ಬೆಳಗಾವಿ:ರಾಷ್ಟ್ರೀಯ ಸ್ವಯಂ ಸೇವಾಸಂಘ (RSS) ರಾಷ್ಟ್ರೀಯ ಸಂಚಾಲಕ ಮೋಹನ್ ಭಾಗವಾತ ನಾಳೆ ಬೆಳಗಾವಿಗೆ ಆಗಮಿಸಲಿದ್ದಾರೆ.
ಅಂತಾರಾಷ್ಟ್ರೀಯ ಗುರುಗಳಾದ ಶ್ರೀ ಆರ್. ಡಿ. ರಾನಡೆ ಅವರಿಂದ 1924ರಲ್ಲಿ ಪುಣೆಯಲ್ಲಿ ಸಂಸ್ಥಾಪಿತ, ನಂತರ 1952ರಲ್ಲಿ ಇಲ್ಲಿನ ಹಿಂದವಾಡಿಯಲ್ಲಿ ಕಾರ್ಯಾರಂಭ ಮಾಡಿದ ‘ಕಂಪೇರೇಟಿವ್ ಫಿಲಾಸಫಿ ಆ್ಯಂಡ್ ರಿಲಿಜನ್’ ಅಕಾಡೆಮಿಯ 100ವರ್ಷದ ಆಚರಣೆ ನಿಮಿತ್ತ ಭಾಗವತ್ ಆಗಮಿಸಲಿದ್ದಾರೆ.
ಧಾರ್ಮಿಕ, ಉತ್ತೇಜನಾತ್ಮಕ, ಸೃಜನಶೀಲ ಕಾರ್ಯಕ್ರಮಗಳು ಆ. 1ರಿಂದ ಮೂರು ದಿನ ನಡೆಯಲಿವೆ. ಮೋಹನ್ ಭಗವತ್ ಶತಮಾನೋತ್ಸವ ಉದ್ಘಾಟಿಸಲಿದ್ದಾರೆ. ಸಾವಿರಾರು ಶೃದ್ಧಾಳುಗಳು ರಾನಡೆ ಮಂದಿರದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.

