ಬೆಂಗಳೂರು: ತುರ್ತುಪರಿಸ್ಥಿತಿಗೆ ಕುರಿತು ಕಾಂಗ್ರೆಸ್ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಇದೀಗ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಬಿಜಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ತುರ್ತುಪರಿಸ್ಥಿತಿಗೆ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಕ್ಷಮೆಗೆ ಬಿಜೆಪಿ ಆಗ್ರಹ ವಿಚಾರಕಕೆ ಪ್ರತಿಕ್ರಿಯಿಸಿ, ದೇಶದಲ್ಲಿ ಜ್ವಲಂತ ಸಮಸ್ಯೆಗಳು ಹಲವಾರು ಇವೆ. ಇರುವ ಹಲವಾರು ಸಮಸ್ಯೆಗಳಿಗೆ ಪರಿಹಾರ ಆಗಬೇಕಿದೆ ಎಂದರು. ಇದನ್ನೂ ಓದಿ: ಪುಣೆ ಪೋರ್ಶೆ ಕಾರು ಅಪಘಾತ- ಪ್ರಕರಣದ ಅಪ್ರಾಪ್ತ ಆರೋಪಿಗೆ ಜಾಮೀನು
ನೀಟ್ ನಂಥ ಪರೀಕ್ಷೆಗಳನ್ನ ಮಾಡಿ ಮಕ್ಕಳ ಭವಿಷ್ಯ ಹಾಳು ಮಾಡ್ತಿದ್ದಾರೆ. ಉದ್ಯೋಗ ಸಮಸ್ಯೆಗಳು ಇವೆ. ಆದರೆ ಇವೆಲ್ಲ ಬಿಟ್ಟು ಐವತ್ತು ವರ್ಷಗಳ ಹಿಂದಿನ ತುರ್ತುಪರಿಸ್ಥಿತಿ ಬಗ್ಗೆ ಇವತ್ತು ಅವರು ಮಾತಾಡ್ತಿದ್ದಾರೆ. ಬಿಜೆಪಿಯವರಿಗೆ ಜನ, ದೇಶ, ದೇಶದ ಭವಿಷ್ಯ ಬಗ್ಗೆ ಕಾಳಜಿ ಇಲ್ಲ. ನಮ್ಮ ದೇಶವನ್ನ ಬ್ರಿಟಿಷರು ಇನ್ನೂರು ವರ್ಷ ದೇಶ ಆಳಿ ಹೋಗಿದ್ದಾರೆ. ಹಾಗೆ ನೋಡಿದರೆ ಬ್ರಿಟಿಷರಿಂದಲೂ ಕ್ಷಮೆ ಕೇಳಿಸಬೇಕು. ಇಲ್ಲಿ ಬಂದು ಆಳಿದ್ರಿ, ನಮ್ಮ ಸಂಪತ್ತು ತಗೊಂಡ್ ಹೋದ್ರಿ, ಕ್ಷಮೆ ಕೇಳಿ ಅಂತ ಬ್ರಿಟಿಷರಿಗೂ ಹೇಳಬೇಕಾಗುತ್ತದೆ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಸನಾತನ ಧರ್ಮ ನಿರ್ಮೂಲನೆ ಹೇಳಿಕೆ ನೀಡಿದ ಸ್ಟಾಲಿನ್ಗೆ ಜಾಮೀನು ಮಂಜೂರು
ಬಿಜೆಪಿಯವ್ರು ಹಿಂದೆಲ್ಲ ಏನೆಲ್ಲ ಮಾಡಿದ್ರೋ ಅದಲ್ಲೆಲ್ಲ ಕ್ಷಮೆ ಕೇಳಿ ಅಂತ ನಾವೂ ಹೇಳಬೇಕಾಗುತ್ತದೆ. ಗೋಧ್ರಾದಲ್ಲಿ 3 ಸಾವಿರ ಜನರ ಹತ್ಯೆ ಆಯ್ತು. ಬಿಜೆಪಿಯವರು ಯಾರಾದರೂ ಕ್ಷಮೆ ಕೇಳಿದ್ದಾರಾ? ಸುಮ್ನೆ ಆಡಳಿತ ಮಾಡಲಿ ಇವರು ಎಂದು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ. ಇದನ್ನೂ ಓದಿ: ಸಿಎಂ ಭೇಟಿಯಾದ ರೇಣುಕಾಸ್ವಾಮಿ ಕುಟುಂಬ- ರೇಣುಕಾಸ್ವಾಮಿ ಪತ್ನಿಗೆ ಸರ್ಕಾರಿ ಉದ್ಯೋಗ ಕೊಡಿಸುವಂತೆ ಪೋಷಕರು ಮನವಿ

