಾ ಮತ್ತು ಸುನೀಲ್ ಮಧ್ಯಾಹ್ನ ಅರಿಶಿನ ಕುಂಕುಮವನ್ನು ಪಡೆಯಲು ನಂದಿನಿ ಲೇಔಟ್ನ ನಾದಿನಿ ಮನೆಗೆ ಹೊರಟಿದ್ದಾಗ ಲಗರ ಬ್ರಿಡ್ಜ್ ಬಳಿ ಲಾರಿ ಡಿಕ್ಕಿ ಹೊಡೆದಿದ್ದು, ಗೀತಾ ತಲೆಗೆ ತೀವ್ರ ಪೆಟ್ಟು ಬಿದ್ದಿದೆ.
ಪರಿಣಾಮ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಈ ಘಟನೆಯನ್ನು ರಾಜಾಜಿನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

