ದೆಹಲಿ: ನಕಲಿ ಮಸಾಲೆ (Masala) ಪದಾರ್ಥಗಳನ್ನು ತಯಾರಿಸುತ್ತಿದ್ದ ಮೂವರ ಬಂಧನ, 15 ಟನ್ ವಶಪಡಿಸಿಕೊಂಡಿರುವ ಘಟನೆ ದೆಹಲಿಯಲ್ಲಿ (Delhi) ನಡೆದಿದೆ.
ದನಿಯಾ ಪುಡಿ, ಅರಿಶಿನ ಪುಡಿ ಸೇರಿದಂತೆ ಇತರೆ ನಕಲಿ ಪದಾರ್ಥಗಳನ್ನು ಮಾರಾಟ (Sale) ಮಾಡುತ್ತಿದ್ದರು. ದೆಹಲಿಯ ಕಾರವಲ್ ಮಸಾಲೆ ಪದಾರ್ಥಗಳನ್ನು ವಶಪಡಿಸಿಕೊಂಡಿದ್ದು, ಈ ಸಂಬಂಧ ಸಂಸ್ಕರಣಾ ಘಟಕದ ಮಾಲೀಕ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಬ್ರೆಜಿಲ್ನಲ್ಲಿ ಹೆಚ್ಚಿದ ಪ್ರವಾಹ -ಸಾವಿನ ಸಂಖ್ಯೆ 78ಕ್ಕೆ ಏರಿಕೆ, 105 ಮಂದಿ ನಾಪತ್ತೆ!
ಖಚಿತ ಮಾಹಿತಿ ಮೇರೆಗೆ ಮೇ 1 ರಂದು ದಾಳಿ ನಡೆಸಲಾಯಿತು. ಕಾರ್ಯಾಚರಣೆಯ ಸಮಯದಲ್ಲಿ, ಸಿಂಗ್ ಸಂಸ್ಕರಣಾ ಘಟಕಗಳಲ್ಲಿ ಒಂದನ್ನು ನಿರ್ವಹಿಸುತ್ತಿರುವುದು ಕಂಡುಬಂದಿದೆ, ಅಲ್ಲಿ ಅವರು ಹಾಳಾದ ಎಲೆಗಳಂತಹ ಖಾದ್ಯವಲ್ಲದ ಮತ್ತು ನಿಷೇಧಿತ ವಸ್ತುಗಳನ್ನು ಬಳಸಿ ಕಲಬೆರಕೆ ಅರಿಶಿನವನ್ನು ಉತ್ಪಾದಿಸುತ್ತಿದ್ದರು, ಅಕ್ಕಿ, ರಾಗಿ, , ಮೆಣಸಿನಕಾಯಿ, ಆಮ್ಲಗಳು ಮತ್ತು ತೈಲಗಳು ಪತ್ತೆಯಾಗಿವೆ. ಇದನ್ನೂ ಓದಿ: ಇದೆಂಥಾ ದುರ್ವಿಧಿ.. ನೀರು ತರಲು ಹೋದವರು ನೀರು ಪಾಲು – ಇಬ್ಬರು ಸಾವು
ಸ್ಥಳದಿಂದ ಪಾರಾಗಲು ಯತ್ನಿಸಿದ ಸಿಂಗ್ ಹಾಗೂ ಸರ್ಫರಾಜ್ ಇಬ್ಬರನ್ನೂ ಬಂಧಿಸಿ ವಿಚಾರಣೆಗೆ ಒಳಪಡಿಸಲಾಯಿತು. ಸಿಂಗ್ ತಾನು ಉತ್ಪಾದನಾ ಘಟಕದ ಮಾಲೀಕ ಎಂದು ಒಪ್ಪಿಕೊಂಡಿದ್ದಾರೆ. ನಂತರ ಕರವಾಲ್ ನಗರದಲ್ಲಿರುವ ಮತ್ತೊಂದು ಸಂಸ್ಕರಣಾ ಘಟಕವನ್ನು ಸಹ ಮುಚ್ಲಾಯಿತು.ಇದನ್ನೂ ಓದಿ: ಚುನಾವಣೆ ಹೊತ್ತಲ್ಲಿ ಇಡಿ ಭರ್ಜರಿ ಬೇಟೆ- ಕಾಂಗ್ರೆಸ್ ಸಚಿವನ ಆಪ್ತ ಕಾರ್ಯದರ್ಶಿ ಮನೆಯಲ್ಲಿ ಕಂತೆ ಕಂತೆ ನೋಟು ಪತ್ತೆ
.

