ಬೆಂಗಳೂರು: ಸೆಪ್ಟೆಂಬರ್ 7 ಭಾನುವಾರದಂದು ರಾಹುಗ್ರಸ್ಥ ರಕ್ತ ಚಂದ್ರಗ್ರಹಣ ಸಂಭವಿಸಲಿದೆ. ಈ ಕಾರಣದಿಂದ ಬೆಂಗಳೂರಿನ ಗವಿಗಂಗಾಧರ ದೇವಾಲಯವನ್ನ ಕೆಲ ಸಮಯಗಳ ಕಾಲ ಬಂದ್ ಮಾಡಲಾಗುತ್ತಿದೆ ಎಂದು ಆರ್ಚಕರು ತಿಳಿಸಿದ್ದಾರೆ.
ಗ್ರಹಣದ ಸಮಯದಿಂದ ದೇವಸ್ಥಾನವನ್ನ ಕ್ಲೋಸ್ ಮಾಡುವ ವಿಚಾರವಾಗಿ ಮಾಧ್ಯಮಗಳ ಜೊತೆ ಮಾತನಾಡಿದ ಗವಿಗಂಗಾಧರ ದೇವಾಲಯದ ಪ್ರಧಾನ ಅರ್ಚಕ ಸೋಮಸುಂದರ ದೀಕ್ಷಿತ್ ಅವರು ಮಾತನಾಡಿದ್ದು, ಸಾಮಾನ್ಯವಾಗಿ ಸೂರ್ಯ ಗ್ರಹಣ ಆದರೆ ಆ ಗ್ರಹಣ ಉಂಟಾಗುವ ಕೆಲವೇ ಸಮಯದ ಮೊದಲು ದೇವಸ್ಥಾನ ಬಂದ್ ಮಾಡಿದರೆ ಸಾಕು.
ಆದರೆ ಚಂದ್ರ ಗ್ರಹಣದ ಸಮಯದಲ್ಲಿ ಈ ರೀತಿ ಮಾಡಲು ಆಗುವುದಿಲ್ಲ. ಚಂದ್ರ ಗ್ರಹಣ ಆಗುವ ಸುಮಾರು 6 ಗಂಟೆಗೂ ಮೊದಲು ದೇವಾಸ್ಥಾನವನ್ನ ಕ್ಲೋಸ್ ಮಾಡಬೇಕಾಗುತ್ತದೆ. ಈ ಕಾರಣದಿಂದ ಬೆಳಗ್ಗೆ ದೇವರಿಗೆ ಕ್ಷೀರ ನೈವೇದ್ಯ ಮಾಡಲಾಗುತ್ತದೆ. ಆ ದಿನ ಬೇರೆ ಪ್ರಸಾದ ಇರುವುದಿಲ್ಲ.
ಕೇವಲ ಬೆಳಗ್ಗೆ 11 ಗಂಟೆಯ ವರೆಗೆ ಮಾತ್ರ ದೇವರ ದರ್ಶನ ಮಾಡಲು ಅವಕಾಶ ಕೊಡಲಾಗುತ್ತದೆ. ಅದರ ನಂತರ ಕ್ಲೋಸ್ ಮಾಡಲಾಗುತ್ತದೆ. ಸಾಮಾನ್ಯವಾಗಿ ಗ್ರಹಣ ಬಿಟ್ಟ ನಂತರ ಶುದ್ಧೀಕರಣ ಮಾಡಲಾಗುತ್ತದೆ. ಆದರೆ ಚಂದ್ರ ಗ್ರಹಣದಲ್ಲಿ ಹಾಗೆ ಮಾಡಲು ಆಗುವುದಿಲ್ಲ. ಮರುದಿನ ಬೆಳಗ್ಗೆ ದೇವಸ್ಥಾನದ ಶುದ್ಧೀಕರಣ ಮಾಡಲಾಗುತ್ತದೆ. ಈ ಶೂದ್ಧೀಕರಣ ಮಾಡಿದ ನಂತರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ ಎಂದು ಹೇಳಿದ್ದಾರೆ.
ರಾಹುಗ್ರಸ್ತ ಚಂದ್ರ ಗ್ರಹದ ಕಾರಣದಿಂದ ಅನೇಕ ದೇವಾಲಯಗಳನ್ನ ಆ ದಿನ ಕ್ಲೋಸ್ ಮಾಡಲಾಗುತ್ತದೆ. ಯಾವೆಲಾ ದೇವಸ್ಥಾನಗಳನ್ನ ಬಂದ್ ಮಾಡಲಾಗುತ್ತದೆ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.

