ನವದೆಹಲಿ: ದೆಹಲಿಯಲ್ಲಿ (Delhi) ಸುರಿದ ಮೊದಲ ಮಳೆ ಸಾರ್ವಜನಿಕರಿಗೆ ಮತ್ತು ಗಣ್ಯ ವ್ಯಕ್ತಿಗಳಿಗೂ ತೊಂದರೆ ಕೊಟ್ಟಿದೆ. ದೆಹಲಿಯ ಅತ್ಯಂತ ಐಷಾರಾಮಿ ಪ್ರದೇಶಗಳಲ್ಲಿ ವಾಸಿಸುವ ರಾಜಕೀಯ ನಾಯಕರನ್ನೂ ಮಳೆಯ ಅಬ್ಬರ ಬಿಟ್ಟಿಲ್ಲ.
ಶುಕ್ರವಾರ ಬೆಳಗ್ಗೆ ಸಮಾಜವಾದಿ ಪಕ್ಷದ ಸಂಸದ ರಾಮ್ ಗೋಪಾಲ್ ಯಾದವ್ (Ram Gopal Yadav) ಅವರ ಮನೆಗೂ ನೀರು ನುಗ್ಗಿದ್ದು, ಮನೆಯ ಆವರಣ ಸಂಪೂರ್ಣವಾಗಿ ಜಲಾವೃತಗೊಂಡಿದೆ. ರಾಮ್ ಗೋಪಾಲ್ ಅವರು ಸಂಸತ್ತಿಗೆ ತೆರಳಲು ಹೊರಟಿದ್ದರು. ಭಾರೀ ನೀರು ಇದಿದ್ದರಿಂದ ಅವರನ್ನ ಸಿಬ್ಬಂದಿಯು ಎತ್ತಿಕೊಂಡು ಹೋಗಿ ಕಾರಿನಲ್ಲಿ ಕುಳ್ಳಿರಿಸಬೇಕಾಯಿತು.
ಸಂಸತ್ ಅಧಿವೇಶನದ ಕಾರಣ ರಾಮ್ ಗೋಪಾಲ್ ಅವರು ಸಂಸತ್ತಿಗೆ ತೆರಳಲು ಮನೆಯಿಂದ ಹೊರಟಿದ್ದು, ಅಷ್ಟರಲ್ಲಿ ಮನೆಯೊಳಗೆ ಮತ್ತು ಹೊರಭಾಗದಲ್ಲೆಲ್ಲ ನೀರು ತುಂಬಿತ್ತು. ಬಳಿಕ ಅವರ ಸಿಬ್ಬಂದಿ ಅವರನ್ನು ತೋಳುಗಳಲ್ಲಿ ಎತ್ತಿಕೊಂಡು ಸಾಗಿಸಬೇಕಾಯಿತು. ನೌಕರರು ಅವರನ್ನು ಎತ್ತಿಕೊಂಡು ಕರೆತಂದು ಕಾರಿನಲ್ಲಿ ಕೂರಿಸಿದರು. ಇದಾದ ನಂತರ ರಾಮ್ ಗೋಪಾಲ್ ಯಾದವ್ ಸಂಸತ್ತಿಗೆ ತೆರಳಿದರು. ಇದನ್ನೂ ಓದಿ: ಫ್ಯಾನ್ಸ್ ಜೈಲಿನ ಬಳಿ ಬರಬೇಡಿ: ನಟ ದರ್ಶನ್ ಅಭಿಮಾನಿಗಳಿಗೆ ಮನವಿ
ನಾನು ಸಂಸತ್ತಿಗೆ ಹೋಗಲು ಇಷ್ಟೆಲ್ಲ ಸಾಹಸ ಮಾಡಬೇಕಾಯಿತು ಎಂದು ಘಟನೆಯ ನಂತರ ರಾಮ್ ಗೋಪಾಲ್ ಯಾದವ್ ಮಳೆಯಿಂದ ಎದುರಿಸಿದ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಜತೆಗೆ, ನವದೆಹಲಿ ಮುನ್ಸಿಪಲ್ ಕೌನ್ಸಿಲ್ (ಎನ್ಡಿಎಂಸಿ) ನಾನು ನಾಲ್ಕು ಗಂಟೆಯಿಂದ ಎನ್ಡಿಎಂಸಿ ಅಧಿಕಾರಿಗಳೊಂದಿಗೆ ಮಾತನಾಡುತ್ತಿದ್ದೇನೆ. ಪಂಪ್ ತಂದು ನೀರು ತೆಗೆದರೆ ಮಾತ್ರ ಈ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ. ಇಡೀ ಬಂಗಲೆ ನೀರಿನಿಂದ ತುಂಬಿದೆ. ಎರಡು ದಿನಗಳ ಹಿಂದೆಯಷ್ಟೇ ಫ್ಲೋರಿಂಗ್ ಮಾಡಿದ್ದೇವೆ. ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಮಂದಿನ 2 ದಿನಗಳ ಕಾಲ ಮಳೆಯ ಮೂನ್ಸೂಚನೆ
ವಾಸ್ತವವಾಗಿ ಎನ್ಡಿಎಂಸಿ ಮಳೆಗೆ ಸಿದ್ಧವಾಗಿಲ್ಲ. ಇಷ್ಟು ತಡವಾಗಿ ಮಳೆ ಸುರಿದರೂ ಚರಂಡಿ ಸ್ವಚ್ಛಗೊಳಿಸಿಲ್ಲ. ಎಲ್ಲೆಲ್ಲಿ ಚರಂಡಿ ಸಮಸ್ಯೆ ಇದೆ, ಹಿಂದೆ ಸಮಸ್ಯೆ ಆಗಿತ್ತು ಎಂಬುದು ಎನ್ಡಿಎಂಸಿ ನೌಕರರಿಗೂ ಗೊತ್ತು. ಚರಂಡಿಗಳನ್ನು ಸಮರ್ಪಕವಾಗಿ ಇರಿಸಿಕೊಂಡರೆ ಈ ಪರಿಸ್ಥಿತಿ ಬರುವುದಿಲ್ಲ. ನಮ್ಮ ನಿವಾಸದ ಪಕ್ಕದಲ್ಲಿಯೇ ರಾಜ್ಯ ಸಚಿವ ಸ್ಥಾನಮಾನ ಹೊಂದಿರುವ ನೀತಿ ಆಯೋಗ್ನ ಸದಸ್ಯರ ಬಂಗಲೆ ಇದೆ. ಸಚಿವರು, ನೌಕಾಪಡೆಯ ಅಡ್ಮಿರಲ್ಗಳಿದ್ದಾರೆ. ಎಲ್ಲರಿಗೂ ಸಮಸ್ಯೆ ಆಗಿದೆ ಎಂದು ರಾಮ್ ಗೋಪಾಲ್ ಯಾದವ್ ಹೇಳಿದರು. ಇದನ್ನೂ ಓದಿ: ರಾಜ್ಯಾದ್ಯಂತ ಡೆಂಗ್ಯೂ ಕೇಕೆ- ಕಳೆದ ವರ್ಷಕ್ಕಿಂತ ಹೆಚ್ಚು ಪ್ರಕರಣ ದಾಖಲು

