ಬೆಂಗಳೂರು : ಇನ್ಸ್ಟ್ರಾಗ್ರಾಂ ನಲ್ಲಿ ಕಿವುಡರ ಹಾಗು ಮೂಖರ ಸ್ವಾತಂತ್ರ್ಯಕ್ಕೆ ಧಕ್ಕೆ ಬರುವಂತೆ ಕಿವುಡರ ಬಗ್ಗೆ ಸಮಾಜದಲ್ಲಿ ಕೆಟ್ಟ ಭಾವನೆ ಮೂಡುವ ರೀತಿಯಲ್ಲಿ ವಿಡಿಯೋ ಮಾಡಿ ಕಿವುಡರ ಸನ್ನೇ ಹಾಗು ಸಂಜ್ಞಾ ಭಾಷೆಗೆ ಅವಮಾನ ಮಾಡಿದ ಆರೋಪದಡಿ ರೋಹನ್ ಕಾರ್ಯಪ್ಪ ಹಾಗು ಶರವಣ ಭಟ್ಟಾಚಾರ್ಯ ಎಂಬಿಬ್ಬರನ್ನು ಬಂಧಿಸಲಾಗಿದೆ.
ಇನ್ಸ್ಟ್ರಾಗ್ರಾಂನಲ್ಲಿ ಅವಮಾನಕರ ರೀತಿಯಲ್ಲಿ ವೀಡಿಯೋ ಮಾಡಿದ್ದ ಇಬ್ಬರು, ಆ ವಿಡಿಯೋದಿಂದ ಕಿವುಡರ ಹಾಗು ಮೂಖರ ಘನತೆಗೆ ಧಕ್ಕೆ ಉಂಟುಮಾಡಿ @rohancariyappa ಎಂಬ ಇನ್ಸ್ಟ್ರಾಗ್ರಾಂ ಐಡಿಯಲ್ಲಿ ರೀಲ್ಸ್ ಅಪ್ಲೋಡ್ ಮಾಡಿದ್ದ ಆರೋಪಿಗಳು.
ಈ ಕುರಿತು ವಿಶೇಷ ಚೇತನರು ಬೆಂಗಳೂರಿನ ಸೈಬರ್ ಕ್ರೈಂ ಪ್ರಕರಣ ದಾಖಲಿಸಿದ ಹಿನ್ನೆಲೆಯಲ್ಲಿ ಬಂಧಿಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈ ಬಗ್ಗೆ ದೆಹಲಿ ಪೊಲೀಸರಿಗೂ ಕೂಡ ಆನ್ ಲೈನ್ ಮೂಲಕ ದೂರು ಸಲ್ಲಿಸಲಾಗಿತ್ತು. ಸದ್ಯ ಬೆಂಗಳೂರು ಸೈಬರ್ ಕ್ರೈಂ ಪೊಲೀಸರಿಂದ ಇಬ್ಬರ ಬಂಧನವಾಗಿದೆ.

