ಕುಣಿಗಲ್ : ತಾಲೂಕಿನ ಹುತ್ರಿದುರ್ಗ ಹೋಬಳಿ ಕೆಂಪನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಕರ್ತವ್ಯದ ಸಮಯದಲ್ಲಿ ಸಾರ್ವಜನಿಕರ ಕೈಗೆ ಸಿಗದ ಅಧಿಕಾರಿಗಳು,ಕರ್ತವ್ಯದ ಅವಧಿ ಮುಗಿಯುವ ಮುನ್ನವೇ ಪಂಚಾಯಿತಿಯಿಂದ ಕಾಲ್ಕಿತ್ತಿದ್ದಾರೆ,ಎಂದು ಅಲ್ಲಿನ ನಾಗರೀಕರು ಆರೋಪಿಸಿದ್ದಾರೆ, ಇಲ್ಲಿನ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಯಾವೊಬ್ಬ ಅಧಿಕಾರಿ ಹಾಗೂ ಸಿಬ್ಬಂದಿಗಳು ಕೂಡ ಇಲ್ಲ, ಎಂದು ತಿಳಿಸಿದ್ದಾರೆ, ಗ್ರಾಮೀಣ ಭಾಗದ ಸಾಕಷ್ಟು ಜನರು ನಾನಾ ಕೆಲಸಗಳಿಗಾಗಿ ಗ್ರಾ. ಪಂ,ಕಚೇರಿಗಳಿಗೆ ಬರುತ್ತಾರೆ, ಆದರೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ,ಕಾರ್ಯದರ್ಶಿ,ಹಾಗೂ ಬಿಲ್ ಕಲೆಕ್ಟರ್, ಕಂಪ್ಯೂಟರ್ ಆಪರೇಟರ್, ಎಸ್ ಡಿ ಎ, ಸಿಬ್ಬಂದಿಗಳು ಸರಿಯಾಗಿ ಸಾರ್ವಜನಿಕರ ಕೈಗೆ ಸಿಗದ ಹಿನ್ನೆಲೆಯಲ್ಲಿ ಜನರು ತೊಂದರೆ ಅನುಭವಿಸುವ ಪರಿಸ್ಥಿತಿ ಉಂಟಾಗಿದೆ, ಅದರಲ್ಲಿಯೂ ಕೆಲವು ಸಿಬ್ಬಂದಿ ಒಂದೊಂದು ದಿನ ಕಚೇರಿಗೆ ಬರದಿರುವ ಬಗ್ಗೆಯೂ ದೂರುಗಳು ಕೇಳಿ ಬಂದಿದ್ದವು, ಎಂದು ತಿಳಿಸಿದ್ದಾರೆ,
ಕುಣಿಗಲ್ ತಾಲೂಕಿನ ಹುತ್ರಿ ದುರ್ಗ ಹೋಬಳಿಗೆ ಸೇರಿದ ಕೆಂಪನಹಳ್ಳಿ ಗ್ರಾಮ ಪಂಚಾಯಿತಿ ಒಂದಾಗಿದ್ದು, ಗ್ರಾಮೀಣ ಭಾಗಗಳಲ್ಲಿ ಕಚೇರಿಗಳಿಗೆ ಸರಿಯಾದ ಸಮಯಕ್ಕೆ ಹಾಜರಾಗದೆ ಜನರಿಂದ ತಪ್ಪಿಸಿಕೊಂಡು ತಿರುಗಾಡುತ್ತಿದ್ದಾರೆ, ಸರಿಯಾದ ಸಮಯಕ್ಕೆ ಕಚೇರಿಗೆ ಬರದಂತಹ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಮೇಲಾಧಿಕಾರಿಗಳು ಸೂಕ್ತ ಗಮನಹರಿಸಬೇಕು ಎಂದು ಅಲ್ಲಿನ ನಾಗರಿಕರು ತಿಳಿಸಿದರು,
ಅಕ್ರಮ ಈ ಸ್ವತ್ತು ಮಾಡಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ
13.10.2021 ರಲ್ಲಿ ಗಂಗಚಿಕ್ಕಯ್ಯ ಬಿನ್ S/O ಲೇ ಚಿಕ್ಕಯ್ಯ ಎಂಬುವರಿಗೆ ಈ ಸ್ವತ್ತು ಆಗಿರುತ್ತದೆ, ನಂತರ ಅದೇ ಜಾಗವನ್ನು 14.12.2023 ರಂದು ಚಿಕ್ಕ ವೆಂಕಟಯ್ಯ, ಬಿನ್ ಮೋಟಯ್ಯ (ಮುಡ್ಲಯ್ಯ) ಎಂಬುವರ ನಕಲಿ ದಾಖಲೆಯನ್ನು ಸೃಷ್ಟಿಸಿ ಕೆಂಪನಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯಯಾದ ಹೆಚ್,ಪಿ,ರಾಜಶೇಖರ್ ಎಂಬುವರು ಅಕ್ರಮವಾಗಿ ಈ ಸ್ವತ್ತನ್ನು ಅವರ ಹೆಸರಿಗೆ ಮಾಡಿಕೊಟ್ಟು, ನಂತರ ದಲಿತ ಹಕ್ಕುಗಳ ಸಮಿತಿ(DHS) ಸಂಘಟನೆಯನ್ನು ದುರ್ಬಳಕೆ ಮಾಡಿಕೊಂಡು ಅಲ್ಲಿನ ಅಕ್ಕಪಕ್ಕದ ದಲಿತ ಕುಟುಂಬಗಳಿಗೆ ತುಂಬಾ ತೊಂದರೆ ಉಂಟು ಮಾಡುತ್ತಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ,
ಗಂಗಚಿಕ್ಕಯ್ಯ,ಬಿನ್ ಲೇಟ್, ಚಿಕ್ಕಯ್ಯನವರ ಹೆಸರಿಗೆ ಈ ಸ್ವತ್ತು ಖಾತೆ ಇದ್ದು ಇವರು ಮತ್ತು ಇವರ ಕುಟುಂಬದವರು ಹುಷಾರಿಲ್ಲದ ಕಾರಣ ಬೆಂಗಳೂರಿನಲ್ಲಿ ವಾಸವಾಗಿದ್ದು ನಂತರ ಅವರು ಮರಣ ಹೊಂದಿರುತ್ತಾರೆ,
ಇವರ ಕುಟುಂಬದವರಿಗೆ ಗೊತ್ತಿಲ್ಲದಂತೆ ಅದೇ ಗ್ರಾಮದ ವಾಸಿಯಾದ ಚಿಕ್ಕವೆಂಕಟಯ್ಯ, ಬಿನ್ ಲೇಟ್ ಮೂಡ್ಲಯ್ಯ, ಎಂಬುವವರು ಬೆಲೆಬಾಳುವ ಜಾಗವನ್ನು ಒಡೆಯಲು ಪಿಡಿಓ ಅವರಿಗೆ ಲಂಚ ಕೊಟ್ಟು ಸುಳ್ಳು ಇ -ಸ್ವತ್ತು ಮಾಡಿಸಿಕೊಂಡಿದ್ದಾರೆ, ಆದ್ದರಿಂದ ಈ ಬಗ್ಗೆ ಖುದ್ದು ದಾಖಲಾತಿಗಳನ್ನು ಪರಿಶೀಲಿಸಿ, ಪಿಡಿಓ ರವರ ಮೇಲೆ ಕಾನೂನು ಕ್ರಮ ಜರುಗಿಸಿ ಇ-ಸ್ವತ್ತನ್ನು ವಜಾ ಮಾಡಬೇಕು,ಎಂದು ಅಲ್ಲಿನ ದಲಿತ ಮುಖಂಡರಾದ ಚಿಕ್ಕರಾಮಯ್ಯನವರು ತಿಳಿಸಿದ್ದಾರೆ,,
ಅಧಿಕಾರಿಗಳ ವಿರುದ್ಧ ದೂರು ನೀಡಿದರು ಸಹ ಯಾವುದೇ ರೀತಿ ಗಮನಹರಿಸದ ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ :
ಅಧಿಕಾರಿಗಳ ಬಗ್ಗೆ ದೂರು ನೀಡಿದ್ದರು ಸಹ ಇಲ್ಲಿಯವರೆಗೂ ಯಾವುದೇ ರೀತಿ ಕ್ರಮ ಕೈಗೊಳ್ಳದೆ ಉಡಾಫೆ ಉತ್ತರವನ್ನು ನೀಡುತ್ತಿದ್ದಾರೆ ಎಂದು ನಾಗರಿಕರು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ, ಮೇಲಾಧಿಕಾರಿಗಳು ಮೂರು ದಿನಗಳಿಗೊಮ್ಮೆ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಪರಿಶೀಲಿಸಬೇಕು, ಅಧಿಕಾರಿ ಹಾಗೂ ಸಿಬ್ಬಂದಿಗಳ ಮೇಲೆ ಸೂಕ್ತ ಗಮನಹರಿಸಬೇಕು ಎಂದು ಮನವಿ ಮಾಡಿದ್ದಾರೆ,,
ವರದಿ : ನರಸಿಂಹರಾಜು

