ಹೈದರಾಬಾದ್: ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ಯುವತಿಯೊಬ್ಬಳು ರೈಲ್ವೆ ಹಳಿಯ ಮೇಲೆ ಕಾರನ್ನು ಚಲಾಯಿಸಿ ಸಿಬ್ಬಂದಿಗೆ ಆತಂಕ ಮೂಡಿಸಿರುವ ಘಟನೆ ನಡೆದಿದೆ. ಯುವತಿಯನ್ನು ವಶಕ್ಕೆ ಪಡೆದ ಪೊಲೀಸರು ಹುಚ್ಚಾಟಕ್ಕೆ ಕಾರಣ ಏನೆಂದು ವಿಚಾರಣೆ ನಡೆಸಿದ್ದಾರೆ. ಇದರಿಂದಾಗಿ ಬೆಂಗಳೂರು-ಹೈದರಾಬಾದ್ ರೈಲು ಸೇವೆಯಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ವ್ಯತ್ಯಯವಾಗಿದೆ.
ರಂಗಾರೆಡ್ಡಿ ಜಿಲ್ಲೆಯ ನಾಗುಲಾಪಲ್ಲಿ-ಶಂಕರ್ಪಲ್ಲಿ ಮಾರ್ಗದಲ್ಲಿ ರೈಲ್ವೆ ಟ್ರ್ಯಾಕ್ ಮೇಲೆ ಯುವತಿ ಕಾರು ಚಲಾಯಿಸಿದ್ದಾಳೆ. ಪರಿಣಾಮವಾಗಿ ಕೆಲಕಾಲ ರೈಲು ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.
ಶಂಕರಪಲ್ಲಿ ಬಳಿ ಇದನ್ನು ಗಮನಿಸಿದ ಸ್ಥಳೀಯರು, ರೈಲ್ವೆ ಸಿಬ್ಬಂದಿ ಕೆಲಕಾಲ ಪೇಚಿಗೆ ಸಿಲುಕಿದ್ದರು. ಕೆಲಕಾಲ ಆತಂಕ ಸೃಷ್ಟಿಯಾಯ್ತು. ಅದೇ ಸಮಯಕ್ಕೆ ಆ ನಿಲ್ದಾಣದ ಮೂಲಕ ಚಲಿಸಬೇಕಿದ್ದ ರೈಲು ಅಲ್ಲಿಗೆ ಬಂದು ಸೇರುವಲ್ಲಿತ್ತು. ರೈಲ್ವೆ ಸಿಬ್ಬಂದಿ ಮಾಹಿತಿ ಮೇರೆಗೆ ಬೆಂಗಳೂರು-ಹೈದರಾಬಾದ್ ರೈಲಿನ ಲೋಕೋ ಪೈಲಟ್ಗೆ ಮಾಹಿತಿ ರವಾನಿಸಲಾಯ್ತು. ಆ ಬಳಿಕ ಕೆಲಕಾಲ ಮಧ್ಯದಲ್ಲೇ ರೈಲು ನಿಲ್ಲಿಸಲಾಯ್ತು.
ರೈಲ್ವೆ ಸಿಬ್ಬಂದಿ ಹಾಗೂ ಬೆಂಗಳೂರು-ಹೈದರಾಬಾದ್ ಲೋಕೋಪೈಲಟ್ ಯುವತಿಯನ್ನು ಕಾರಿನಿಂದ ಕೆಳಗಿಸಲು ಹರಸಾಹಸವನ್ನೇ ಪಟ್ಟಿದ್ದಾರೆ. ಕಾರಿನಿಂದ ಇಳಿಯಲು ಒಪ್ಪದಿದ್ದಾಗ ಕೊನೆಗೆ ಯುವತಿಯನ್ನು ಬಲವಂತವಾಗಿ ಕೆಳಗಿಳಿಸಿ, ಹತ್ತಿರದ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ.
- ರೌಡಿ ಬಿಕ್ಲು ಶಿವ ಕೊಲೆ ಪ್ರಕರಣ : ಬಿಜೆಪಿ ಶಾಸಕ ಬೈರತಿ ಬಸವರಾಜ್ ಜಾಮೀನು ಅರ್ಜಿ ವಜಾ
- ಇನ್ನೆಂದೂ ಬಾಬರಿ ಮಸೀದಿಯನ್ನು ಪುನರ್ನಿರ್ಮಿಸಲು ಸಾಧ್ಯವಿಲ್ಲ : ಯೋಗಿ ಆದಿತ್ಯನಾಥ್
- ಲವ್ ಪ್ರಪೋಸಲ್ ಒಪ್ಪದ ಸಹಪಾಠಿಗೆ ತರಗತಿಯೊಳಗೇ ಗುಂಡಿಕ್ಕಿ ಕೊಂದು ಆತ್ಮಹತ್ಯೆಗೆ ಶರಣಾದ ಯುವಕ
- ಚಂದ್ರಯಾನ-4 ಲ್ಯಾಂಡಿಂಗ್ಗೆ ದಕ್ಷಿಣ ಧ್ರುವದ ಬಳಿ ತಾಣ ಗುರುತಿಸಿದ ಇಸ್ರೋ
- ಬಾಲಿವುಡ್ಗೆ ಅಲ್ಲು ಅರ್ಜುನ್ ಎಂಟ್ರಿ : ಸಂಜಯ್ ಲೀಲಾ ಬನ್ಸಾಲಿ ಜೊತೆಗಿನ ಸಿನಿಮಾ ಸದ್ಯಕ್ಕೆ ಮುಂದೂಡಿಕೆ

