ಕುಣಿಗಲ್ : ಪಟ್ಟಣದ ಹುಚ್ಚ ಮಾಸ್ತಿಗೌಡ ಸರ್ಕಲ್ ನಲ್ಲಿ “ಸ್ಟೆಲ್ಲಾ ಮೇರಿಸ್ “ಶಾಲೆ ಮತ್ತು ಪದವಿ ಪೂರ್ವ ಕಾಲೇಜು ವತಿಯಿಂದ ವಿಶ್ವ ಪರಿಸರ ದಿನಾಚರಣೆಯನ್ನು ಬಹಳ ಅದ್ಭುತವಾಗಿ ಆಚರಿಸಿ ಸಾರ್ವಜನಿಕರ ಗಮನ ಸೆಳೆದರು,,
ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸ್ಟೆಲ್ಲಾ ಮೇರಿಸ್ ಶಾಲೆಯ ಆಡಳಿತ ವಿಭಾಗದ ಪ್ರಾಂಶುಪಾಲರಾದ ಶ್ರೀಯುತ “ಸರಾ ಡಾಮಿನಿಕ್ ರವರು ಕುಣಿಗಲ್ ಜನತೆ ಪರಿಸರ ಪ್ರೇಮಿಗಳು, ಇನ್ನೂ ಹೆಚ್ಚಿನದಾಗಿ ಪ್ರೀತಿ ಮತ್ತು ಪರಿಸರದ ಕಾಳಜಿಯನ್ನು ಹೊಂದಬೇಕು, ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಮಾತನಾಡಿದರು, ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ನಮ್ಮ ಶಾಲೆಯ ವತಿಯಿಂದ ಉಚಿತ ಗಿಡಗಳನ್ನು ಸಾರ್ವಜನಿಕರಿಗೆ ನೀಡುತ್ತಿರುವುದು ನಮಗೆ ಬಹಳ ಸಂತೋಷದ ವಿಷಯ ಎಂದು ತಿಳಿಸಿದರು, ಹಾಗೂ ನಮ್ಮ ಮಕ್ಕಳಲ್ಲಿ ಪರಿಸರ ಪ್ರೇಮವನ್ನು ಮೂಡಿಸುವುದರ ಮೂಲಕ, ಅನೇಕ ಬಾರಿ ಅವರಿಗೆ ನೃತ್ಯ ರೂಪಗಳಲ್ಲಿ, ಪರಿಸರ ಪ್ರೇಮವನ್ನು ಹುಟ್ಟಿಸಬೇಕು, ನಮ್ಮ ಮಕ್ಕಳು ಮುಂದಿನ ಯುವ ಪೀಳಿಗೆಯ ರೂವಾರಿಗಳು ಎಂದು ಮಾತನಾಡಿದರು,
ವಿಶೇಷವಾಗಿ ಸಂಪೂರ್ಣ ನ್ಯೂಸ್ ಗೆ ಶುಭಾಶಯ ಕೋರಿದ ಶಾಲಾ ವಿದ್ಯಾರ್ಥಿನಿ 9ನೇ ತರಗತಿ ” ಸ್ಪಂದನ ” ಮಾತನಾಡಿ ಶಾಲಾ ಪ್ರಿನ್ಸಿಪಲ್ ರವರು ನಮಗೆ ಎಲ್ಲಾ ರೀತಿಯ ಅವಕಾಶವನ್ನು ಮಾಡಿಕೊಡುತ್ತಿರುತ್ತಾರೆ, ಎಲ್ಲರೂ ಸಹ ಪರಿಸರವನ್ನ ಉಳಿಸಿ ಸಂಪೂರ್ಣ ವಾಣಿ ನ್ಯೂಸ್ ಚಾನೆಲ್ ಅವರು ಬಂದಿರುವುದು ನನಗೆ ತುಂಬಾ ಖುಷಿಯಾಗುತ್ತದೆ,ಅವರು ಇದೇ ರೀತಿ ಸಾರ್ವಜನಿಕರಿಗೆ ಒಳ್ಳೆಯ ಸುದ್ದಿಗಳನ್ನು ತಲುಪಿಸಿ ಸಂಪೂರ್ಣ ನ್ಯೂಸ್ ಗೆ ವಿಶ್ವ ಪರಿಸರ ದಿನ ದಿನಾಚರಣೆ ಶುಭಾಶಯಗಳು ತಿಳಿಸಿದರು,,
ಇನ್ನು ಈ ಕಾರ್ಯಕ್ರಮದಲ್ಲಿ ವಿಶೇಷವಾಗಿ ಸಾರ್ವಜನಿಕರ ಗಮನ ಸೆಳೆದ ಪರಿಸರ ಪ್ರೇಮಿಗಳಾದ, ಸ್ಪಂದನ, ನಿತ್ಯಶ್ರೀ, ಸಿಂಚನ, ಅನೇಕ ಹೆಣ್ಣು ಮಕ್ಕಳು ಇಂದು ಪರಿಸರದ ಗಿಡಗಳನ್ನು ತಮ್ಮ ಮೈಮೇಲೆ ತೊಟ್ಟು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದರು, ಹಾಗೂ ಶಾಲಾ ಪ್ರಾಂಶುಪಾಲರಿಗೆ ಅಭಿನಂದನೆಯನ್ನು ಸಹ ತಿಳಿಸಿದರು,,
ಈ ಕಾರ್ಯಕ್ರಮದಲ್ಲಿ ಇಷ್ಟೆಲ್ಲಾ ಮೇರೀಸ್ ಶಾಲೆಯ ಪ್ರಾಂಶುಪಾಲರಾದ ಶ್ರೀಯುತ ಸರಾ ಡಾಮಿನಿಕ್, ಶೈಕ್ಷಣಿಕ ಪ್ರಾಂಶುಪಾಲರಾದ ಶ್ರೀಮತಿ ಡಾಕ್ಟರ್ ಜ್ಯೋತಿಪ್ರಿಯ, ವ್ಯವಸ್ಥಾಪಕರಾದ ಶ್ರೀಯುತ ಸುನಿಲ್ ಕುಮಾರ್, ಮುಖ್ಯ ಶಿಕ್ಷಕರಾದ ಶ್ರೀಯುತ ರವಿ ಬಿಜೆ, ದೈಹಿಕ ಶಿಕ್ಷಣ ಶಿಕ್ಷಕರುಗಳಾದ ಶ್ರೀಯುತ ಚಂದನ್ ಕುಮಾರ್, ಬೋರೇಗೌಡ, ಶ್ರೀಮತಿ ಪ್ರೀತಿ, ಮತ್ತು ಶಾಲೆಯ ಶಿಕ್ಷಕರು ಹಾಗೂ ಶಿಕ್ಷಕಿಯರು, ಸೇರಿದಂತೆ ವಿದ್ಯಾರ್ಥಿಗಳು ಹಾಜರಿದ್ದರು,,
ವರದಿ ನರಸಿಂಹರಾಜು

