ಬೆಂಗಳೂರು: ಮಾಲಿನ್ಯ ನಿಯಂತರಣ ಮಂಡಳಿ ಜಾಲಿವುಡ್ ಸ್ಟುಡಿಯೋಗೆ ಬೀಗ ಹಾಕಿದ ಕಾರಣದಿಂದ ಬಿಗ್ಬಾಸ್ ಶೋಗೆ ಸಹ ತೊಂದರೆ ಆಗಿತ್ತು. ಆದರೆ ಇದೀಗ ಮತ್ತೆ ಶೂಟಿಂಗ್ ಶುರುವಾಗಿದ್ದು, ಬಿಗ್ಬಾಸ್ ಸ್ಪರ್ಧಿಗಳು ಮನೆಯ ಒಳಗೆ ಬರುತ್ತಿರುವ ವಿಡಿಯೋವನ್ನ ಶೋ ನಡೆಯುತ್ತಿರುವ ಕಲರ್ಸ್ ವಾಹಿನಿ ಬಿಡುಗಡೆ ಮಾಡಿದೆ.
ಬಿಗ್ಬಾಸ್ ಶೂಟಿಂಗ್ ನಡೆಯುತ್ತಿದ್ದ ಜಾಲಿವುಡ್ ಸ್ಟುಡಿಯೋ ಮಾಲಿನ್ಯ ನಿಯಂತ್ರಣ ಮಂಡಳಿಯ ನಿಯಮಗಳನ್ನ ಪಾಲನೆ ಮಾಡಿಲ್ಲ ಎನ್ನುವ ಕಾರಣಕ್ಕೆ ಮೊನ್ನೆ ರಾತ್ರಿ ಬೀಗ ಹಾಕಲಾಗಿತ್ತು. ಇದರಿಂದ ಬಿಗ್ಬಾಸ್ ಕಾರ್ಯಕ್ರಮಕ್ಕೆ ಸಹ ತೊಂದರೆ ಆಗಿತ್ತು. ಶೂಟಿಂಗ್ ಸಹ ನಿಲ್ಲಿಸಲಾಗಿತ್ತು. ಅಲ್ಲದೇ, ಬಿಗ್ಬಾಸ್ ಸ್ಪರ್ಧಿಗಳನ್ನ ಮನೆಯಿಂದ ಹೊರೆಗ ಕಳುಹಿಸಿ ಬಿಡದಿಯ ಈಗಲ್ ಟನ್ ರೆಸಾರ್ಟ್ನಲ್ಲಿ ಇರಿಸಲಾಗಿತ್ತು. ಇದೀಗ ಡಿಸಿಎಂ ಡಿಕೆ ಸಿವಕುಮಾರ್ ಅವರ ಸೂಚನೆಯ ಮೇರೆಗೆ ಸ್ಟುಡಿಯೋ ಓಪನ್ ಮಾಡಲಾಗಿದ್ದು, ಮತ್ತೆ ಶೂಟಿಂಗ್ ಶುರು ಮಾಡಲಾಗಿದೆ. ಈ ಬಗ್ಗೆ ವಾಹಿನಿ ಪ್ರೋಮೋ ಒಂದನ್ನ ರಿಲೀಸ್ ಮಾಡಿದೆ.
ವಾಹಿನಿ ಬಿಡುಗಡೆ ಮಾಡಿರುವ ಪ್ರೋಮೋದಲ್ಲಿ ಬಿಗ್ಬಾಸ್ 17 ಸ್ಪರ್ಧಿಗಳು ಬಿಗ್ಬಾಸ್ ಮನೆಯ ಮುಖ್ಯದ್ವಾರದ ಮೂಲಕ ಎಂಟ್ರಿ ಕೊಡುತ್ತಿರುವುದನ್ನ ನೋಡಬಹುದಾಗಿದೆ. ಮಂಗಳವಾರ ರಾತ್ರಿ 7 ಗಂಟೆಯಿಂದ ಗುರುವಾರದವರೆಗೆ ರೆಸಾರ್ಟ್ನಲ್ಲಿ ಇದ್ದ ಸ್ಪರ್ಧಿಗಳು ಮತ್ತೆ ಮರಳಿ ಮನೆಗೆ ಬಂದಿದ್ದಾರೆ. ಈ ವಿಡಿಯೋದಲ್ಲಿ ಸ್ಪರ್ಧಿಗಳನ್ನ ಬಿಗ್ಬಾಸ್ ವೆಲ್ಕಮ್ ಎಂದು ಹೇಳುವ ಮೂಲಕ ಎಲ್ಲರನ್ನ ಸ್ವಾಗತ ಮಾಡಲಾಗಿದೆ.
ಜಾಲಿವುಡ್ ಸ್ಟುಡಿಯೋ ಸೀಲ್ ತೆರೆಯುವಂತೆ ನಿರ್ದೇಶಿಸಿರುವ ಡಿ.ಕೆ ಶೀವಕುಮಾರ್ಗೆ ನಟ ಸುದೀಪ್ ಧನ್ಯವಾದ ಹೇಳಿದ್ದಾರೆ. ಮಾನ್ಯ ಡಿ.ಕೆ ಶಿವಕುಮಾರ್ ಸರ್ ಅವರ ಸಮಯೋಚಿತ ಸಹಾಯಕ್ಕಾಗಿ ಹೃತ್ಪೂರ್ವಕ ಧನ್ಯವಾದಗಳು. ಇತ್ತೀಚಿನ ಗೊಂದಲಗಳ ಜೊತೆ #BBK ಯಾವುದೇ ರೀತಿಯಲ್ಲಿ ಸಂಬಂಧ ಹೊಂದಿರಲಿಲ್ಲ ಎಂಬುದನ್ನು ಗುರುತಿಸಿ, ಸ್ಪಷ್ಟಪಡಿಸಿದ ಸಂಬಂಧಿತ ಅಧಿಕಾರಿಗಳಿಗೆ ಸಹ ಧನ್ಯವಾದಗಳು.
ನನ್ನ ಕರೆಗೂ ತಕ್ಷಣ ಸ್ಪಂದಿಸಿದ ಉಪಮುಖ್ಯಮಂತ್ರಿಗೆ ಹೃತ್ಪೂರ್ವಕ ಕೃತಜ್ಞತೆಗಳು. ತಮ್ಮ ನಿಷ್ಠಾವಂತ ಪ್ರಯತ್ನಗಳಿಗೆ #Nalpad ಅವರಿಗೆ ಸಹ ವಿಶೇಷ ಧನ್ಯವಾದಗಳು ಎಂದೂ ಸಹ ಹೇಳಿದ್ದಾರೆ.
ಸ್ಟುಡಿಯೋ ಓಪನ್ ಮಾಡಿದ್ದ ವಿರೋಧಿಸಿ ಪ್ರತಿಭಟನೆ ಮಾಡುತ್ತಿದ್ದ ಕನ್ನಡಪರ ಸಂಘಟನೆಯ ಕಾರ್ಯಕರ್ತರನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ನಿಯಮಗಳನ್ನ ಅನುಸರಿಸದ ಕಾರಣ ಸ್ಟುಡಿಯೋಗೆ ಬೇಗ ಹಾಕಲಾಗಿತ್ತು. ಆದರೆ ಈಗ ಅನುಮತಿ ಕೊಡಲಾಗಿದೆ. ಇದು ಕಾರ್ಯರ್ತರ ಆಕ್ರೋಶಕ್ಕೆ ಕಾರಣವಾಗಿದ್ದು, ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಜಿಲ್ಲಾಡಳಿತ ವಿರುದ್ಧ ಧಿಕ್ಕಾರ ಕೂಗಿದ್ದು, ಪ್ರತಿಭಟನೆ ಮಾಡುತ್ತಲೇ ಕೆಲ ಕಾರ್ಯಕರ್ತರು ಏಕಾಏಕಿ ಜಾಲಿವುಡ್ ಸ್ಟುಡಿಯೋ ಒಳಗೆ ಪ್ರವೇಶ ಮಾಡಿದ್ದು, ಮಹಿಳೆಯರು ಗೇಟ್ ಹತ್ತಿದ್ದರು. ಈ ಕಾರಣದಿಂದ ಪೊಲೀಸರು ಪ್ರತಿಭಟನೆ ಮಾಡುತ್ತಿದ್ದ ಕಾರ್ಯಕರ್ತರನ್ನ ವಶಕ್ಕೆ ಪಡೆದುಕೊಂಡಿದ್ದಾರೆ.

