ದೊಡ್ಡದಾದ ಕಿವಿ, ಉದ್ದನೆಯ ಸೊಂಡಿಲು, ಬೃಹದಾಕಾರದ ದೇಹ ಹೊಂದಿರುವ ಪ್ರಾಣಿಯನ್ನು ಕಂಡರೆ ಜನರಿಗೆ ಎಷ್ಟು ಭಯವೋ, ಅಷ್ಟೆ ಪ್ರೀತಿಯು ಉಂಟಾಗುತ್ತದೆ. ಈ ದಿನ ಜನರಿಗೆ ಆನೆಯ ಮಹತ್ವ ಹಾಗೂ ಅವುಗಳ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿ ಯಲ್ಲಿರುವ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ವಿಶ್ವ ಆನೆ ದಿನಾಚರಣೆಯನ್ನು ಸ್ವಾರಸ್ಯಕರವಾಗಿ ಆಚರಿಸಲಾಯಿತು.
ಉದ್ಯಾನವನ ಹಾಗೂ ಸಫಾರಿಯಲ್ಲಿ ಒಟ್ಟು 27 ಆನೆಗಳಿವೆ. ಆನೆಗಳಿಗೆ ಕಾಡಿನಲ್ಲಿ ಸಿಗದಂತಹ ವಿಶೇಷ ಖಾದ,ಗಳಾದ ಹಲಸಿನ ಹಣ್ಣು, ಕಲ್ಲಂಗಡಿ, ನೆಲಗಡಲೆಯಂತಹ ವಿಶೇಷ ಆಹಾರಗಳನ್ನು ಕಾರ್ಯನಿರ್ವಾಹಕ ನಿರ್ದೇಶಕ ವಿಶಾಲ್ ಸೂರ್ಯ ಸೇನ್, ವೈದ್ಯಾಧಿಕಾರಿ ಕಿರಣ್, ಆರ್ಎಫ್ಒ ದಿನೇಶ್, ಎಜುಕೇಷನ್ ಅಧಿಕಾರಿ ಅಮಲಾ, ಆನೆ ಮೇಲ್ವಿಚಾರಣಾ ಅಧಿಕಾರಿ ಸುರೇಶ್ ಹಾಗೂ ಸಿಬ್ಬಂದಿ ವರ್ಗ ನೇತೃತ್ವದಲ್ಲಿ ನೀಡಲಾಯಿತು.
ಮೃಗಾಲಯದ ಸ್ವಯಂಸೇವಕರು ಆನೆಗಳ ಜೀವ ಶಾಸ್ತ್ರ, ನಡವಳಿಕೆ, ರೂಪಾಂತರಗಳು ಮತ್ತು ಅವುಗಳ ಪರಿಸರ ಮಹತ್ವದ ಕುರಿತು ಜಾಗೃತಿ ಮೂಡಿಸಿದರು. ಸಂದರ್ಶಕರಿಗೆ ಆನೆ ಟ್ಯಾಟೂವನ್ನು ಹಾಕಿ ಸಂಭ್ರಸಿದರು .. ಕುಟುಂಬದ ಬಂಧವನ್ನು ತೋರಿಸಲು ಬನ್ನೇರಘಟ್ಟ ಜೈವಿಕ ಉದ್ಯಾನವನದಲ್ಲಿರುವ ಆನೆಗಳ ವಂಶವೃಕ್ಷದ ಹಿರಿಮೆ, ಪರಿಸರದಲ್ಲಿ ಆನೆಗಳ ಸಂರಕ್ಷಣೆಯ ಬಗ್ಗೆ ಸಂದರ್ಶಕರಿಗೆ ವಿವರಿಸಲಾಯಿತು.
ಇನ್ನು ಚಿಕ್ಕ ಮಕ್ಕಳು ಆನೆಯ ಮುಂದೆ ಪೋಸು ನೀಡಿ ಸಂಭ್ರಮಿಸಿದರು. ಇತ್ತೀಚೆಗೆ ಮೂರು ಜನರನ್ನು ತುಳಿದು ಕೊಂದು ಹಾಕಿದ್ದ ಮಕ್ನಾ ಆನೆಯನ್ನು ಬನ್ನೇರಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಎಂಟು ಸಾಕಾನೆಗಳ ಸಹಾಯದಿಂದ ಕಾರ್ಯಾಚರಣೆ ನಡೆಸಿ ಸೆರೆ ಹಿಡಿದು ಸೀಗೆ ಕಟ್ಟೆಯ ಶಿಬಿರಕ್ಕೆ ಸ್ಥಳಾಂತರಿಸಿ ಮಾನವ ಆನೆಗಳ ಸಂಘರ್ಷಕ್ಕೆ ಕಡಿವಾಣ ಈ ಹಾಕಿದ್ದನ್ನು ಸ್ಮರಿಸಬಹುದಾಗಿದೆ.

