ಕುಣಿಗಲ್ : ಕೆನರಾ ಬ್ಯಾಂಕಿನ ನಕಲಿ ಸೀಲ್ ಬಳಸಿ ಪುರಸಭೆಗೆ ಸೇರಬೇಕಾಗಿದ್ದ ತೆರಿಗೆ ಹಣವನ್ನು ದುರುಪಯೋಗ ಪಡಿಸಿಕೊಂಡು,ವಂಚನೆ ಮಾಡಿದ ಅಸಾಮಿ ನಕಲಿ ಪತ್ರಕರ್ತ, ಇನ್ನು ಅನೇಕ ಸದಸ್ಯರುಗಳು ಹಾಗೂ ಅಧಿಕಾರಿಗಳು ಶಾಮಿರಾಗಿದ್ದಾರೆಂದು ಸಾರ್ವಜನಿಕರ ಮನೆ ಮಾತಾಗಿದ್ದು, ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ತಪ್ಪು ಮಾಡಿದವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು, ಎಂದು ವಿರೋಧ ಪಕ್ಷದ ನಾಯಕರು ಸದಸ್ಯರುಗಳು ಪುರಸಭೆ ಮುಖ್ಯಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು,
ಕುಣಿಗಲ್ ಪುರಸಭೆ ಸಂಪೂರ್ಣ ಅವ್ಯವಸ್ಥೆಯಾಗಿದ್ದು, ಈ ಹಿಂದೆಯೂ ಕೂಡ ಸಾಮಾನ್ಯ ಸಭೆಯಲ್ಲಿ ನಾನು ದಲ್ಲಾಳಿಗಳ ಹಾವಳಿಯನ್ನು ತಪ್ಪಿಸಬೇಕು ಎಂದು ಮಾತನಾಡಿದ್ದರು, ಕೂಡ ಎಚ್ಚೆತ್ತುಕೊಳ್ಳದ ಅಧಿಕಾರಿಗಳು ಬೇಜವಾಬ್ದಾರಿತನ ತೋರಿರುವುದು ಎದ್ದು ಕಾಣುತ್ತಿದೆ ಇದರ ಸಂಪೂರ್ಣ ಹೊಣೆಯನ್ನು ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಹೊರಬೇಕು ಎಂದು ತಿಳಿಸಿದರು, ನ್ಯಾಷನಲ್ ಬ್ಯಾಂಕ್ ನ ಸೀಲ್ ಬಳಸಿದ್ದಾರೆ ಎಂದರೆ ಇವರು ಎಂತ ಡಕಾಯಿತರು ಎಂದು ಊಹೆ ಮಾಡಲು ಸಾಧ್ಯವಿಲ್ಲ, ಎಂದು ಮಾತನಾಡಿದರು, ವಿರೋಧ ಪಕ್ಷದ ನಾಯಕರಾದ “ಕೃಷ್ಣ” ರವರು ಪುರಸಭೆ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು,,
ವರದಿ ನರಸಿಂಹರಾಜು

