ಬೈಕ್ ಸವಾರನ ಮೇಲೆ ಬಿದ್ದಿದ್ದ ಮರದ ಕೊಂಬೆ
ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯವೇ ಇದಕ್ಕೆ ಕಾರಣ
ಬುರುಡೆ ಛಿದ್ರ.. ಬದುಕೋದೇ ಡೌಟ್!
ಮುಗಿಲು ಮುಟ್ಟಿದ ತಂದೆಯ ಆಕ್ರಂದನ
ಬೆಂಗಳೂರಲ್ಲಿ ಹೆಮ್ಮರಗಳು ಜೀವ ಬಲಿಗಾಗಿ ಕಾದು ಕೂತಿವೆ.. ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯ ಒಂದ್ಕಡೆಯಾದ್ರೆ.. ಯಮ ಮರಗಳಿಗೆ ಜೀವಗಳೇ ಬಲಿಯಾಗ್ತಿವೆ.. ಮರದ ಒಣ ರೆಂಬೆ ಬಿದ್ದಿದ್ದೇ ಅಕ್ಷಯ್ ಕೋಮಾಗೆ ಜಾರಿದ್ದಾನೆ.. ಜೀವ ಉಳಿಸಬೇಕಿದ್ದ ವೈದ್ಯರೇ ಕೈಚಲ್ಲಿದ್ದಾರೆ.. ಅಯ್ಯೋ ಭಗವಂತ ಮಗನನ್ನ ಮದುಕಿಸು ಅಂತಾ ಕುಟುಂಬಸ್ಥರು ಗೋಳಾಡ್ತಿದ್ದಾರೆ.. ಹಾಗಾದ್ರೆ ಅಕ್ಷಯ್ ಸ್ಥಿತಿ ಹೇಗಿದೆ.. ಡಾಕ್ಟರ್ಸ್ ಏನಂದ್ರು ಅನ್ನೋದ್ರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ..
ವಿಧಿಯಾಟ ಬಲ್ಲವರ್ಯಾರು ಹೇಳಿ.. ಭಗಂತನ ಆಜ್ಞೆ ಇಲ್ದೆ ಹುಲ್ಲು ಕಡ್ಡಿನೂ ಅಲ್ಲಡಲ್ಲಾ ಅಂತಾರೆ.. ಆದ್ರೆ ಅಕ್ಷಯ್ ಪರಿಸ್ಥಿತಿ ನೋಡ್ತಿದ್ರೆ ದೇವ್ರ ಮನಸ್ಸೂ ಇಷ್ಟೊಂದು ಕ್ರೂರಿಯಾ ಅನ್ಸಿಬಿಡುತ್ತೆ.. ಸಾಯೋ ವಯಸ್ಸು ಅಲ್ಲ.. ಅಪರಂಜಿಯಂತ ಹುಡ್ಗ ತಾಯಿ ತೀರೋದ್ರು ಹೆತ್ತಪ್ಪನನ್ನ ಕಣ್ಣಲ್ಲಿ ಕಣ್ಣಿಟ್ಟು ಕಾಪಾಡ್ತಿದ್ದ ಜೀವ ಆತನದು .. ಅಜ್ಜಿ, ತಾಯನ ಪ್ರೀತಿಯ ಮೊಮ್ಮಗನಾಗಿದ್ದ.. ತನ್ನದಲ್ಲದ ತಪ್ಪಿಗೆ ಈಗ ಆಸ್ಪತ್ರೆ ಬೆಡ್ ಮೇಲೆ ಮೌನವಾಗಿ ಮಲಗಿದ್ದಾನೆ.. ಪ್ರಪಂಚದ ಅರಿವಿಲ್ಲದೆ ಕೋಮಾಗೆ ಜಾರಿದ್ದಾನೆ..
ಅಕ್ಷಯ್ ಮೇಲೆ ಮರದ ಕೊಂಬೆ ಬಿದ್ದು ಆಸ್ಪತ್ರೆಗೆ ಸೇರಿ ಇಂದಿಗೆ 3 ದಿನವೇ ಆಗೋಯ್ತು.. ಮಟನ್ ತರ್ತೀನಿ.. ಅಡುಗೆ ಮಾಡ್ತೀನಿ ಅಂತಾ ಬಂದವನು ಈಗ ಸದ್ದು, ಸುದ್ದಿಯಿಲ್ಲದೆ ಮಲಗಿದ್ದಾನೆ.. ಮೂರು ದಿನದಿಂದ ಅಕ್ಷತ್ ಚೇತರಿಸಿಕೊಳ್ತಾನೆ.. ಮೊದ್ಲಿನಾಗೆ ಆಗ್ತಾನೆ ಅಂತಾ ಕಾಯ್ದಿದ್ದವ್ರಿಗೆ ಅರಗಿಸಲಾಗದೆ ಸುದ್ದಿ ಕಿವಿಗೆ ಬಿದ್ದಿದೆ.. ಚಿಕಿತ್ಸೆಗೆ ಸ್ಪಂದಿಸದೇ ಅಕ್ಷಯ್ ಕೋಮಾಗೆ ಜಾರಿದ್ದಾನೆ. ನಾವ್ ಏನೂ ಹೇಳೋಕೆ ಆಗಲ್ಲ ಅಂತಾ ವೈದ್ಯರೇ ಕೈ ಬಿಟ್ಟಿದ್ದಾರೆ..
ಅಕ್ಷಯ್ ತಲೆ ಮೇಲೆ ಸಾಕಷ್ಟು ಜವಾಬ್ದಾರಿಗಳಿದ್ದವು .. ಆತ ಮನೆಗೆ ದೀಪವಾಗಿದ್ದ.. ಒಂದ್ಕಡೆ ತಂದೆ ಆರೋಗ್ಯ ಸಮಸ್ಯೆ .. ಮತ್ತೊಂದ್ಕಡೆ ತಂಗಿಗೆ ಮದ್ವೆ ಮಾಡಿಸಿದ್ದ ಸಾಲ.. ಇತ್ತ ಮೊಮ್ಮಗನನ್ನೇ ನಂಬ್ಕೊಂಡಿರೀ ಹಿರಿಜೀವಗಳನ್ನ ನೋಡ್ಕೊಂಡು ಖಾಸಗಿ ಕಂನಿಯಲ್ಲಿ ಕೆಲಸ ಮಾಡ್ಕೊಂಡಿದ್ದ.. ಆದ್ರೀಗ ದುಡಿಯೋ ಕೈಗಳೇ ಶಕ್ತಿ ಇಲ್ದಂಗಾಗಿವೆ.. ಅಕ್ಷಯ್ ಸ್ಥಿತಿ ಕಂಡು ಕುಟುಂಬಸ್ಥರು ಬಿಕ್ಕಿ ಬಿಕ್ಕಿ ಅಳ್ತಿದ್ದಾರೆ. ಅತ್ತ ಬಿಬಿಎಂಪಿ ಕೊಡೋ ಕಾಸು ಕೊಡ್ತಿಲ್ಲ.. ಇತ್ತ ಅಕ್ಷಯ್ ಕೋಮಾ ಸೇರಿದ್ದಾನೆ.. ಏನ್ ಮಾಡ್ಬೇಕು ಅನ್ನೋದು ಗೊತ್ತಾಗ್ದೆ ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ.
ಬಿಬಿಎಂಪಿ ಅಧಿಕಾರಿಗಳು ಮಳೆಗಾಲ ಆರಂಭಕ್ಕೂ ಮೊದ್ಲೇ ಮರಗಳಲ್ಲಿನ ಒಳರಂಬೆಗಳನ್ನ ತೆರವು ಮಾಡಿದ್ರೆ ಇಷ್ಟೆಲ್ಲಾ ಅನಾಹುತಗಳು ಆಗ್ತಿರಲಿಲ್ಲ.. ಆದ್ರೆ ಎಷ್ಟೇ ಮನವಿ ಮಾಡಿದ್ರು ತೆರವು ಮಾಡದೇ ನಿರ್ಲಕ್ಷ್ಯ ವಹಿಸಿದ್ದಾರೆ.. ಈಗ ಅಮಾಯಕ ಯುವಕ ಅಕ್ಷಯ್ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸ್ತಿದ್ದಾನೆ.. ಮನೆಗೆ ದೀವಪಾಗಿದ್ದವನೇ ಮೌನವಾಗಿರೋದು ನೋಡಿ ಹೆತ್ತವ್ರ ಗೋಳು ಕೇಳೋರಿಲ್ಲದಂತಾಗಿದೆ.. ಯಾಕಂದ್ರೆ ಅಪ್ಪನ ಬರ್ತ್ಡೇಗೆ ಮಟನ್ ತರಲು ಹೋದವ ಆಸ್ಪತ್ರೆ ಪಾಲಾಗಿದ್ದಾನೆ.. ನನ್ನಪ್ಪನ ಹುಟ್ಟುಹಬ್ಬವನ್ನ ಹಾಗೆ ಸೆಲೆಬ್ರೇಟ್ ಮಾಡ್ಬೇಕು.. ಹೀಗೆ ಸೆಲೆಬ್ರೇಟ್ ಮಾಡ್ಬೇಕು ಅಂತಿದ್ದವನಿಗೆ ಯಮ ಮರ ಕೊಳ್ಳಿ ಇಟ್ಟಿದೆ.. ಮೊದ್ಲೇ ತಂದೆ ಅನಾರೋಗ್ಯದಿಂದ ಬಳಲ್ತಿದ್ದಾರೆ.. ಅವರಿಗೆ ಆಪರೇಷನ್ ಮಾಡಿಸಬೇಕು ಅಂತಿದ್ರು.. ಆದರೆ ಈಗ ಮಗನಿಗೆ ಆಪರೇಷನ್ ಮಾಡೋ ಪರಿಸ್ಥಿತಿ ಬಂದಿದೆ.. ಕರುಳ ಕುಡಿಯ ಆ ಸ್ಥಿತಿ ಕಂಡು ತಂದೆಯ ಆಕ್ರಂದನ ಮುಗಿಲು ಮುಟ್ಟಿದೆ..
ಒಟ್ನಲ್ಲಿ ಯಮ ಮರ ಅಕ್ಷಯ್ ಜೀವ ಬಲಿಗಾಗಿಯೇ ಕಾಯ್ತಿತ್ತೇನೋ ಗೊತ್ತಿಲ್ಲ.. ಅಪ್ಪನ ಹುಟ್ಟುಹಬ್ಬ ಸಂಭ್ರಮದಲ್ಲಿ ತೇಲಾಡ್ತಿದ್ದವನ ಖುಷಿಗೆ ಕೊಳ್ಳಿ ಇಟ್ಟಿದೆ.. 12 ಚೂರಾಗಿದ್ದ ಬುರುಡೆ ಕೆಲಸನೇ ಮಾಡ್ತಿಲ್ಲ.. 24 ಗಂಟೆ ಅಬ್ಸರ್ವೇಷನ್ನಲ್ಲಿ ಇರೋ ಅಕ್ಷಯ್ ಚೇರಿಸಿಕೊಳ್ತಾರಾ ಕಾದುನೋಡ್ಬೇಕು..