ಡಾಕಾ : ಬಾಂಗ್ಲಾದೇಶದ ಮಧ್ಯಂತರ ಸರ್ಕಾರ ನೋಟುಗಳಲ್ಲಿರುವ ‘ಬಂಗಬಂಧು’ ಶೇಖ್ ಮುಜಿಬುರ್ ರೆಹಮಾನ್ ಅವರ ಚಿತ್ರ ತೆಗೆದುಹಾಕುತ್ತಿದೆ. ಕೇಂದ್ರೀಯ ಬ್ಯಾಂಕ್ ಪ್ರಕಾರ, ಮಧ್ಯಂತರ ಸರ್ಕಾರದ ಸೂಚನೆಗಳ ಮೇರೆಗೆ ಟಕಾ 20, 100, 500 ಮತ್ತು 1,000 ರ ನೋಟುಗಳನ್ನು ಮುದ್ರಿಸಲಾಗುತ್ತಿದೆ.
ಹೊಸ ಕರೆನ್ಸಿ ನೋಟುಗಳು ‘ಬಂಗಬಂಧು’ ಶೇಖ್ ಮುಜಿಬುರ್ ರೆಹಮಾನ್ ಅವರ ಚಿತ್ರವನ್ನು ಒಳಗೊಂಡಿರುವುದಿಲ್ಲ ಎಂದು ಬ್ಯಾಂಕ್ ನ್ನು ಉಲ್ಲೇಖಿಸಿ ಪತ್ರಿಕೆ ವರದಿ ಮಾಡಿದೆ. ಧಾರ್ಮಿಕ ರಚನೆಗಳು, ಬಂಗಾಳಿ ಸಂಪ್ರದಾಯಗಳು ಮತ್ತು ಜುಲೈ ದಂಗೆಯ ಸಮಯದಲ್ಲಿ ಚಿತ್ರಿಸಿದ ‘ಗೀಚುಬರಹ’ಗಳನ್ನು ಕರೆನ್ಸಿ ನೋಟುಗಳಲ್ಲಿ ಸೇರಿಸಲಾಗುವುದು ಎಂದು ಪತ್ರಿಕೆ ಹೇಳಿದೆ.
ಮುಂದಿನ ಆರು ತಿಂಗಳೊಳಗೆ ಹೊಸ ನೋಟು ಮಾರುಕಟ್ಟೆಗೆ ಬಿಡುಗಡೆಯಾಗಬಹುದು ಎಂದು ನಾನು ಭಾವಿಸುತ್ತೇನೆ’ ಎಂದು ಬಾಂಗ್ಲಾದೇಶ ಬ್ಯಾಂಕ್ ಕಾರ್ಯನಿರ್ವಾಹಕ ನಿರ್ದೇಶಕ ಹುಸ್ನೇರಾ ಶಿಖಾ ಹೇಳಿದ್ದಾರೆ. ವಿವಾದಾಸ್ಪದ ಉದ್ಯೋಗ ಕೋಟಾದ ವಿರುದ್ಧ ನಡೆದ ಪ್ರತಿಭಟನೆಯ ಸಮಯದಲ್ಲಿ, ರಾಷ್ಟ್ರಪಿತ ಎಂದು ಕರೆಯಲ್ಪಡುವ ಶೇಖ್ ಮುಜೀಬ್ ಅವರ ಪ್ರತಿಮೆಗಳು ದಾಳಿಗೆ ಒಳಗಾಯಿತು. ಅವರ ಮಗಳು, ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಭಾರತಕ್ಕೆ ಆಗಮಿಸಿ ಆಶ್ರಯ ಪಡೆದಿದ್ದಾರೆ.

