–ಒಂದು ಲಕ್ಷ ಲೀಡ್ ಬರ್ತಿದ್ದಂತೆ ಮತ ಎಣಿಕೆ ಕೇಂದ್ರದ ಬಳಿ ಬಂದ ತೇಜಸ್ವಿ ಸೂರ್ಯ
ನವದೆಹಲಿ: ಲೋಕಸಭಾ ಚುನಾವಣೆಯ ಮತ ಹೆಣಿಕೆ ನಡೆಯುತ್ತಿದ್ದು NDA ಮತ್ತು INDIA ಒಕ್ಕೂಟದ ನಡುವೆ ಫೈಟ್ ಟೈಟ್ ಆಗಿದೆ.
ಪಶ್ಚಿಮ ಬಂಗಾಳದಲ್ಲಿ ಉತ್ತಮವಾಗಿ ಗೆಲ್ಲಬಹುದು ಎಂಬ ವಿಶ್ವಾಸವನ್ನು ಬಿಜೆಪಿ ಹೊಂದಿತ್ತು. ಆದರೆ ಇದೀಗ ಅತೀ ದೊಡ್ಡ ಹೊಡೆತವನ್ನ ಬಿಜೆಪಿ ಕಂಡಿದೆ. ಬಿಜೆಪಿ ಕೇವಲ 10 ಸಿಟಿಗೆ ಇಳಿದಿದೆ. ಪಶ್ಚಿಮ ಬಂಗಾಳ ರಾಜಕೀಯ ಸಾಕಷ್ಟು ಜಿದ್ದಾ ಜಿದ್ದಿಗೆ ಕಾರಣವಾಗತ್ತು. ಇದನ್ನೂ ಓದಿ: ಲೋಕಸಭಾ ಚುನಾವಣಾ ಫಲಿತಾಂಶ ಹಿನ್ನೆಲೆ – ಆದಿಚುಂಚನಗಿರಿ ಮಠದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಹೆಚ್ಡಿಕೆ
ಇನ್ನು ಕರ್ನಾಟಕದಲ್ಲಿ ಬೀದರ್, ಬಳ್ಳಾರಿ, ಕೊಪ್ಪಳ, ದಾವಣಗೆರೆ, ಚಾಮರಾಜನಗರ, ಚಿಕ್ಕೋಡಿ, ಕಲಬುರ್ಗಿ ಮತ್ತು ರಾಯಚೂರಿನಲ್ಲಿ ಬಿಜೆಪಿ ಸೋಲುತ್ತದೆ ಎಂಬುದು ಸದ್ಯದ ಟ್ರೆಂಡ್ ಆಗಿದೆ. ಜೊತೆಗೆ ಒಂದು ಲಕ್ಷ ಲೀಡ್ ಬರ್ತಿದ್ದಂತೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ತೇಜಸ್ವಿ ಸೂರ್ಯ ಅವರು ಮತ ಎಣಿಕೆ ಕೇಂದ್ರದ ಬಳಿ ಬಂದಿದ್ದಾರೆ. ಇದನ್ನೂ ಓದಿ: ವಿಜಯೋತ್ಸವಕ್ಕೆ ಬಿಜೆಪಿ ಭರ್ಜರಿ ಸಿದ್ಧತೆ- ಪಾಟ್ನಾದಲ್ಲಿ 400 ಕೆಜಿ ಲಡ್ಡು ಸಿದ್ಧ

