ಕುಣಿಗಲ್: ಪಟ್ಟಣದ ತಾಲೂಕು ಕಚೇರಿ ಮುಂಭಾಗ ಎರಡು ದಿನಗಳಿಂದ ಉಪವಾಸ ಸತ್ಯಾಗ್ರಹವನ್ನು ಮಾಡಿ ಹೋರಾಟವನ್ನು ಮುಂದುವರಿಸುತಿದ್ದು ಜಮೀನು ವಿಚಾರವಾಗಿ ಪೋಡಿ ಮಾಡಲು ಅರ್ಜಿ ಸಲ್ಲಿಸಿ ಹಲವು ವರ್ಷಗಳು ಕಳೆದರೂ ಕೂಡ ಜಮೀನು ಪೋಡಿ ಮಾಡಿಕೊಡುವಲ್ಲಿ ಭೂ ದಾಖಲೆಗಳು ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು,.
ತಾಲೂಕು ಕಚೇರಿ ಬಳಿ ಬಂದಾಗ ಸಬೂಬು ಗಳನ್ನು ಹೇಳಿಕೊಂಡು ಸುಮ್ಮನೆ ಅಲೆದಾಡಿಸುತ್ತಿರುವುದು ಭೂ ಅಧಿಕಾರಿಗಳಿಗೆ ನಾಚಿಕೆಗೇಡತನ ಎಂದು ಮಾತನಾಡಿದ ಅವರು ರಾಜಕಾರಣಿಗಳ ಕೈಗೊಂಬೆಯಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಕೆ ಆರ್ ಎಸ್ ಪಕ್ಷದ ವತಿಯಿಂದ ಎರಡು ದಿನಗಳಿಂದ ಕಚೇರಿ ಮುಂಭಾಗ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದರು ಗಮನಹರಿಸದ ಅಧಿಕಾರಿಗಳು.
ತಾಲೂಕಿನ ಅಮೃತೂರು ಹೋಬಳಿ ಯಡವಾಣಿ ಗ್ರಾಮದ ಸರ್ವೆ ನಂಬರ್ 257 / 1 ಎ 3 ನಲ್ಲಿ ಮೂಲ ದಾಖಲಾತಿಯಂತೆ 2 ಎಕರೆ 14 ಗುಂಟೆ ಜಮೀನಿದ್ದು ಅರ್ಜಿದಾರರಾದ ಶ್ರೀನಿವಾಸ್ ಐದು ಗುಂಟೆ, ಖಾತೆಯಾಗಿ ಪಹಣಿಯು ಸಹ ಬಂದಿದ್ದು ಈ ವಿಚಾರವಾಗಿ ಪೋಡಿ ಮಾಡಿಕೊಡಲು ಅರ್ಜಿಯನ್ನು ಸಲ್ಲಿಸಿದ್ದರು,,
ಪೋಡಿ ಕೆಲಸ ಶುರು ಮಾಡಿದಾಗ ಅದೇ ಗ್ರಾಮದ ಕರಿಯಪ್ಪನವರ ಮಗ ಹಾಗೂ ಕೆಂಪಮ್ಮ ಕೋಂ ಹುಚ್ಚಪ್ಪನವರ ,ಮಗ ತಕರಾರು ಅರ್ಜಿಯನ್ನು ಸಲ್ಲಿಸಿದರು, ಭೂ ದಾಖಲೆಗಳ ಸಹಾಯಕ ನಿರ್ದೇಶಕರ ನ್ಯಾಯಾಲಯವು ಕೋಡಿ ಮಾಡಲು ಆದೇಶವನ್ನು ನೀಡಿದ್ದು, ಆದೇಶ ನೀಡಿ ನಾಲ್ಕೈದು ತಿಂಗಳಾಗಿದ್ದು ಮತ್ತು ಅರ್ಜಿಯನ್ನು ಸಲ್ಲಿಸಿ ಹಲವು ವರ್ಷಗಳೆ ಕಳೆದರೂ ಪೋಡಿ ಮಾಡದೆ ಇಲ್ಲಸಲ್ಲದ ಸುಬೂಬುಗಳನ್ನು ಹೇಳುತ್ತಿದ್ದಾರೆ ಎಂದು ಆಕಾಶ ವ್ಯಕ್ತಪಡಿಸಿ ಪೋಡಿ ಕೆಲಸ ಬಗೆಹರಿಯುವವರೆಗೂ ನಾವು ನಮ್ಮ ಹೋರಾಟ ಹಾಗೂ ಉಪವಾಸ ಸತ್ಯಾಗ್ರಹವನ್ನು ಕೈ ಬಿಡುವುದಿಲ್ಲ ಎಂದರು, ಉಪವಾಸ ಸತ್ಯಾಗ್ರಹವನ್ನು ನಡೆಸುತ್ತಿರುವುದನ್ನು ತಿಳಿದು ಸ್ಥಳಕ್ಕೆ ಬಂದ ತಾಲೂಕು ದಂಡಾಧಿಕಾರಿ ರಶ್ಮಿ ಯು , ಹಾಗೂ ಎ ಡಿ ಎಲ್ ಆರ್ ತೊಂಟಾರಾಧ್ಯ ಯಾವುದೇ ಮೂಲ ದಾಖಲೆಗಳಿಲ್ಲದೆ ಕೋಡಿ ಮಾಡಲು ಸಾಧ್ಯವಿಲ್ಲ , ಭೂಸ್ವಾಧೀನ ಪಡಿಸಿಕೊಂಡಿರುವ ಭೂಮಿಯ ವಿಸ್ತೀರ್ಣವನ್ನು ಸರಿಪಡಿಸಿ ಮತ್ತು ಒತ್ತುವರಿಯಾಗಿರುವ ಭೂಮಿಯನ್ನು ತೆರೆವುಗೊಳಿಸಿ ಆದೇಶ ನೀಡಿದಲ್ಲಿ ಪೋಡಿ ಮಾಡಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.
ಮೂಲ ದಾಖಲೆಗಳನ್ನು ಒದಗಿಸಿ ಕೋಡಿ ಮಾಡಿಕೊಳ್ಳಲು ನಿರ್ದೇಶನ ನೀಡಲಾಗುವುದು ಎಂದು ತಹಶೀಲ್ದಾರ್ ರಶ್ಮಿ ಯು ತಿಳಿಸಿದರು, ಹೋರಾಟಗಾರರ ಖಂಡದ ಪರಿಸ್ಥಿತಿಯೇ ಹೀಗಾದರೆ ಪರಿಸ್ಥಿತಿ ಏನಾಗಬೇಕು, ಎಂದು ಆಕ್ರೋಶ ವ್ಯಕ್ತಪಡಿಸಿದ ಎಲ್ಲಾ ಕಾರ್ಯಕರ್ತರು ಪೋಡಿ ಮಾಡಿಕೊಡಲು ಎಷ್ಟು ಸಮಯ ಬೇಕು ಎಂದು ಗೆರಾವ್ ಹಾಕಿದರು,ಎಷ್ಟು ಬಾರಿ ನಿಮ್ಮ ಕಚೇರಿಗಳಿಗೆ ಅಲೆಯುವುದು ,ಪ್ರತಿ ಬಾರಿಯೂ ಬಂದಾಗ ನಿಮಗೆ ಇಷ್ಟ ಬಂದ ಹಾಗೆ ಕಥೆ ಹೇಳಿ ತಪ್ಪಿಸಿಕೊಳ್ಳುತ್ತಿರಿ,
ಇದು ಮೂರನೇ ಬಾರಿಯ ಪ್ರತಿಭಟನೆ ಮಾಡುತ್ತಿರುವುದು ಪೋಡಿ ಮಾಡಿಕೊಡಲು ನೀವು ಅಸಡ್ಡೆ ಯಾಕೆ ತೋರುತ್ತಿದ್ದೀರಿ, ಎಂದು ಆಕ್ರೋಶ ವ್ಯಕ್ತಪಡಿಸಿ ಕಚೇರಿ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡು ಪೋಡಿ ಯಾಗುವವರೆಗೂ ನಾವು ಉಪವಾಸ ಸತ್ಯಾಗ್ರಹ ನಿಲ್ಲಿಸುವುದಿಲ್ಲ, ಎಂದು ಕೆ ಆರ್ಎಸ್ ಪಕ್ಷದ ಮುಖಂಡರು ಮಾತನಾಡಿದರು,,
ಇದೇ ಸಂದರ್ಭದಲ್ಲಿ ದಲಿತ ಮುಖಂಡರು ವರದರಾಜು, ಕೃಷ್ಣಮೂರ್ತಿ, ಶ್ರೀನಿವಾಸ್, ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದು, ಇನ್ನು ಯಾವುದೇ ಅಧಿಕಾರಿಗಳು ಪ್ರತಿಭಟನಾ ಕಾರ್ಯವನ್ನು ಸಮಾಧಾನ ಪಡಿಸುವುದಕ್ಕೆ ಮುಂದಾದ ಹಿನ್ನೆಲೆಯಲ್ಲಿ ಯಾವುದಕ್ಕೂ ಜಗ್ಗದೆ ಸಂಘಟನೆಯ ಕಾರ್ಯಕರ್ತರು ಶುಕ್ರವಾರವೂ ಕೂಡ ಪ್ರತಿಭಟನೆ ಮುಂದುವರೆದಿತ್ತು,,,,
ವರದಿ : ನರಸಿಂಹರಾಜು ಹೆಚ್

