ಕುಣಿಗಲ್ : ರಾಗಿ ಖರೀದಿ ಕೇಂದ್ರದಲ್ಲಿ ಅಧಿಕಾರಿಗಳಿಗೆ ಜವಾಬ್ದಾರಿಯೇ ಇಲ್ಲದಂತಾಗಿದ್ದು ಎದ್ದು ಕಾಣುತ್ತಿದೆ,ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು, 50 ಕೆಜಿ ರಾಗಿಯನ್ನು ಮಾತ್ರ ತೆಗೆದುಕೊಳ್ಳಬೇಕು ಆದರೆ ಇಲ್ಲಿ ಬಡ ರೈತರ ಹತ್ತಿರ 51 ಕೆಜಿ 52 ಕೆಜಿ ರಾಗಿಯನ್ನು ಬಳಸಿಕೊಳ್ಳುತ್ತಿದ್ದಾರೆ, ರೈತರು ಕೇಳಲು ಹೋದರೆ ದರ್ಪದಿಂದ ಹೆದರಿಸುತ್ತಿದ್ದಾರೆ ಎಂದು ಅಲ್ಲಿನ ರೈತರು ತಿಳಿಸಿದರು,
ಪ್ರತಿನಿತ್ಯ ಮಳೆ ಸುರಿಯುತ್ತಿರುವುದರಿಂದ ಅಧಿಕಾರಿಗಳು ಆದಷ್ಟು ಬೇಗ ರೈತರಿಗೆ ಅನುಕೂಲವಾಗುವಂತೆ ರಾಗಿಯನ್ನು ತೆಗೆದುಕೊಳ್ಳಬೇಕು,ಚಾವಣಿಯ ಶೀಟ್ ಗಳೆಲ್ಲ ಒಡೆದಿರುವುದರಿಂದ ಪ್ರತಿನಿತ್ಯ ಬರುವ ಮಳೆಗೆ, ರಾಗಿ ಮೂಟೆಗಳು ಸಂಪೂರ್ಣ ಹಾಳಾಗುತ್ತವೆ, ಇದಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಿಕೊಡಬೇಕು, ಒಂದು ಶೀಲಕ್ಕೆ 3 ರೂ ಹಣವನ್ನು ತೆಗೆದುಕೊಳ್ಳುತ್ತಿದ್ದಾರೆ, ಈ ಜಾಗದಲ್ಲಿ ಸೂಕ್ತ ಸಿಸಿ ಕ್ಯಾಮೆರಾವನ್ನು ಅಳವಡಿಸಬೇಕು,ಎಂದರು, 4 5 ದಿನಗಳಾದರೂ ರಾಗಿ ತೆಗೆದುಕೊಳ್ಳುವುದಿಲ್ಲ, ಹೆಚ್ಚಿನದಾಗಿ ಲೇಬರ್ ಗಳನ್ನು ತೆಗೆದುಕೊಂಡು ಕೆಲಸ ಮಾಡಿಸಬೇಕು, ಇಲ್ಲದಿದ್ದರೆ ರೈತರಿಗೆ ತುಂಬಾ ಅನಾನುಕೂಲವಾಗುತ್ತದೆ ಎಂದು ತಿಳಿಸಿದರು,,
ಇನ್ನೂ ಪ್ರತಿನಿತ್ಯ ನಮ್ಮ ತಾಲೂಕಿನ ಹೆಮ್ಮೆಯ ಶಾಸಕರಾದ “ಹೆಚ್ ಡಿ, ರಂಗನಾಥ್” ರವರು ಈ ವರ್ಷ ಬೆಳಗ್ಗಿನ ತಿಂಡಿ ಮತ್ತು ಮಧ್ಯಾಹ್ನದ ಊಟದ ಊಟದ ವ್ಯವಸ್ಥೆ ಮಾಡಿದ್ದಾರೆ, ಅವರಿಗೆ ಅಭಿನಂದನೆಗಳನ್ನು ತಿಳಿಸಬೇಕು, ಯಾವ ವರ್ಷವೂ ಸಹ ಊಟದ ವ್ಯವಸ್ಥೆ ಮಾಡಿರಲಿಲ್ಲ ನಮ್ಮ ರೈತರಿಗೆ ಸೂಕ್ತ ಅನುಕೂಲತೆ ಮಾಡಿ ಕೊಟ್ಟಿದ್ದಾರೆ, ರೈತರಿಗೆ ಸದಾ ಕಾಲ ಸ್ಪಂದಿಸುತ್ತಿದ್ದಾರೆ,ನಾವುಗಳು ಅದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು,,
ವರದಿ : ನರಸಿಂಹರಾಜು

