ನವದೆಹಲಿ : ಕಳೆದ ಕೆಲವು ದಿನಗಳ ಹಿಂದೆ ಬೆಂಗಳೂರಿನ ಮಹದೇವಪುರ ಲೋಕಸಭಾ ಕ್ಷೇತ್ರದಲ್ಲಿ ಮತಗಳ್ಳತನ ನಡೆದಿದೆ. ಅಲ್ಲದೆ ಆಳಂದ್ ಕ್ಷೇತ್ರದಲ್ಲೂ ಕೂಡ ಮತಗಳ್ಳತನ ನಡೆದಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪ ಮಾಡಿದ್ದರು. ಇದರ ಬೆನ್ನಲ್ಲೆ ಇದೀಗ ಹರಿಯಾಣದಲ್ಲಿ 25 ಲಕ್ಷ ಮತಗಳ ಅಂತರ ನಡೆದಿದೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.
ದೆಹಲಿಯ ಕಾಂಗ್ರೆಸ್ ಕಚೇರಿಯಲ್ಲಿ ರಾಹುಲ್ ಗಾಂಧಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಹರಿಯಾಣ ವಿಧಾನಸಭಾ ಚುನಾವಣೆಯಲ್ಲೂ ಮತಗಳ್ಳತನ ನಡೆದಿದೆ. ಸಿಎಂ ನಯಾಬ್ ಸಿಂಗ್ ಸೈನಿ ಮಾತು ಉಲ್ಲೇಖಿಸಿ ಈ ಒಂದು ಆರೋಪ ಮಾಡಿದ್ದು, ಸಿಎಂ ನವಾಬ್ ಸಿಂಗ್ ಸೈನಿ ವ್ಯವಸ್ಥೆ ಎಂದು ಹೇಳಿದ್ದಾರೆ ಅವರ ಮುಖದಲ್ಲಿ ನಗು ನೋಡಿ ನಮ್ಮ ಬಳಿ ಎಲ್ಲಾ ವ್ಯವಸ್ಥೆಗಳಿವೆ ಅಂತ ಸಿಎಂ ಹೇಳಿದ್ದರು.
22 ಸಾವಿರ ಮತಗಳ ಅಂತರ ನಮ್ಮ ಹಾಗೂ ಅವರ ನಡುವೆ ಇದೆ. ಈ ಮಹಿಳೆ ಹರಿಯಾಣದ 10 ಬೂತ್ ಗಳಲ್ಲಿ ಮತದಾನ ಮಾಡಿದ್ದಾಳೆ. ಬೇರೆ ಬೇರೆ ಹೆಸರಿನಲ್ಲಿ ಈ ಮಹಿಳೆ ಮತದಾನ ಮಾಡಿದ್ದಾಳೆ.
ರಾಯಿ ಕ್ಷೇತ್ರದ 10 ಬೂತ್ ಗಳಲ್ಲಿ 22 ಮತಗಳನ್ನು ಹಾಕಿದ್ದಾಳೆ. ಬರೋಬ್ಬರಿ 25 ಲಕ್ಷ ಮತಗಳ್ಳತನಕ್ಕೆ ಸಾಕ್ಷಿಯಾಗಿದ್ದಾಳೆ. ಚುನಾವಣಾ ಸಮೀಕ್ಷೆಗಳಲ್ಲಿ ಕಾಂಗ್ರೆಸ್ ಪರ ವರದಿಗಳು ಬಂದಿದ್ದವು.
ಫಲಿತಾಂಶದ ಬಳಿಕ ಬಿಜೆಪಿ ಅಭ್ಯರ್ಥಿಗಳು ಗೆದ್ದಿದ್ದರು. ನಾನು ಹೇಳುತ್ತಿರುವುದು 100% ಸತ್ಯ. ಮಧ್ಯಪ್ರದೇಶ ಮಹಾರಾಷ್ಟ್ರ ಛತ್ತೀಸ್ಗಡದಲ್ಲೂ ಇದೇ ರೀತಿ ದೂರು ನೀಡಲಾಗಿದೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದ ಚುನಾವಣೆಗೆ ಒಂದು ದಿನ ಮೊದಲು ರಾಹುಲ್ ಗಾಂಧಿಯವರ ಈ ಹೇಳಿಕೆ ಬಂದಿದೆ. ಎರಡನೇ ಹಂತದ ಚುನಾವಣೆ ನವೆಂಬರ್ 11 ರಂದು ನಡೆಯಲಿದ್ದು, ಎಣಿಕೆ ನವೆಂಬರ್ 14 ರಂದು ನಡೆಯಲಿದೆ.
ಸೆಪ್ಟೆಂಬರ್ 1 ರಂದು, ಗಾಂಧಿಯವರು ತಮ್ಮ ಪಕ್ಷವು ಮತ ಕಳ್ಳತನದ ಬಗ್ಗೆ ಪುರಾವೆಗಳ “ಹೈಡ್ರೋಜನ್ ಬಾಂಬ್” ಅನ್ನು ಬಿಡುಗಡೆ ಮಾಡುವುದಾಗಿ ಹೇಳಿದ್ದರು.
ಸೆಪ್ಟೆಂಬರ್ 18 ರಂದು, ಕರ್ನಾಟಕದಲ್ಲಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ವ್ಯವಸ್ಥಿತವಾಗಿ ಅಳಿಸಲು ಕೇಂದ್ರೀಕೃತ ಸಾಫ್ಟ್ವೇರ್ ಪ್ರೋಗ್ರಾಂ ಅನ್ನು ಬಳಸಲಾಗುತ್ತಿದೆ ಎಂದು ಗಾಂಧಿಯವರು ಹೇಳಿಕೊಂಡರು ಮತ್ತು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ “ಮತ ಕಳ್ಳತನ” ಮಾಡುವವರನ್ನು ರಕ್ಷಿಸುತ್ತಿದ್ದಾರೆ ಎಂದು ಆರೋಪಿಸಿದರು.
ಮತದಾರರ ಪಟ್ಟಿ ಅಳಿಸುವಿಕೆ ಪ್ರಕ್ರಿಯೆಯು ನಿರ್ದಿಷ್ಟವಾಗಿ ಕಾಂಗ್ರೆಸ್ ಪ್ರಾಬಲ್ಯ ಹೊಂದಿದ್ದ ಮತಗಟ್ಟೆಗಳನ್ನು ಗುರಿಯಾಗಿಸಿಕೊಂಡಿದೆ ಎಂದು ಗಾಂಧಿ ಆರೋಪಿಸಿದರು.
ಕರ್ನಾಟಕದ ಆಳಂದ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ವಿಶ್ಲೇಷಣೆಯು ಅಪರಿಚಿತ ಸಂಸ್ಥೆಯೊಂದು ಕೇಂದ್ರೀಕೃತ ರೀತಿಯಲ್ಲಿ ಮತದಾರರನ್ನು ಅಳಿಸಲು ಸಾಫ್ಟ್ವೇರ್ ಬಳಸಿದೆ ಎಂದು ತೋರಿಸಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ಹೇಳಿದರು.

