ಮುಂಬೈ: ಮಹಾರಾಷ್ಟ್ರದ ಮಾಜಿ ಶಾಸಕ, ಬೀಡ್ ಜಿಲ್ಲೆಯ ಬಿಜೆಪಿ ನಾಯಕ ಆರ್.ಟಿ.ದೇಶ್ಮುಖ್ ಲಾತೂರ್ನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ತೀವ್ರ ಗಾಯಗೊಂಡಿದ್ದ, ಕಾರಿನ ಮುಂಭಾಗದಲ್ಲಿದ್ದ ದೇಶಮುಖ್ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ ಎಂದು ವರದಿ ಹೇಳಿದೆ.
ಸೋಮವಾರ (ಮೇ 26) ಸಂಜೆ ಈ ದುರ್ಘಟನೆ ನಡೆದಿದೆ ದೇಶ್ಮುಖ್ ತುಲ್ಜಾಪುರ-ಲಾತೂರ್ ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದಾಗ ಮಧ್ಯ ಮಹಾರಾಷ್ಟ್ರ ಜಿಲ್ಲೆಯ ಬೆಲ್ಕುಂಡ್ ಗ್ರಾಮದ ಬಳಿಯ ಫ್ಲೈಓವರ್ನಲ್ಲಿ ಸಂಜೆ 4.15ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ.
“ಕಾರು ಫ್ಲೈಓವರ್ಗೆ ಪ್ರವೇಶಿಸಿದ ತಕ್ಷಣ ಎರಡು ಬಾರಿ ಪಲ್ಟಿಯಾಗಿ ಕೆಳಗುರುಳಿತು. ಕೂಡಲೇ ಸ್ಥಳಕ್ಕೆ ಧಾವಿಸಿದ ನಾಲ್ವರು ಪೊಲೀಸರು ಸ್ಥಳೀಯರ ಸಹಾಯದಿಂದ ಚಾಲಕ ಮತ್ತು ದೇಶಮುಖ್ ಅವರನ್ನು ಕಾರಿನಿಂದ ಹೊರ ತೆಗೆದು ಆಸ್ಪತ್ರೆಗೆ ದಾಖಲಿಸಿದರು” ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕಾರು ಚಾಲಕ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ದೇಶಮುಖ್ 2014ರಿಂದ 2019ರವರೆಗೆ ಬೀಡ್ ಜಿಲ್ಲೆಯ ಮಜಲ್ಗಾಂವ್ನ ಬಿಜೆಪಿ ಶಾಸಕರಾಗಿದ್ದರು.

