ಬೆಂಗಳೂರು: ಬಿಜೆಪಿಯ 18 ಶಾಸಕರ ಅಮಾನತು ವಾಪಸ್ ಪಡೆಯಲಾಗಿದೆ. ಸ್ಪೀಕರ್ ಯುಟಿ ಖಾದರ್ ನೇತೃತ್ವದ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.
ಸಿಎಂ, ವಿಪಕ್ಷ ನಾಯಕರು ಸಭೆಯಲ್ಲಿ ಭಾಗಿಯಾಗಿದ್ದರು. ಅಂದು ಆದ ಘಟನೆಯನ್ನ ವಿಧಾನಸಭೆಯಲ್ಲಿ ಚರ್ಚೆ ಮಾಡಿ, ತೀರ್ಮಾನ ಮಾಡಲಾಗಿತ್ತು. ಬಹುಮತ ಇರುವ ಶಾಸಕರ ನಿರ್ಣಯದ ಮೇಲೆ ತೆಗೆದುಕೊಂಡ ಕ್ರಮ ಅದಾಗಿತ್ತು. ಮಾರ್ಚ್ 21ರಂದು ಈ ಅಮಾನತುಗೊಳಿಸಲಾಗಿತ್ತು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಅಶೋಕ್, ನಾಳೆ (ಸೋಮವಾರ) ಸ್ಪೀಕರ್ ಅವರು ಹಜ್ ಯಾತ್ರೆಗೆ ಹೋಗಲಿದ್ದಾರೆ. ಅದ್ದರಿಂದ ನಾಳೆ ಸ್ಪೀಕರ್ ಅಧಿಕಾರಿಗಳ ಸಭೆ ಕರೆದು ಆದೇಶ ಹೊರಡಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಅಮಾನತುಗೊಂಡಿದ್ದ ಶಾಸಕರು : ಅಶ್ವಥ್ ನಾರಾಯಣ, ಮಲ್ಲೇಶ್ವರ, ಎಸ್.ಆರ್ ವಿಶ್ವನಾಥ್, ಯಲಹಂಕ, ಮುನಿರತ್ನ, ಆರ್ಆರ್ ನಗರ, ಬೈರತಿ ಬಸವರಾಜು, ಕೆಆರ್ ಪುರ, ಸುರೇಶ್ ಗೌಡ, ತುಮಕೂರು ಗ್ರಾ., ಚನ್ನಬಸಪ್ಪ, ಶಿವಮೊಗ್ಗ, ಸಿ.ಕೆ. ರಾಮಮೂರ್ತಿ, ಜಯನಗರ, ಧೀರಜ್ ಮುನಿರಾಜು, ದೊಡ್ಡಬಳ್ಳಾಪುರ, ಬಿ.ಪಿ. ಹರೀಶ್, ಹರಿಹರ, ಯಶ್ಪಾಲ್ ಸುವರ್ಣ, ಉಡುಪಿ, ಭರತ್ ಶೆಟ್ಟಿ, ಮಂಗಳೂರು, ಉಮಾನಾಥ್ ಕೋಟ್ಯಾನ್, ಮೂಡುಬಿದರೆ, ಎಂ.ಆರ್ ಪಾಟೀಲ್, ಕುಂದಗೋಳ, ಶೈಲೇಂದ್ರ ಬೆಲ್ದಾಳೆ, ಬೀದರ್ ದಕ್ಷಿಣ, ಶರಣು ಸಲಗಾರ್, ಬಸವಕಲ್ಯಾಣ, ಬಸವರಾಜ ಮತ್ತಿಮೂಡ್, ಕಲಬುರಗಿ ಗ್ರಾ., ಚಂದ್ರು ಲಮಾಣಿ, ಶಿರಹಟ್ಟಿ, ದೊಡ್ಡನಗೌಡ ಪಾಟೀಲ್, ಕುಷ್ಟಗಿ

