ಕುಣಿಗಲ್: ಪಟ್ಟಣದ ತಾಲೂಕು ಸಭಾಂಗಣದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು, ಗಂಡುಗಲಿ ಶರಣ ಎಂದರೆ ಅಂಬಿಗ ಚೌಡಯ್ಯ ಯಾವುದನ್ನು ಕ್ಷಣ ಮಾತ್ರಕ್ಕೆ ಒಪ್ಪಿಕೊಳ್ಳದೆ ಸತ್ಯದ ಪರವಾಗಿ ಸದಾ ನಿಂತವರು ಅವರಲ್ಲಿದ್ದ ಜಾಣ ಅಪಾರ.
ಕಾಯಕವನ್ನೇ ಉಸಿರಾಗಿಸಿಕೊಂಡಿದ್ದ ಅನುಭವ ಜೀವಿ ಅವರಾಗಿದ್ದರು, ಎಂದು ತಹಶೀಲ್ದಾರ್ ರಶ್ಮಿ ಯು ರವರು ಮಾತನಾಡಿದರು, ತಾಲೂಕು ಸಭಾಂಗಣದಲ್ಲಿ ತಾಲೂಕಿನ ಗಂಗಮತ ಮುಖಂಡರುಗಳ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ನಿಜಶರಣ ಶ್ರೀ ಅಂಬಿಗರ ಚೌಡಯ್ಯನವರ ಜಯಂತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು,
ಅಂಬಿಗರ ಚೌಡಯ್ಯ ಅವರು ಸಿದ್ದಿ ಸಾಧಕ ನಿಜ ಶರಣರಾಗಿದ್ದರು ಮೌಡ್ಯತೆ, ಕಂದಾಚಾರ, ಸಾಮಾಜಿಕ ಸಮಸ್ಯೆಗಳಿಗೆ ತಮ್ಮ ವಚನಗಳ ಮೂಲಕ ಚಾಟಿ ಬೀಸಿರುವುದನ್ನು ಗಮನಿಸಬಹುದಾಗಿದೆ ಎಂದರು,
ಈ ಸಂದರ್ಭದಲ್ಲಿ ತಾಲೂಕ್ ಗಂಗಮತ ಸಂಘದ ಅಧ್ಯಕ್ಷ ಮನು, ತುಮಕೂರು ಜಿಲ್ಲಾ ಕಾಂಗ್ರೆಸ್ ಮೀನುಗಾರರ ವಿಭಾಗದ ಅಧ್ಯಕ್ಷರಾದ ಗೋವಿಂದರಾಜು, ದುರ್ಗಾ ಆನಂದ, ಶ್ರೀನಿವಾಸ್, ಕಿಲಾರ ಕಿಟ್ಟಿ, ಮಂಜುನಾಥ್, ದಲಿತ ಮುಖಂಡರು ಆರ್ ಎನ್ ಹಟ್ಟಿರಂಗಯ್ಯ (ರಂಗಣ್ಣ) ಮುನಿಯನಪಾಳ್ಯ ರಾಜು, ರವಿ, ಲಿಂಗೇಶ್ ಹಲವಾರು ಸಮಾಜದ ಮುಖಂಡರುಗಳು ಹಾಜರಿದ್ದರು,,,
ವರದಿ : ನರಸಿಂಹರಾಜು,

