ತಮಿಳುನಾಡಿನ ತಿರುವಣ್ಣಾಮಲೈ ಜಿಲ್ಲೆಯ ಅರಲುಮಿಗು ರೇಣುಗುಂಬಲ ಅಮ್ಮಾನ್ ದೇವಾಲಯದ ಹುಂಡಿಯಲ್ಲಿ ಆಸ್ತಿ ಪತ್ರ ಪತ್ತೆಯಾಗಿದ್ದು ಎಲ್ಲರೂ ಮೂಕ ವಿಸ್ಮಿತರಾಗಿದ್ದರು . ಹೌದು ಬರೋಬ್ಬರಿ 4 ಕೋಟಿ ಮೌಲ್ಯದ ಆಸ್ತಿಯ ದಾಖಲೆ ಪತ್ರ ನೋಡಿ ದೇವಸ್ಥಾನದ ಸಿಬ್ಬಂದಿ ಕಂಗಾಲಾಗಿದ್ದರು .
ಯಾಕೆಂದರೆ ವ್ಯಕ್ತಿಯೊಬ್ಬರು ತಮಗೆ ಸೇರಿದ ಎಲ್ಲಾ ಆಸ್ತಿಗಳನ್ನು ದೇವಾಲಯಕ್ಕೆ ಮಾರಲು ನಿರ್ಧರಿಸಿ ಹುಂಡಿಗೆ ಹಾಕಿದ್ದಾರೆ ಎಂದು ತಿಳಿದು ಬಂದಿದೆ. ಜೂನ್ 24 ರಂದು ದೇಗುಲದ ಸಿಬ್ಬಂದಿ ಹುಂಡಿ ಎಣಿಕೆ ಕಾರ್ಯ ನಡೆಸಿದಾಗ ಆಸ್ತಿ ಪತ್ರೆ ಪತ್ತೆಯಾಗಿದೆ. ನಿವೃತ್ತ ಸೇನಾಧಿಕಾರಿ ವಿಜಯನ್ ಅವರು ಬಾಲ್ಯದಿಂದಲೂ ರೇಣುಗುಂಬಲ ಅಮ್ಮನ ಅಪ್ಪಟ ಭಕ್ತರಾಗಿದ್ದಾರಂತೆ .
ಇವರು ಕಳೆದ 10 ವರ್ಷಗಳಿಂದ ಪತ್ನಿಯಿಂದ ಪ್ರತ್ಯೇಕವಾಗಿ ವಾಸವಿರೋದರಿಂದ ಕುಟುಂಬದಿಂದ ಬೆಂಬಲ ಇಲ್ಲದೆ ಬದುಕುತ್ತಿದ್ದಾರಂತೆ . ವಿಜಯನ್ ಅವರ ಪತ್ನಿ ಜೊತೆ ಇರುವ ಇಬ್ಬರು ಹೆಣ್ಣು ಮಕ್ಕಳು ತಮಗೆ ಆಸ್ತಿ ಬೇಕು ಎಂದು ಗಲಾಟೆ ಮಾಡುತ್ತಿದ್ದಾರಂತೆ. ಗಲಾಟೆಯಿಂದ ಬೇಸತ್ತು, ಮಕ್ಕಳಿಂದ ಆಗುತ್ತಿರುವ ಅಪಮಾನ, ಕಿರುಕುಳ ಸಹಿಸಲಾಗದೇ ದೇವರ ಹುಂಡಿಗೆ ಆಸ್ತಿ ಪತ್ರ ಹಾಕಿದ್ದಾರೆ ಎಂದು ತಿಳಿದು ಬಂದಿದೆ .
ಸದ್ಯದ ವರದಿಗಳ ಪ್ರಕಾರ ಮಕ್ಕಳು ನನಗೆ ದಿನ ನಿತ್ಯದ ಖರ್ಚಿಗೂ ಹಣ ನೀಡದೇ ಸತಾಯಿಸುತ್ತಿದ್ದಾರೆ. ಆಸ್ತಿ ಮಾರಿಕೊಡುವಂತೆ ಒತ್ತಾಯಿಸುತ್ತಿದ್ದಾರೆ. ನನ್ನನ್ನು ಚೆನ್ನಾಗಿ ನೋಡಿಕೊಳ್ಳದ ಅವರಿಗೆ ಆಸ್ತಿ ಸಿಗಬಾರದು. ಅಧಿಕೃತವಾಗಿ ಕಾನೂನು ಬದ್ಧವಾಗಿ ಆಸ್ತಿಯನ್ನು ದೇವರಿಗೆ ಕೊಡುತ್ತೇನೆ ಎಂದು ತಿಳಿಸಿದ್ದಾರೆ ಎಂದು ತಿಳಿದುಬಂದಿದೆ

